ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟ್ಯಾಂಕರ್‌ ಸ್ವಚ್ಛಗೊಳಿಸಲು ಒಳಗಿಳಿದ 7 ಕಾರ್ಮಿಕರು ಉಸಿರುಗಟ್ಟಿ ಸಾವು

Twitter
Facebook
LinkedIn
WhatsApp
ಟ್ಯಾಂಕರ್‌ ಸ್ವಚ್ಛಗೊಳಿಸಲು ಒಳಗಿಳಿದ 7 ಕಾರ್ಮಿಕರು ಉಸಿರುಗಟ್ಟಿ ಸಾವು

ಕಾಕಿನಾಡು:  ಆಯಿಲ್ ಟ್ಯಾಂಕರ್‌ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಕಟ್ಟಿ 7 ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ನಡೆದಿದೆ. ಕಾಕಿನಾಡ್‌ನ ಪೆದ್ದಪುರಂ ಮಂಡಲದ (Peddapuram mandal) ಜಿ ರಾಮಪೇಟ (G Ragampeta) ಎಂಬಲ್ಲಿ ಇರುವ ಅಂಬಟಿ ಸುಬ್ಬಣ್ಣ ಆಯಿಲ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ.  ಒಬ್ಬರಾದ ಮೇಲೆ ಒಬ್ಬರಂತೆ ಟ್ಯಾಂಕರ್ ಒಳಗೆ ಹೋದ ಕಾರ್ಮಿಕರು ಅಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. 

ದುರಂತದಲ್ಲಿ ಮೃತರಾದ ಕಾರ್ಮಿಕರನ್ನು ವೆಚಂಗಿ ಕೃಷ್ಣ (Vechangi Krishna), ವೆಚಂಗಿ ನರಸಿಂಹಮ್(Vechangi Narasimham), ವೆಚಂಗಿ ಸಾಗರ್ (Vechangi Sagar), ಕೊರತಾಡು ಬಂಜಿ ಬಾಬು (Korathadu Banji Babu), ಕರಿ ರಾಮ ರಾವ್ (Karri Rama Rao), ಕಟ್ಟಮುರಿ ಜಗದೀಶ್‌ (Kattamuri Jagadeesh) ಹಾಗೂ ಪ್ರಸಾದ್ (Prasad ಎಂದು ಗುರತಿಸಲಾಗಿದೆ.  ಮೃತರಲ್ಲಿ ಐವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಡೆರು ಎಂಬಲ್ಲಿಯ ನಿವಾಸಿಗಳಾಗಿದ್ದು, ಉಳಿದ ಇಬ್ಬರು ಮಂಡಲದ ಪುಲಿಮೇರು (Pulimeru) ಗ್ರಾಮದವರಾಗಿದ್ದಾರೆ.  ವಿಚಿತ್ರ ಎಂದರೆ ಇವರೆಲ್ಲರೂ 10 ದಿನಗಳ ಹಿಂದಷ್ಟೇ ಈ ಆಯಿಲ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು. 

ಕೆಲ ಮೂಲಗಳ ಪ್ರಕಾರ ಈ ಆಯಿಲ್ ಫ್ಯಾಕ್ಟರಿಯೂ ಕಾರ್ಖಾನೆ ಕಾಯ್ದೆಯಡಿ ನೋಂದಣಿಗೊಂಡಿಲ್ಲ ಎಂದು ತಿಳಿದು ಬಂದಿದೆ.  ಆಯಿಲ್ ಟ್ಯಾಂಕರ್ ಒಳಗಿದ್ದ ವಿಷಕಾರಿ ಅನಿಲದಿಂದ ಈ ಸಾವು ಸಂಭವಿಸಿರಬಹುದು ಎಂದು ಊಹೆ ಮಾಡಲಾಗಿದೆ.  ಘಟನೆ ಬಗ್ಗೆ ಪೆದ್ದಪುರಂ ಸರ್ಕಲ್ ಇನ್ಸ್‌ಪೆಕ್ಟರ್, ಪ್ರತಿಕ್ರಿಯಿಸಿದ್ದು,  ಮೊದಲಿಗೆ ಒಬ್ಬ ವ್ಯಕ್ತಿ  ಅಡುಗೆ ಎಣ್ಣೆಯ ಟ್ಯಾಂಕರ್ ಒಳಗೆ ಹೋಗಿದ್ದಾನೆ. ಆದರೆ ಅಲ್ಲಿ ಆತನಿಗೆ ಉಸಿರಾಡಲಾಗದೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಾದ ನಂತರ ಏಣಿ ಇಟ್ಟು ಉಳಿದ ಏಳು ಜನ ಟ್ಯಾಂಕರ್ ಒಳಗೆ ಇಳಿದಿದ್ದಾರೆ. ಆದರೆ ಎಲ್ಲರಿಗೂ ಅಲ್ಲಿ ಉಸಿರಾಟದ ಸಮಸ್ಯೆಯಾಗಿದೆ. ಆದರೆ ನಂತರ ಏಣಿ ಇಟ್ಟು ಇಳಿದ 7 ಜನರಲ್ಲಿ ಓರ್ವ ಬದುಕಿದ್ದು, ಆತ ಟ್ಯಾಂಕರ್ ಒಳಗೆ ಇಳಿದ ನಂತರ ಉಸಿರಾಡಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ