ಮಾನಸಿಕ ಖಿನ್ನತೆಯಿಂದಾಗಿ 19ನೇ ಫ್ಲೋರ್ನಿಂದ ಜಿಗಿದು ಆತ್ಮಹತ್ಯೆ: ದೇಹವೆಲ್ಲಾ ಪೀಸ್ ಪೀಸ್!
ಬೆಂಗಳೂರು (ಜೂ.05): ಸಿಲಿಕಾನ್ ಸಿಟಿಯಲ್ಲಿ ಜೀವನ ಮಾಡುವ ಜನರಿಗೆ ಹಣ, ಅಂತಸ್ತು, ಕಾರು, ಮನೆ ಎಲ್ಲವೂ ಇದ್ದರೂ ನೆಮ್ಮದಿಯಿಲ್ಲವೆಂದು ಬಳಲುವವರೇ ಹೆಚ್ಚಾಗಿದ್ದಾರೆ. ಆದೇ ರೀತಿ ಇಲ್ಲೊಬ್ಬ ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನನಗೆ ಬದುಕಲು ಇಷ್ವವಿಲ್ಲವೆಂದು 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ಇನ್ನು ಮೇಲಿನಿಂದ ಬಿದ್ದ ರಭಸಕ್ಕೆ ಇಡೇ ದೇಹದ ಮೂಳೆಗಳೆಲ್ಲಾ ಪುಡಿ, ಪುಡಿಯಾಗಿದ್ದು, ದೇಹವೆಲ್ಲಾ ಪೀಸ್ ಪೀಸ್ ಆಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೊಹಮ್ಮದ್ ಘಿಯಾಸುದ್ದಿನ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಅಸ್ಸಾಂ ಮೂಲದ ಯುವಕನಾಗಿದ್ದಾನೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಈತ ಕೆಲವು ದಿನಗಳಿಂದೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು. ದುಡಿಯುವ ವಯದ್ದಿನ ಮಗ ಕೆಲಸಕ್ಕೆ ಹೋಗದೇ ಖಿನ್ನತೆಯಿಂದ ಬಳಲುತ್ತಾ, ಮನೆಯಲ್ಲಿ ಆತ್ಮಹತ್ಯೆಗೆ ಮೂರ್ನಾಲ್ಕು ಬಾರಿ ಯತ್ನಿಸಿದ ಘಟನೆ ಪೋಷಕರ ಮುಂದೆಯೇ ನಡೆದಿದೆ. ಇದನ್ನು ಸಹಿಸಿಕೊಳ್ಳಲಾಗದೇ ಆಸ್ಪತ್ರೆಗೆ ತೋರಿಸಲು ಪುಟ್ಟೇನಹಳ್ಳಿಯ ಯುವಕನ ಗೆಳೆಯನ ಮನೆಗೆ ತಾಯಿ ಸಮೇತವಾಗಿ ಬಂದಿದ್ದನು.
ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದುರ್ಘಟನೆ: ಪೋಷಕರ ಜೊತೆ ಗೆಳೆಯನ ಮನೆಗೆ ಬಂದಿದ್ದ ಮೃತ ಯುವಕನನ್ನು ಇಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧತೆ ನಡಸಿದ್ದರು. ಇನ್ನು ಗೆಳಯನೊಂದಿಗೆ ತುಂಬಾ ಆಪ್ತನಾಗಿದ್ದರಿಂದ ಆಸ್ಪತ್ರೆಗೆ ಇವನ ಗೆಳೆಯನ್ನೂ ಕರೆದುಕೊಂಡು ಹೋದರೆ ಚಿಕಿತ್ಸೆಗೆ ಅನುಕೂಲ ಆಗುತ್ತದೆ ಎಂದು ಪೋಷಕರು ಚಿಂತನೆ ಮಾಡಿದ್ದರು. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಗೆಳೆಯನ ಮನೆಯ 19ನೇ ಫ್ಲೋರ್ನಿಂದ ಯುವಕ ಜಿಗಿದಿದ್ದಾನೆ. ಮೊಹಮ್ಮದ್ ಜಿಯಾಸುದ್ದಿನ್ ತಾಯಿ ಜೊತೆಯಲ್ಲಿ ಇದ್ದಾಗಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉದ್ಯೋಗ ಅರಸಿ ಬಂದಿದ್ದ ಕುಟುಂಬ: ಈ ದುರ್ಘಟನೆ ಬೆಂಗಳೂರಿನ ಪುಟ್ಟೇನಗಳ್ಳಿ ಠಾಣಾ ವ್ಯಾಪ್ತಿಯ ಸೌತ್ಸಿಟಿಯಲ್ಲಿ ನಡೆದಿದೆ. ಮೃತನ ಕಟುಂಬ ಮತ್ತು ಗೆಳೆಯ ಮೂಲತಃ ಅಸ್ಸಾಂ ಮೂಲದವರು ಆಗಿದ್ದಾರೆ. ಆದರೆ, ಉದ್ಯೋಗವನ್ನು ಅರಸಿ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಇನ್ನು ಘಟನೆಯ ನಂತರ ಮಾಹಿತಿ ತಿಳಿದ ಪೊಲೀಸರು ಸೌತ್ಸಿಟಿ ಅಪಾರ್ಟ್ಮೆಂಟ್ನ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಘಟನೆ ಬಗ್ಗೆ ಸಿಸಿಟಿವಿ ಮತ್ತು ಇತರೆ ದಾಖಲೆಗಳನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.