ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹಿಂದುಜಾ ಗ್ರೂಪ್‌ ಅಧ್ಯಕ್ಷ ಎಸ್ ಪಿ ಹಿಂದುಜಾ ನಿಧನ

Twitter
Facebook
LinkedIn
WhatsApp
ಹಿಂದುಜಾ ಗ್ರೂಪ್‌ ಅಧ್ಯಕ್ಷ ಎಸ್ ಪಿ ಹಿಂದುಜಾ ನಿಧನ

ಲಂಡನ್ : ಹಿಂದುಜಾ ಗ್ರೂಪ್ ಅಧ್ಯಕ್ಷ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಬುಧವಾರ ಲಂಡನ್‌ನಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1964ರಲ್ಲಿ ಬಾಲಿವುಡ್‌ ಬ್ಲಾಕ್‌ಬಸ್ಟರ್‌ ಚಲನಚಿತ್ರ ‘ಸಂಗಮ್‌’ನ ಅಂತಾರಾಷ್ಟ್ರೀಯ ವಿತರಣಾ ಹಕ್ಕುಗಳೊಂದಿಗೆ ಪ್ರಾರಂಭವಾದ ಅವರ ವ್ಯಾಪಾರ ಯಶಸ್ಸುಗಳು ಅವರನ್ನು ಬ್ರಿಟನ್‌ನ ಅತ್ಯಂತ ಶ್ರೀಮಂತರಲ್ಲಿ ಒಬ್ಬರನ್ನಾಗಿ ಮಾಡಿತು. ಬೋಫೋರ್ಸ್ ಹಗರಣ ಶ್ರೀಚಂದ್ ಪರ್ಮಾನಂದ ಹಿಂದುಜಾ ಅವರನ್ನು ಪ್ರಸಿದ್ಧಿ ಬದಲಿಗೆ ಅಪಖ್ಯಾತಿಯನ್ನು ತಂದು ನೀಡಿತು.

ಬ್ರಿಟಿಷ್ ಇಂಡಿಯಾದ ಕರಾಚಿಯ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಶ್ರೀಚಂದ್ ಪರ್ಮಾನಂದ ಮತ್ತು ಅವರ ಇಬ್ಬರು ಕಿರಿಯ ಸಹೋದರರು ಸ್ವೀಡಿಷ್ ಬಂದೂಕು ತಯಾರಕ ಎಬಿ ಬೋಫೋರ್ಸ್‌ಗೆ ಭಾರತ ಸರ್ಕಾರದ ಗುತ್ತಿಗೆಯನ್ನು ಪಡೆಯಲು ಸಹಾಯ ಮಾಡಲು ಅಕ್ರಮ ಕಮಿಷನ್‌ಗಳಲ್ಲಿ ಒಟ್ಟು 64 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಮೂವರೂ – ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್ ಹಿಂದುಜಾ, ಆದಾಗ್ಯೂ 2005 ರಲ್ಲಿ ದೆಹಲಿ ಹೈಕೋರ್ಟ್‌ನಿಂದ ಖುಲಾಸೆಗೊಂಡಿತ್ತು.

ನಾಲ್ವರು ಸಹೋದರರಲ್ಲಿ ಹಿರಿಯ ಮತ್ತು ಹಿಂದುಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್‌ಪಿ ಹಿಂದುಜಾ ಅವರು ಈ ವರ್ಷದ ಜನವರಿಯಲ್ಲಿ ತಮ್ಮ ಪತ್ನಿ ಮಧು ಅವರನ್ನು ಕಳೆದುಕೊಂಡಿದ್ದರು. ಪುತ್ರಿಯರಾದ ಶಾನು ಮತ್ತು ವಿನೂ ಅವರನ್ನು ಅಗಲಿದ್ದಾರೆ.

1919 ರಲ್ಲಿ ಇರಾನ್‌ಗೆ ತೆರಳುವ ಮೊದಲು ಭಾರತದ ಈಗ ಪಾಕಿಸ್ಥಾನದ ಸಿಂಧ್ ಪ್ರದೇಶದಲ್ಲಿ ಸರಕುಗಳನ್ನು ವ್ಯಾಪಾರ ಮಾಡುತ್ತಿದ್ದ ಪರ್ಮಾನಂದ್ ದೀಪ್‌ಚಂದ್ ಅವರು ಹಿಂದುಜಾ ಸಾಮ್ರಾಜ್ಯವನ್ನು ಪ್ರಾರಂಭಿಸಿದರು. 1964 ರಲ್ಲಿ ಎಸ್‌ಪಿ ಹಿಂದುಜಾ ಅವರು ರಾಜ್ ಕಪೂರ್ ಅಭಿನಯದ ‘ಸಂಗಮ್’ ಚಲನಚಿತ್ರವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳ ಮೂಲಕ ವಿತರಿಸಿದರು. ಇದು ಅವಲ ಮೊದಲ ಮಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist