ಶ್ರೀ ಕ್ಷೇತ್ರ ತಾಯಿನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಸಂಪನ್ನ
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಸಮೀಪದ ಶ್ರೀ ಕ್ಷೇತ್ರ ತಾಯಿನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಹಾಶಿವರಾತ್ರಿ ಹಬ್ಬದ ಉತ್ಸವವು ಫೆ.17 ರಿಂದ 18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೇ.ಮೂ. ಚಿನ್ಮಯ ಅಡಿಗ-ನಿಟ್ಟೂರು ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಫೆ.17 ರಂದು ಸನ್ನಿಧಾನದಲ್ಲಿ ಬೆಳಿಗ್ಗೆ ಶ್ರೀ ನಾಗದೇವರಿಗೆ ಕಲಾವೃದ್ಧಿ ಹೋಮ, ನವಕಪ್ರಧಾನ ಕಲಶಾಭಿಷೇಕ, ಮಹಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ. ಸಂಜೆ ಪರಿವಾರ ದೈವಗಳಿಗೆ ಕಲಾವೃದ್ಧಿ ಹೋಮ, ನವಕುಂಭ ಕಲಶಾಭಿಷೇಕ, ಮಹಾಪೂಜೆ ನಡೆಯಿತು
ಫೆ.18 ರಂದು ಮಹಾ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಶ್ರೀ ಗಣಪತಿ ದೇವರಿಗೆ ಗಣಹೋಮ, ಶ್ರೀ ದೇವಿಗೆ ದುರ್ಗಾ ಹೋಮ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಅಲಂಕಾರ ಪೂಜೆ. ಮಧ್ಯಾಹ್ನ12.30ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಮಹಾ “ಅನ್ನ ಸಂತರ್ಪಣೆ” ಕಾರ್ಯಕ್ರಮ ನಡೆಯಿತು.
ಸಂಜೆ 6.30 ರಿಂದ ಶ್ರೀ ಸಿದ್ಧಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ರಾತ್ರಿ 10 ಗಂಟೆಯಿಂದ ಮಧ್ಯ ರಾತ್ರಿಯ ತನಕ ಶ್ರೀರಾಮ ಭಜನಾ ಮಂಡಳಿ- ಅರೆಶಿರೂರು, ಶ್ರೀ ಬಿಳಿಶಿಲೆ ವಿನಾಯಕ ಭಜನಾ ಮಂಡಳಿ-ಗೋಳಿಹೊಳೆ ಇವರಿಂದ ಕುಣಿತ ಭಜನೆ ಮತ್ತು ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ನಂತರ ಲಘು ಉಪಹಾರ ವ್ಯವಸ್ಥೆ ನಡೆಯಿತು.
ಈ ಸಂದರ್ಭದಲ್ಲಿ ಅರ್ಚಕರಾದ ವಿನಾಯಕ, ಶಂಕರ್ ದೀಕ್ಷಿತ್, ಸುಮುಖ, ವಾಸುದೇವ ಭಟ್, ಶ್ರೀ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಯರಾಮ ಪೂಜಾರಿ ಮತ್ತು ಸಹೋದರರು ಹಾಗೂ ಕುಟುಂಬಸ್ಥರು ಸಂತೆಗದ್ದೆ-ಗೋಳಿಹೊಳೆ, ನಂಬಿದ ಜೈನ ಕುಟುಂಬಸ್ಥರು ಮತ್ತು ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.