ಬಸ್ಗಳ ನಡುವೆ ಸಿಲುಕಿ ಇಬ್ಬರು ಮಹಿಳೆಯರು ಸಾವು
ತುಮಕೂರು, ಸೆ.15: ಎರಡು ಬಸ್ಗಳ ನಡುವೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದಲ್ಲಿ ಬಸ್ ಅನ್ನು ರಿವರ್ಸ್ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ (60) ಮತ್ತು ಪಂಕಜ (50) ಮೃತ ದುರ್ದೈವಿಗಳು. ಉಚಿತ ಬಸ್ ಪ್ರಯಾಣ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ಮೂಲಕ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗಲು ಏಳು ಮಹಿಳೆಯುರುಳ್ಳ ತಂಡ ಬಸ್ ನಿಲ್ದಾಣಕ್ಕೆ ಆಗಮಿಸಿತ್ತು. ಈ ತಂಡದಲ್ಲಿದ್ದ ಇಬ್ಬರು ಬಸ್ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.
ಚಿಕ್ಕಬಳ್ಳಾಪುರ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಚಾಲಕ ಗೋವಿಂದರಾಜು ಅವರು ಬಸ್ ಅನ್ನು ರಿವರ್ಸ್ ಹಾಕುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಸದ್ಯ, ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರೋಶ
ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬಸ್ಥರು ಹಾಗೂ ಸ್ನೇಹಿತರು ಆಕ್ರೋಶ ಹೊರಹಾಕಿದ್ದಾರೆ. ನಾವಿಬ್ಬರು ಮೊದಲು ಬಸ್ ಹತ್ತಲು ಹೋದೆವು. ಈ ವೇಳೆ ಚಾಲಕ ಏಕಾಏಕಿ ಹಿಂದೆ ಬಂದು ಡಿಕ್ಕಿ ಹೊಡೆದ. ನಾವು ಎಷ್ಟೇ ಕೂಗಿಕೊಂಡು ಹೇಳಿದರೂ ಚಾಲಕ ಕೇಳಿಸಿಕೊಳ್ಳಲಿಲ್ಲ. ನಾವು ಸಂಬಂಧಿದಿಕರಿಗೆ ಏನ್ ಹೇಳಬೇಕು? ಪಂಕಜಮ್ಮನೇ ರಾತ್ರಿ ನಮ್ಮನ್ನ ಗೊರವನಹಳ್ಳಿಗೆ ಹೋಗಿ ಬರೋಣ ಅಂತಾ ಹೊರಡಿಸಿದರು ಎಂದರು.
ಬೆಳಿಗ್ಗೆ 5.30 ಕ್ಕೆ ಹೊರಟಿವಿ ಮಂಡ್ಯ ಮದ್ದೂರು ಮೂಲಕ ಬೆಳಿಗ್ಗೆ 9.15 ಕ್ಕೆ ತುಮಕೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದೆವು. ಕಾಪಿ ತಿಂಡಿ ತಿನ್ನಲು ಹೋಗಬೇಕಿತ್ತು. ಬಸ್ ಸಿಗಲ್ಲ ಅಂತಾ ನಿಂತು ಬಸ್ ನೋಡಿ ಹತ್ತಲು ಹೋದಾಗ ಈ ಘಟನೆ ನಡೆದಿದೆ. ಬಸ್ ಚಾಲಕನ ಅಜಾರೂಗಕತೆಯಿಂದ ಅಪಘಾತ ಆಗಿದೆ ಎಂದರು. ತುಮಕೂರಿನ ಜಿಲ್ಲಾಸ್ಪತ್ರೆ ಶವಗಾರ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಲವರ್ ಜೊತೆ ಮದುವೆಯಾಗಿದ್ದರೆ ರಾಣಿಯಂತೆ ಇರ್ತಿದ್ದೆ, ಹಳ್ಳಿಗುಗ್ಗುನ್ನ ಮದುವೆಯಾಗಿಬಿಟ್ಟೆ ಎಂದು ಟಾರ್ಚರ್, ಮೆಟ್ರೋ ಇಂಜಿನಿಯರ್ ಸಾವಿಗೆ ಶರಣು!
ಅವರದು 9 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ, ಗುರು ಹಿರಿಯರು ನೋಡಿ ನಿಶ್ಚಯಿಸಿ ಅದ್ದೂರಿಯಾಗಿ ಮದುವೆ ಮಾಡಿದ್ದರು, ಆ ಹುಡುಗ ಕೂಡ ಜೋರಾಗಿಯೇ ಇದ್ದ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ, ಸುಮಾರು 70 ಸಾವಿರ ಸಂಬಳ ಜೊತೆಗೆ ಇರೊದಕ್ಕೆ ಕ್ವಾರ್ಟರ್ಸ್… ಹೀಗಿದ್ದರೂ ಪತ್ನಿಯ ಟಾರ್ಚರ್, ಪತ್ನಿಯೇ ಹೊಡೆದು ಬಡಿದು ಕಿರುಕುಳ ನೀಡುತ್ತಿದ್ದಳಂತೆ! ನಾನು ಯಾರನ್ನು ಲವ್ ಮಾಡಿದ್ದೆನೋ ಅವನನ್ನೇ ಮದುವೆಯಾಗಬೇಕಿತ್ತು ಅಂತಾ ವರಾತ ತೆಗೆಯುತ್ತಿದ್ದಳಂತೆ. ಜೊತೆಗೆ ನೀನು ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತಾ ಸದಾ ಅನುಮಾನಪಡುತ್ತಿದ್ದಳಂತೆ. ಹಲವು ಬಾರಿ ರಾಜೀ ಪಂಚಾಯತಿ ನಡೆಸಿದರೂ ಕೂಡ ಸುಮ್ಮನೆ ಆಗಿಲ್ಲ ಮಹಾತಾಯಿ. ಕೊನೆಗೆ ತಮ್ಮ ಸಹೋದರನಿಗೆ ಆಡಿಯೋ ಕಳಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಗಂಡ.
ಅವರದು 9 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ, ಗುರು ಹಿರಿಯರು ನೋಡಿ ನಿಶ್ಚಯಿಸಿ ಅದ್ದೂರಿಯಾಗಿ ಮದುವೆ ಮಾಡಿದ್ದರು, ಆ ಹುಡುಗ ಕೂಡ ಜೋರಾಗಿಯೇ ಇದ್ದ, ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ, ಸುಮಾರು 70 ಸಾವಿರ ಸಂಬಳ ಜೊತೆಗೆ ಇರೊದಕ್ಕೆ ಕ್ವಾರ್ಟರ್ಸ್… ಹೀಗಿದ್ದರೂ ಪತ್ನಿಯ ಟಾರ್ಚರ್, ಪತ್ನಿಯೇ ಹೊಡೆದು ಬಡಿದು ಕಿರುಕುಳ ನೀಡುತ್ತಿದ್ದಳಂತೆ! ನಾನು ಯಾರನ್ನು ಲವ್ ಮಾಡಿದ್ದೆನೋ ಅವನನ್ನೇ ಮದುವೆಯಾಗಬೇಕಿತ್ತು ಅಂತಾ ವರಾತ ತೆಗೆಯುತ್ತಿದ್ದಳಂತೆ. ಜೊತೆಗೆ ನೀನು ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಅಂತಾ ಸದಾ ಅನುಮಾನಪಡುತ್ತಿದ್ದಳಂತೆ. ಹಲವು ಬಾರಿ ರಾಜೀ ಪಂಚಾಯತಿ ನಡೆಸಿದರೂ ಕೂಡ ಸುಮ್ಮನೆ ಆಗಿಲ್ಲ ಮಹಾತಾಯಿ. ಕೊನೆಗೆ ತಮ್ಮ ಸಹೋದರನಿಗೆ ಆಡಿಯೋ ಕಳಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಗಂಡ.
ಮದುವೆಯಾದ ಬಳಿಕ ಮಂಜುನಾಥ್ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪದೇಪದೇ ಪ್ರಿಯಾಂಕಾ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ್ ಅನೇಕ ಬಾರಿ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದು,ಕುಟುಂಬದ ಹಿರಿಯರು ಮೂರ್ನಾಲ್ಕು ಬಾರಿ ರಾಜಿ ಪಂಚಾಯ್ತಿ ಸಹ ಮಾಡಿದ್ದರು..ಪತ್ನಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಂಜುನಾಥ್, ಕೊನೆಗೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಿಯಾಂಕ ಮದುವೆಗೂ ಮುನ್ನ ಮೈಸೂರಿನಲ್ಲಿ ವ್ಯಾಸಂಗ ಮಾಡೋ ವೇಳೆ ಆಕೆಗೆ ಪ್ರಿಯಕರ ಇದ್ದು, ಆತನೊಟ್ಟಿಗೆ ಮದುವೆ ಯಾಗಬಯಸಿದ್ದಳಂತೆ.. ಆದರೆ ಮಂಜುನಾಥ್ ಜೊತೆ ಮದುವೆಯಾಗಿದ್ದಕ್ಕೆ ಕುಪಿತಗೊಂಡು ನೀನು ಹಳ್ಳಿ ಗುಗ್ಗು, ನಾನು ಅವನೊಟ್ಟಿಗೆ ಮದುವೆಯಾಗಿದ್ದರೇ ರಾಣಿ ಹಾಗೆ ಇರ್ತಿದ್ದೆ ಅಂತಾ ತನ್ನ ಸಹೋದರ ರಾಕೇಶ್ ನೊಟ್ಟಿಗೆ ಸೇರಿ ಮಂಜುನಾಥ್ ಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರಂತೆ.
ಜೊತೆಗೆ, ಇತ್ತೀಚೆಗೆ ಮಂಜುನಾಥ್ ಆಕೆಯ ಸಹೋದರಿ ಪುಷ್ಪಲತಾಳ ಬಳಿ ಮನೆ ತೆಗೆದುಕೊಳ್ಳೋದಾಗಿ ಹೇಳಿ ಎರಡೆಳೆ ಚಿನ್ನದ ಸರ, ಒಡವೆಗಳನ್ನು ಸಾಲವಾಗಿ ಪಡೆದು ಹೋಗಿದ್ದನಂತೆ. ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದು, ನನಗೆ ಅವಳ ಜತೆ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಆ ಮನೆಹಾಳಿ ಕಾಟವನ್ನು ತಾಳಲಾರದೇ ನಾನು ಸಾಯುತ್ತಿದ್ದೇನೆ.
ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮಂಜುನಾಥ್ ಆಡಿಯೋ ಮೆಸೇಜ್ ಕಳುಹಿಸಿ, ಬಳಿಕ ಕುಂದೂರು ಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಮನೆ ತೆಗೆದುಕೊಳ್ಳಲು ಇತ್ತೀಚೆಗೆ ಅಕ್ಕ ಪುಷ್ಪ ಬಳಿ ಎರಡೆಳೆ ಸರ ಸೇರಿದಂತೆ ಒಡವೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದನಂತೆ, ತಮ್ಮನ ಕಳೆದುಕೊಂಡ ಅಕ್ಕನ ಆಕ್ರಂದನ ಮುಗಿಲುಮುಟ್ಟಿದೆ.
ಸದ್ಯ ಮೃತ ಮಂಜುನಾಥ್ ಪತ್ನಿ ಪ್ರಿಯಾಂಕಾ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.. ಹೆಂಡತಿಯ ಕಾಟಕ್ಕೆ ಬೇಸತ್ತ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರ್ದೈವವೇ ಸರಿ.