ಶನಿವಾರ, ಮೇ 18, 2024
ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರು ಬಿಟ್ಟು ಮೆಟ್ರೋ ಹತ್ತಿ ಕಲ್ಯಾಣ ಮಂಟಪ ತಲುಪಿದ ಮದುಮಗಳು! ವಿಡಿಯೋ ವೈರಲ್

Twitter
Facebook
LinkedIn
WhatsApp
download 8

ಬೆಂಗಳೂರು: ಯಾವ್ಯಾವ ಕಾಲಕ್ಕೆ ಏನೇನು ಆಗ ಬೇಕೋ ಅದು ಆಗಲೇಬೇಕು ಎಂಬ ಮಾತಿದೆ. ಆದರೆ, ನಮ್ಮ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯು “ಆಗಬೇಕಾದ್ದನ್ನು ಸೂಕ್ತ ಕಾಲಕ್ಕೆ ಆಗದಂತೆ ಮಾಡಿದ’ ಎಷ್ಟೋ ಉದಾಹರಣೆಗಳಿವೆ. ತನ್ನ ಮದುವೆಗೆ ಈ ಸಮಸ್ಯೆ ಅಂಟಿಕೊಳ್ಳಬಾರದು ಎಂದು ನಿರ್ಧರಿಸಿದ ಯುವತಿಯೊಬ್ಬಳು, ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪ ತಲುಪಲು ಕಾರು ಬಿಟ್ಟು “ಮೆಟ್ರೋ’ ಹತ್ತಿದ್ದಾಳೆ!

ಹೌದು, ಬೆಂಗಳೂರಿನ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್‌ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದಳು. ಆದರೆ, ಆಕೆಯಿದ್ದ ಕಾರು ನಗರದ ಟ್ರಾಫಿಕ್‌ ನಲ್ಲಿ ಸಿಲುಕಿಕೊಂಡಿತು. ಈ ದಟ್ಟಣೆಯಲ್ಲಿ ಕಾದು ಕುಳಿತರೆ, ಮುಹೂರ್ತ ಮೀರಿ ಹೋಗುವುದು ಖಚಿತ ಎಂದು ಯೋಚಿಸಿದ ಆಕೆ, ಕಾರಿನಲ್ಲಿ ಇಳಿದು ನೇರವಾಗಿ ಮೆಟ್ರೋ ಹತ್ತಿಯೇ ಬಿಟ್ಟಳು. ಕುಟುಂಬ ಸದಸ್ಯರೂ ಆಕೆ ಯನ್ನು ಹಿಂಬಾಲಿಸಿದರು.

ಮೆಟ್ರೋ ದಲ್ಲಿ ವಧು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್‌ ಆಗಿದೆ. ಆಕೆಯನ್ನು ಎಲ್ಲರೂ “ಸ್ಮಾರ್ಟ್‌ ಮದುಮಗಳು’ ಎಂದು ಕರೆದಿದ್ದಾರೆ. ಈ ವಿಡಿಯೋ ಅಪ್‌ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ 3 ಸಾವಿರ ವೀಕ್ಷಣೆ ಗಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ