ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು

Twitter
Facebook
LinkedIn
WhatsApp
ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ಬೆಂಗಳೂರು ಗ್ರಾಮಾಂತರ: ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ನೀರವ ಮೌನಕ್ಕೆ ಜಾರಿದ್ದಾರೆ. ಗಂಡನ ಜೊತೆ ನೂರು ಕಾಲ ಬಾಳಬೇಕು ಎಂದು ಸಾಕಷ್ಟು ಕನಸುಗಳನ್ನ ಹೊತ್ತು ಪ್ರೀತಿಸಿದವನ ಜೊತೆ ಬಂದಿದ್ದ ಸುಂದರಿ, ಮದುವೆಯಾಗಿ ಮೂರು ವರ್ಷ ಕಳೆಯುವಷ್ಟರಲ್ಲೆ ದುರಂತ ಅಂತ್ಯ ಕಂಡಿದ್ದಾಳೆ. ಇಷ್ಟಪಟ್ಟವನ‌ ಜೊತೆ ಚೆನ್ನಾಗಿ ಬದುಕಿ ಬಾಳುತ್ತಾಳೆ ಅಂದುಕೊಂಡಿದ್ದ ಮಗಳು ಅಡ್ಡಲಾಗಿ ಮಲಗಿರೂದನ್ನ ಕಂಡು ತಲೆ ಮೇಲೆ ಬಂಡೆ ಬಿದ್ದಂತೆ ಹೆತ್ತವರು ನೀರವ ಮೌನಕ್ಕೆ ಶರಣಾಗಿದ್ದಾರೆ.

ಇಲ್ಲಿ ಈ ರೀತಿ ಚಕ್ಕ ವಯಸ್ಸಿಗೆ ಸಾವಿನ ಮನೆ‌ ಸೇರಿರುವ ಈಕೆಯ ಹೆಸರು ಮೇಘನಾ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಂಟೆ ಗ್ರಾಮದ‌ ನಿವಾಸಿ. ಒಬ್ಬಳೆ ಮಗಳಾಗಿದ್ದ ಕಾರಣ ಮನೆಯವರು ಮುದ್ದಾಗಿ‌ ಸಾಕಿದ್ದು ಬಿಇ ವಿದ್ಯಾಭ್ಯಾಸವನ್ನು ಮಾಡಿಸಿದ್ರು. ಆದ್ರೆ ಕಾಲೇಜಿಗೆ ಹೋಗುವ ವೇಳೆ ಪಕ್ಕದ‌ ಊರಿನ ನಾಗೇಶ್ ಎನ್ನುವ ಯುವಕನ ‌ಜೊತೆ ಈಕೆಗೆ ಪ್ರೆಮಾಂಕುರವಾಗಿದೆ. ಈ ವಿಚಾರ ಮನೆಯವರೆಗೂ ತಿಳಿದಿದೆ. ಹೀಗಾಗಿ ಮನೆಯವರು ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗ್ತಿದ್ದಂತೆ ಇಬ್ಬರು ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದಿದ್ದರು.

ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ದ ಮೇಘನಾ ಕುಟುಂಬಸ್ಥರು ನಂತರ ಒಂದೇ ಜಾತಿಯವರಾಗಿದ್ದ ಕಾರಣ ಒಂದಾಗಿದ್ದು ಇಬ್ಬರು ಸುಖವಾಗಿ ಬಾಳಲಿ ಎಂದು ಚಿನ್ನಾಭರಣಗಳನ್ನ ನೀಡಿದ್ದು, ಇಬ್ಬರು ಅನ್ನೊನ್ಯತೆಗೆ ಒಂದು ಮಗು ಸಹ ಆಗಿದೆ. ಆದರೆ ಮದುವೆಯಾಗಿ ಎರಡು ವರ್ಷ ಕಳೆಯುವಷ್ಡರಲ್ಲೆ ಇಬ್ಬರ ನಡುವೆ ಕಲಹ ಶುರುವಾಗಿದ್ದು ಕಳೆದ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ಮಾಡಿಕೊಂಡು ಕೋಣೆ ಒಳಗಡೆ‌ ಹೋದ ಮೇಘನಾ ಬೆಳಾಗಗುವಷ್ಡರಲ್ಲಿ ಹೆಣವಾಗಿ ಪತ್ತೆಯಾಗಿದ್ದು ಗಂಡನ ಮನೆಯವರೆ ಮೇಘನಾಳನ್ನ ಏನೋ ಮಾಡಿದ್ದಾರೆ ಎಂದು ಮೇಘನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಮದುವೆಯಾಗಿ ಮಗುವಾದ ನಂತರ ಮೇಘನಾ ಮತ್ತು ಗಂಡನ ನಡುವೆ ಕಲಹ ಶುರುವಾಗಿದ್ದು ಹಲವು ಭಾರಿ ಮನೆಯವರಿಗೆ ಮದುವೆ ವಿಚಾರದಲ್ಲಿ ನಿಮ್ಮ ಮಾತು ಕೇಳಬೇಕಿತ್ತು ಎಂದು ಹೇಳಿದ್ದಳಂತೆ. ಜತೆಗೆ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು, ಊರಿನವರು ಬೆಳಗ್ಗೆ ತರಾ ತುರಿಯಲ್ಲಿ ಮಣ್ಣು ಮಾಡಲು ನೋಡಿದ್ದಾರೆ. ಈ ವೇಳೆ ಪೊಲೀಸರು ಎಂಟ್ರಿಕೊಟ್ಟು ಮೃತದೇವನ್ನ ಶವಾಗಾರಕ್ಕೆ‌ ರವಾನಿಸಿ ಪರೀಕ್ಷೆ ಮಾಡಿಸಿದ್ದಾರೆ. ಇನ್ನು ಈ ಬಗ್ಗೆ ಗಂಡ ನಾಗೇಶನನ್ನ ಕೇಳಿದ್ರೆ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಇಬ್ಬರು ಚೆನ್ನಾಗೆ ಸಂಸಾರ ಮಾಡ್ತಿದ್ವಿ. ರಾತ್ರಿ ಊಟ ಬಡಿಸುವ ವಿಚಾರಕ್ಕೆ ಸಣ್ಣ ಗಲಾಟೆಯಾಗಿ ನಾನು ಬೈದ್ದಿದ್ದ ಕಾರಣ ಆಕೆ‌ ಕೊಠಡಿ ಒಳಗಡೆ‌‌ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಹೀಗಾಗಿ ಮಧ್ಯರಾತ್ರಿ ಮಗು ಅಳುತ್ತಿದೆ ಎಂದು ಕೊಠಡಿ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡಿದ್ದಾಳು ಎಂದಿದ್ದಾನೆ.

ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಅನ್ನೂ ಮಾತಿದ್ರು ಉಂಡು ಮಲಗಿದ ಮೇಲೆ‌ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವುದು ನಿಜಕ್ಕೂ ದುರಂತ. ಇನ್ನು ಈ ಬಗ್ಗೆ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಸಂಪೂರ್ಣ ತನಿಖೆ ನಂತರ ಮೇಘನಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೂದು ಬೆಳಕಿಗೆ ಬರಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist