ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಚಾಲಕರಿಬ್ಬರ ನಡುವೆ ಗಲಾಟೆ ; ಕಾರನ್ನೇ ವ್ಯಕ್ತಿ ಮೇಲೆ ಹರಿಸಲು ಯತ್ನಿಸಿದ ಡ್ರೈವರ್.!

Twitter
Facebook
LinkedIn
WhatsApp
ಚಾಲಕರಿಬ್ಬರ ನಡುವೆ ಗಲಾಟೆ ; ಕಾರನ್ನೇ ವ್ಯಕ್ತಿ ಮೇಲೆ ಹರಿಸಲು ಯತ್ನಿಸಿದ ಡ್ರೈವರ್.!

ಬೆಂಗಳೂರು: ಈಗ ಸಣ್ಣ ಪುಟ್ಟ ಕಾರಣಕ್ಕಾಗಿ ಜಗಳಕ್ಕೆ ಇಳಿಯುವುದು, ಒಮ್ಮಿಂದೊಮ್ಮೆಗೇ ಮೈಮೇಲೆ ಬೀಳುವುದು, ದಾಳಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bangalore Traffic) ಮನುಷ್ಯ ಕೆಲವೊಮ್ಮೆ ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುವುದು ಕಾಣುತ್ತಿದೆ. ಇಲ್ಲಿ ಚಾಲಕರಿಬ್ಬರು ಯಾವುದೋ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ (Fight between drivers). ಆಗ ಸಿಟ್ಟಿಗೆದ್ದ ಒಬ್ಬ ಇನ್ನೊಬ್ಬನ ಮೇಲೆ ಕಾರನ್ನು ಹರಿಸುವ ರೀತಿಯಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಪ್ರಾಣವೇ ಹೋಗಬಹುದಾದ ರೀತಿಯಲ್ಲಿ ಕ್ರೌರ್ಯವನ್ನು ಮೆರೆದ ಚಾಲಕನನ್ನು ಪೊಲೀಸರು ಹುಡುಕುತ್ತಿದ್ದಾರೆ (viral News).

ಈ ಘಟನೆ ನಡೆದಿರುವುದು ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ (Hebbala Fly over) ಮೇಲೆ. ಕಳೆದ ನವೆಂಬರ್‌ 29ರಂದು ಬೆಳಗ್ಗೆ 8.30ರಿಂದ 9 ಗಂಟೆಯ ನಡುವೆ ಘಟನೆ ನಡೆದಿದೆ. ಇಬ್ಬರು ಚಾಲಕರ ನಡುವೆ ಯಾವುದೇ ಕಾರಣಕ್ಕೆ ಕಿರಿಕ್ ಉಂಟಾಗಿದೆ. ಆಗ ಒಬ್ಬ ಚಾಲಕನನ್ನು ಇನ್ನೊಬ್ಬ ಚಾಲಕ ಬಾನೆಟ್ ಮೂಲಕ ತಳ್ಳಿಕೊಂಡೇ ಹೋಗಿದ್ದಾನೆ.

ಇನೋವಾ ಚಾಲಕ ಹಾಗೂ ಇಟಿಯಾಸ್ ಚಾಲಕನ ನಡುವೆ ಫ್ಲೈ ಓವರ್ ಮೇಲೆ ಕಿರಿಕ್ ಉಂಟಾಗಿದೆ. ಆಗ ಇಟಿಯಾಸ್‌ ಚಾಲಕ ತನ್ನ ಕಾರಿನಿಂದ ಇಳಿದು ಇನೋವಾ ಡ್ರೈವರ್‌ ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ಇನ್ನೊವಾ ಚಾಲಕ ಇದನ್ನು ಕೇರ್‌ ಮಾಡದೆ ಮುಂದೆ ಹೋಗಲು ನೋಡಿದ್ದಾನೆ. ಆತ ಇಟಿಯಾಸ್‌ ಚಾಲಕ ಕಾರಿಗೆ ಅಡ್ಡವಾಗಿ ನಿಂತಿದ್ದಾನೆ.

ಇದನ್ನು ಗಮನಿಸಿದ ಇನೊವಾ ಚಾಲಕ ಆತ ಎದುರು ನಿಂತಿದ್ದನ್ನು ಗಮನಿಸಿಯೂ ಕಾರನ್ನು ಮೂವ್‌ ಮಾಡಿದ್ದಾನೆ. ಎದುರು ಅಡ್ಡಲಾಗಿ ನಿಂತವನನ್ನು ತಳ್ಳಿಕೊಂಡೇ ಕಾರು ಮುಂದಕ್ಕೆ ಹೋಗಿದೆ. ತುಂಬ ದೂರದವರೆಗೆ ಈ ಜಗಳ ಮುಂದುವರಿದಿದೆ. ಕೆಎ 05 ಎಎಲ್ 7999 ಇನೊವಾ ಕಾರಿನ ಚಾಲಕನೇ ಈ ರೀತಿಯಾಗಿ ಅತಿರೇಕದ ವರ್ತನೆ ಮೆರೆದಿರುವುದು.

ಈ ಎಲ್ಲ ಘಟನೆಗಳು ಮತ್ತೊಂದು ಕಾರಿನ ಡ್ಯಾಷ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇವುಗಳನ್ನು ವ್ಯಕ್ತಿಯೊಬ್ಬರು ಎಕ್ಸ್‌ ನಲ್ಲಿ ಶೇರ್‌ ಮಾಡಿದ್ದಾರೆ. ಗಲಾಟೆಯಲ್ಲಿ ಪಾಲ್ಗೊಂಡ ಎರಡೂ ಕಾರುಗಳು ಹಳದಿ ಬೋರ್ಡ್‌ನ ಕಾರುಗಳಾಗಿದ್ದು, ವಾಹನದಲ್ಲಿ ಪ್ರಯಾಣಿಕರು ಕೂಡಾ ಇದ್ದರು. ಆದರೆ, ಇಬ್ಬರೂ ಚಾಲಕರು ಜಗಳಕ್ಕೆ ಇಳಿದು ಹಠ ಸಾಧಿಸಲು ಮುಂದಾಗಿದ್ದಾರೆ.

ಇದೀಗ ಪೊಲೀಸರು ಇಬ್ಬರೂ ಚಾಲಕರನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ವಾಹನದ ನಂಬರ್‌ ಸಿಕ್ಕಿರುವುದರಿಂದ ಮಾಲಕನನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವೇನಲ್ಲ.

ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ಈ ರೀತಿ ಅತಿರೇಕದಿಂದ ವರ್ತಿಸುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಸಣ್ಣ ಜಗಳವೊಂದರ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ಕಾರಿನ ಬಾನೆಟ್‌ ಮೇಲೆ ಕುಳಿತಿದ್ದಾಗಲೇ ವಾಹನ ಚಲಾಯಿಸಿದ ಘಟನೆ ನಡೆದಿತ್ತು.

ಅದಕ್ಕಿಂತ ಮೊದಲು ಯಾವುದೋ ಕಾರಣಕ್ಕೆ ಸಂಶಯ ಬಂದು ಬೈಕನ್ನು ತಡೆದು ನಿಲ್ಲಿಸಲು ಯತ್ನಿಸಿ, ಎಳೆದು ನಿಲ್ಲಿಸಿದ ವ್ಯಕ್ತಿಯೊಬ್ಬರನ್ನು ಆ ಕಳ್ಳ ಸುಮಾರು ಒಂದು ಕಿಲೋಮೀಟರ್‌ ದೂರಕ್ಕೆ ರಸ್ತೆಯಲ್ಲಿ ದರದರನೆ ಎಳೆದುಕೊಂಡ ಹೋದ ಘಟನೆಯೂ ನಡೆದಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist