ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಮುಂಭಡ್ತಿ. ಹಲವಾರು ಅಧಿಕಾರಿಗಳ ವರ್ಗಾವಣೆ.

Twitter
Facebook
LinkedIn
WhatsApp
ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಮುಂಭಡ್ತಿ. ಹಲವಾರು ಅಧಿಕಾರಿಗಳ ವರ್ಗಾವಣೆ.

ಬೆಂಗಳೂರು : ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದ ಪೊಲೀಸ್ ಇಲಾಖೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ನಗರ ಪೊಲೀಸ್ ಆಯುಕ್ತರ ಬದಲಾವಣೆಯಾಗುತ್ತೆ ಎಂಬ ಚರ್ಚೆಯ ನಡುವೆಯೂ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ವರ್ಗಾವಣೆಯನ್ನು ಹೊಸ ವರ್ಷದ ಕೊಡುಗೆಯಾಗಿ ನೀಡಿದೆ.ರಾಜ್ಯದ ಪೊಲೀಸ್ ಇಲಾಖೆಗೆ ಹೊಸ ವರ್ಷದ ಹೊಸ್ತಿಲಿನಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿ ( IPS Officers Promotions) ಮಾಡಿದ್ದು 16 ಹಿರಿಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ. ಮಾತ್ರವಲ್ಲ ಅಚ್ಚರಿಯ ಬೆಳವಣಿಗೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥರನ್ನು ಮುಂದುವರಿಸಲು ನಿರ್ಧರಿಸಿದೆ.

ಇಂದೇ ನಗರಕ್ಕೆ ಹೊಸ ಆಯುಕ್ತರ ನೇಮಕವಾಗಲಿದೆ ಎನ್ನಲಾಗಿತ್ತು. ಅಲ್ಲದೇ ಈ ಸ್ಥಾನಕ್ಕೆ ಅಧಿಕಾರಿಗಳಾದ ದಯಾನಂದ್, ಅಲೋಕ್ ಕುಮಾರ್ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ದಿಢೀರ್ ಐಪಿಎಸ್ ವರ್ಗಾವಣೆ ಲಿಸ್ಟ್ ಹೊರಬಂದಿದೆ. ಎಸ್.ಮುರುಗನ್ ಅವರಿಗೆ ಮುಂಬಡ್ತಿ ನೀಡಲಾಗಿದ್ದು, ಪೊಲೀಸ್ ಕಮ್ಯುನಿಕೇಶನ್ ಹಾಗೂ ಲಾಜಿಸ್ಟಿಕ್ ಗೆ ನಿಯುಕ್ತಿಗೊಳಿಸಲಾಗಿದೆ. ಕೆ.ವಿ.ಶರತಶ್ಚಂದ್ರ ಎಡಿಜಿಪಿಯಾಗಿ ಮುಂಬಡ್ತಿ ಪಡೆದಿದ್ದು, ಸಿಐಡಿ ಎಡಿಜಿಪಿಯಾಗಿ ನೇಮಿಸಲಾಗಿದೆ. ಸೌಮೇಂದು ಮುಖರ್ಜಿ ಐಜಿಪಿಇಂಟಲಿಜನ್ಸ್ ಐಜಿಪಿಯಾಗಿ, ರವಿ.ಎಸ್.ಕೆಎಸ್ಆರ್ಪಿ ಐಜಿಪಿಯಾಗಿ ನೇಮಿಸಲಾಗಿದೆ.

ಐಜಿಪಿ ಎಸ್ಡಿಯಾಗಿ ವಿಪುಲ್ ಕುಮಾರ್ , ಡಾ.ಸುಬ್ರಹ್ಮಣ್ಯ ರಾವ್ ಪೂರ್ವ ವಿಭಾಗ ಹೆಚ್ಚುವರಿ ಆಯುಕ್ತರಾಗಿ ಅದೇಶ ಹೊರಡಿಸಲಾಗಿದ್ದು, ಲಾಭೂರಾಮ್ ಅವರನ್ನು ಐಜಿಪಿ ಮುಂಬಡ್ತಿಯೊಂದಿಗೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಆಗಿ ಮುಂದುವರೆಸಲಾಗಿದೆ. ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್ ರನ್ನು ನೇಮಿಸಲಾಗಿದ್ದು, ಪಿ.ಎಸ್.ಹರ್ಷ ಅವರಿಗೆ ಮುಂಬಡ್ತಿ ನೀಡಿ ವಾರ್ತಾ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ವಿಕಾಸ್ ಕುಮಾರ್ ಐಜಿಪಿಯಾಗಿ, ರಮಣಗುಪ್ತ ಡಿಐಜಿ ಸಿಸಿಬಿ, ಬೋರಲಿಂಗಯ್ಯ ಡಿಐಜಿ ಬೆಳಗಾವಿ, ರೋಹಿಣಿ ಸೆಪಟ್ ಡಿಐಜಿಯಾಗಿ ಮುಂಬಡ್ತಿ, ರಾಮ್ ಸೆಪಟ್ ನ್ಯಾಶನಲ್ ಅಕಾಡೆಮಿಯಲ್ಲೇ ಮುಂದುವರಿಸಲಾಗಿದೆ.

ಇದಲ್ಲದೇ ಇನ್ನಷ್ಟು ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ವರ್ಗಾವಣೆಯಾದ ಅಧಿಕಾರಿಗಳ ವಿವರ ಇಂತಿದೆ.
ಚಂದ್ರಕಾಂತ್ ಎಂ ವಿ, ಎಸ್ ಪಿ ಅರಣ್ಯ ವಿಭಾಗ ಕೊಡಗು.
ಮಧುರವೀಣಾ, ಎಸ್ ಪಿ ಸಿಐಡಿ.
ಚೆನ್ನಬಸವ ಲಂಗೋಟಿ, ಎಸ್ ಪಿ ಇಂಟಲಿಜೆನ್ಸ್ ಬೆಳಗಾವಿ.
ಜಯಪ್ರಕಾಶ್, ಎಸ್ ಪಿ ಎಸಿಬಿ ದಾವಣಗೆರೆ.
ಅಂಜಲಿ ಕೆ ಪಿ, ಎಸ್ ಪಿ ಕರ್ನಾಟಕ ಲೋಕಾಯುಕ್ತ.
ನಾರಾಯಣ ಎಂ, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.
ಮುತ್ತುರಾಜ್, ಎಸ್ ಪಿ ಇಂಟಲಿಜೆನ್ಸ್ ಮೈಸೂರು.
ಶೇಖರ್ ಹೆಚ್ ಟೆಕ್ಕಣವರ್, ಎಸ್ ಪಿ ಐಎಸ್ ಡಿ.
ರವೀಂದ್ರ ಕಾಶಿನಾಥ್ ಗಡಾದಿ, ಎಸ್ ಪಿ ಹೆಸ್ಕಾಂ ಹುಬ್ಬಳ್ಳಿ.
ಅನಿತಾ ಬೀಮಪ್ಪ ಹದ್ದಣವರ್, ಎಸ್ ಪಿ ಲೋಕಾಯುಕ್ತ ವಿಜಯಪುರ.
ಎ ಕುಮಾರಸ್ವಾಮಿ, ಎಸ್ ಪಿ ಲೋಕಾಯುಕ್ತ ಮಂಗಳೂರು.
ಸಾರಾ ಪಾತೀಮಾ, ಎಸ್ ಪಿ ಸಿಐಡಿ.
ರಶ್ಮಿ ಪರದ್ದಿ, ಎಸ್ ಪಿ, ಚೆಸ್ಕಾಂ ಮೈಸೂರು.
ಐಯಪ್ಪ ಎಂ ಎ, ಎಸ್ ಪಿ ಕೆಪಿಸಿಎಲ್ ವಿಜಿಲೇನ್ಸ್.
ಡಾ. ಶಿವಕುಮಾರ್, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.
ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.
ಅಮರನಾಥ ರೆಡ್ಡಿ ವೈ, ಎಸ್ ಪಿ, ಎಸಿಬಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು