ಸುರತ್ಕಲ್ : ಮೀನಿಗೆ ಹಾಕಿದ ಬಲೆ ಕಾಲಿಗೆ ಸಿಲುಕಿ ಮೀನುಗಾರ ಸಾವು!
Twitter
Facebook
LinkedIn
WhatsApp

ಸುರತ್ಕಲ್: ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಜಯರಾಜ್ (46 ವರ್ಷ)ಮೃತ ಮೀನುಗಾರ. ಮಂಗಳವಾರ ಮುಸ್ಸಂಜೆ ಈ ಘಟನೆ ನಡೆದಿದೆ. ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ,ಬೃಹತ್ ತೆರೆಯೂ ಅಪ್ಪಳಿಸಿ ಮುಳುಗಿದರು ಎನ್ನಲಾಗಿದೆ.
ಸಹ ಮೀನುಗಾರ ತಕ್ಷಣ ಸ್ಥಳೀಯರಿಗೆ ತಿಳಿಸಿದ್ದು, ಸಹಾಯಕ್ಕೆ ಧಾವಿಸಿದ ಸ್ಥಳೀಯರು, ಜಯರಾಜ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮೃತರು ಪತ್ನಿ,ಮಗಳನ್ನು ಅಗಲಿದ್ದಾರೆ.