ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪತ್ನಿಯ ಕೊಂದು, ಮನೆಗೆ ಬೀಗ ಜಡಿದು, ಪರಾರಿಯಾದ ಶಿಕ್ಷಕ ಕೃಷ್ಣಪ್ಪ

Twitter
Facebook
LinkedIn
WhatsApp
vbk rahul kbp 1

ಚಿಕ್ಕಬಳ್ಳಾಪುರ: ಸಮಾಜಕ್ಕೆ ನೀತಿ ಪಾಠ ಬೋಧಿಸುವ ಶಿಕ್ಷಕ (Teacher) ವೃತ್ತಿಯ ಕೃಷ್ಣಪ್ಪ ಎಂಬಾತ ಪತ್ನಿಯನ್ನು ತನ್ನ ಮನೆಯಲ್ಲಿ ಹತ್ಯೆ (murder) ಮಾಡಿದ್ದೂ ಅಲ್ಲದೆ, ಮನೆಗೆ ಬೀಗ ಜಡಿದುಕೊಂಡು ಹೋಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ (Gauribidanur) ಗಂಗಾನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮೇ 19ರಂದೆ ಪತ್ನಿಯನ್ನು (wife) ಕೊಂದು ಮನೆಗೆ ಬೀಗ ಜಡಿದಿದ್ದಾನೆ ಗಂಡ ಕೃಷ್ಣಪ್ಪ. 40 ವರ್ಷದ ಲಕ್ಷ್ಮಿದೇವಿ ಕೊಲೆಯಾದ ನತದೃಷ್ಟ ಮಹಿಳೆ. ಮೃತ ದೇಹದ ವಾಸನೆಯಿಂದ ಅಕ್ಕಪಕ್ಕದವರಿಗೆ ಅನುಮಾನ ಬಂದಾಗ ಘಟನೆ ತಡವಾಗಿ ಬಯಲಿಗೆ ಬಂದಿದೆ.

ಹತ್ಯೆಯ ವಾಸನೆ ಬಡಿಯುತ್ತಿದ್ದಂತೆ ಹತ್ಯೆ ಆರೋಪಿ ಶಿಕ್ಷಕ ಕೃಷ್ಣಪ್ಪನ ಅಕ್ಕಪಕ್ಕದ ಮನೆಯವರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್​​ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪತ್ನಿ ಬರೆದಂತೆ ನಕಲಿ ಡೆತ್ ನೋಟ್ ಸಹ ಸೃಷ್ಟಿ: ಪತ್ನಿ ಬರೆದಿರುವಂತೆ ನಕಲಿ ಡೆತ್ ನೋಟ್ ಅನ್ನು ಸಹ ಸೃಷ್ಟಿಸಿ, ಹತ್ಯೆ ಆರೋಪಿ ಶಿಕ್ಷಕ ಕೃಷ್ಣಪ್ಪ ನಾಪತ್ತೆಯಾಗಿದ್ದಾನೆ. ಕೃಷ್ಣಪ್ಪ ರಾಮಚಂದ್ರಪುರ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಶಿಕ್ಷಕನ ಕೃತ್ಯಕ್ಕೆ ಗೌರಿಬಿದನೂರು ನಗರ ಬೆಚ್ಚಿಬಿದ್ದಿದೆ. ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ. ಹಿರಿಯ ಮಗಳನ್ನು ಮದುವೆ ಮಾಡಿ ಕೊಡಲಾಗಿದೆ. ಇನ್ನೊಬ್ಬ ಮಗಳು ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ