ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅವಸರದಲ್ಲಿ ಲಾಕ್ಡೌನ್ ಸಡಿಲಿಸುವುದು ಬೇಡ ಎಂದ ತಾಂತ್ರಿಕ ಸಮಿತಿ

Twitter
Facebook
LinkedIn
WhatsApp
ಅವಸರದಲ್ಲಿ ಲಾಕ್ಡೌನ್ ಸಡಿಲಿಸುವುದು ಬೇಡ ಎಂದ ತಾಂತ್ರಿಕ ಸಮಿತಿ

ಬೆಂಗಳೂರು: ಕೋವಿಡ್ ಡೆಲ್ಟಾ-ಪ್ಲಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ಮಹಾರಾಷ್ಟ್ರ ಅನ್ ಲಾಕ್ ನಿಂದಾಗಿ ರಾಜ್ಯದಲ್ಲಿ ಮತ್ತೆನಿಧಾನವಾಗಿ ಪರಿಸ್ಥಿತಿ ಗಂಭೀರವಾಗುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ ಅವಸರದಲ್ಲಿ ಲಾಕ್ ಡೌನ್ ಮಾನದಂಡಗಳನ್ನು ಸಡಿಲಿಸುವುದು ಬೇಡ ಎಂದು ಸರ್ಕಾರಕ್ಕೆ ಸೂಚಿಸಿದೆ.
ಡೆಲ್ಟಾ-ಪ್ಲಸ್‌ನ ಎರಡು ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿದ್ದು ರಾಜ್ಯಕ್ಕೆ ಕೇಂದ್ರ ಕೂಡ ಜಾಗೃತವಾಗಿರುವುದಕ್ಕೆ ಒತ್ತಾಯಿಸಿದೆ. ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಜನಸಂದಣಿಯನ್ನು ತಡೆಯಬೇಕು, ವ್ಯಾಪಕ ಪರೀಕ್ಷೆ ನಡೆಸಬೇಕು ಮತ್ತು ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆಯ ಮೇಲೆ ಲಸಿಕೆ ಹೆಚ್ಚಿಸಬೇಕು ಎಂದು ಕೇಂದ್ರ ಸೂಚಿಸಿದೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ!

ಡೆಲ್ಟಾ-ಪ್ಲಸ್ ಗಾಗಿ ಕ್ರಮಗಳ ಕುರಿತು ಚರ್ಚಿಸಲು ಶನಿವಾರ ಸಭೆ ನಡೆಸಿದ ಟಿಎಸಿ, ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ರೂಪಾಂತರ ದೃಢವಾದ ನಂತರ, ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್‌ಒ) ಅಡಿಯಲ್ಲಿ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿ)ದಿಂದ ವಿವರವಾದ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ ನಡೆಸಲಾಗುವುದು ಮತ್ತು ವರದಿಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ತಜ್ಞರ ಸಮಿತಿ ಮತ್ತು ರಾಜ್ಯ ಕೋವಿಡ್ ವಾರ್ ರೂಮಿನೊಂದಿಗೆ ಹಂಚಿಕೊಳ್ಳಬೇಕು. ”ಟಿಎಸಿ ಸೂಚಿಸಿದೆ.
ಮಾದರಿಗಳನ್ನು ಜೀನೋಮ್ ಗೆ ಅನುಕ್ರಮಗೊಳಿಸಲು ಒಂದರಿಂದ ಎರಡು ವಾರಗಳು ಬೇಕೆನ್ನುವುದನ್ನು ನೆನಪಿನಲ್ಲಿಟ್ಟುಕೊಂಡು, ಟಿಎಸಿ ಆರ್ ಆರ್ ಟಿ ಗಳಿಗೆ ಕೋವಿಡ್-ಪಾಸಿಟಿವ್ ವ್ಯಕ್ತಿಯ ವೈದ್ಯಕೀಯ ಸ್ಥಿತಿ, ಅವನು / ಅವಳು ಹೋಂ ಐಸೋಲೇಷನ್ ಅಡಿಯಲ್ಲಿ ಚೇತರಿಸಿಕೊಂಡಿದ್ದಾನೋ ಅಥವಾ ಮರಣಹೊಂದಿದ್ದಾನೋ ಇತ್ಯಾದಿಗಳನ್ನು ತನಿಖೆ ಮಾಡಲು ಸಲಹೆ ನೀಡಿದೆ. ಅಲ್ಲದೆ, ಚೇತರಿಕೆಯ 14 ದಿನಗಳ ಬಳಿಕ ಅಂತಹ ಜನರಿಗೆ ಕೋವಿಡ್- ನೆಗೆಟಿವ್ ಪರೀಕ್ಷೆಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಟಿಎಸಿ ಸಲಹೆ ಕೊಟ್ಟಿದೆ. ರೂಪಾಂತರಕ್ಕೆ ಪಾಸಿಟಿವ್ ಆಗಿ ವರದಿ ಪಡೆದ ವ್ಯಕ್ತಿಯ ಎಲ್ಲಾ ಸಂಪರ್ಕಗಳನ್ನು ಗುರುತಿಸಲಾಗಿದೆಯೇ ಮತ್ತು ಏಳು ದಿನಗಳ ಕಾಲಪರೀಕ್ಷಿಸಲಾಗಿದೆಯೇ ಎಂದು ತಂಡಗಳು ಪರಿಶೀಲಿಸುವ ನಿರೀಕ್ಷೆಯಿದೆ.

ಇಳಿಕೆ ಯತ್ತ ಕೋವಿಡ್ ಪ್ರಕರಣಗಳು. ಎರಡು ತಿಂಗಳಲ್ಲಿ ಕಡಿಮೆ ಪ್ರಕರಣಗಳು ದಾಖಲು!!

ಸಂಪರ್ಕ ಪತ್ತೆಹಚ್ಚುವಿಕೆಯನ್ನು ಮಾಡಬೇಕು ಮತ್ತು ಅಂತಹ ಎಲ್ಲಾ ರೋಗಿಗಳ ಸಂಪರ್ಕಗಳಲ್ಲಿ ಆರ್‌ಟಿ-ಪಿಸಿಆರ್ ನಡೆಸಬೇಕು. ಪಾಸಿಟಿವ್ ವರದಿ ಬಂದರೆ ಅವುಗಳ ಮಾದರಿಗಳನ್ನು ಜೀನೋಮ್ ಅನುಕ್ರ್ಮಕ್ಕೆ ಒಳಪಡಿಸಬೇಕು. ಟಿಎಸಿ ಸದಸ್ಯರು ಸೂಕ್ಷ್ಮ ಯೋಜನೆ ಮತ್ತು ವರದಿ ಸ್ವರೂಪಗಳನ್ನು ರಾಜ್ಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದು ಲಟ್ಟುನಿಟ್ಟಾದ ಕ್ವಾರಂಟೈನ್ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಸಮುದಾಯದಲ್ಲಿ ಇನ್ಫ್ಲುಎಂಜ ತರಹದ ಅನಾರೋಗ್ಯ (ಐಎಲ್ಐ) ಸಮೀಕ್ಷೆ – ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿತುರ್ತಾಗಿ ಮಾಡಬೇಕು ಎಂದು ಟಿಎಸಿ ತಿಳಿಸಿದೆ. ಎಲ್ಲಾ ಐಎಲ್ಐ ಪ್ರಕರಣಗಳನ್ನು ಆರ್‌ಟಿಪಿಸಿಆರ್‌ನೊಂದಿಗೆ ಪರೀಕ್ಷಿಸಬೇಕು. “ಏಕಕಾಲೀನ ಜೀನೋಮಿಕ್ ಸೀಕ್ವೆನ್ಸಿಂಗ್ ಜೊತೆಗೆ ಕ್ಲಸ್ಟರ್ ಪ್ರಕರಣಗಳ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆಯನ್ನು ರಾಜ್ಯವು ಹೆಚ್ಚಿಸಬೇಕಾಗಿದೆ.
ಪ್ರತಿ ಜಿಲ್ಲೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ರೂಪಾಂತರಗಳಿಗಾಗಿ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಬಲಪಡಿಸುವ ಇತ್ತೀಚಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ”ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಟಿಎಸಿ ಸದಸ್ಯ ಡಾ.ಗಿರಿಧರ ಆರ್ ಬಾಬು ಹೇಳಿದರು. ಜಯದೇವ ಇನ್ಸ್ಟಿಟ್ಯೂಟ್ ಆಫ್ ಹೃದಯ ಸಂಬಂಧಿ ಕಾಯಿಲೆಗಳ ನಿರ್ದೇಶಕ ಡಾ.ಮಂಜುನಾಥ್ ಸಿ ಎನ್, ದೊಡ್ಡ ಪಾರ್ಟಿ, ಸಮಾರಂಭಗಳಿಗೆ ಗೆ ಅವಕಾಶ ನೀಡುವ ಯಾವುದೇ ನಿರ್ಧಾರವನ್ನು ಮುಂದೂಡಬೇಕೆಂದು ಸರ್ಕಾರವನ್ನು ಕೇಳಿದರು. ಹಿಂದಿನ ಅಲೆಗಳಲ್ಲಿ, ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಯಲ್ಲಿನ್ ಕಾಣಿಸಿಕಿಂಡ2-4 ವಾರಗಳ ನಂತರ ಕರ್ನಾಟಕದಲ್ಲಿ ಸಾಂಕ್ರಾಮಿಕ ಉಲ್ಬಣ ಕಾಣಿಸಿದೆ, ಎಂದು ಅವರು ಹೇಳಿದರು. ವಿಒಸಿಳನ್ನು ಮೊದಲೇ ಕಂಡುಹಿಡಿಯಲು ಜೀನೋಮ್ ಅನುಸರಣೆಯನ್ನು 5% ಮಾದರಿಗಳಿಂದ ಕನಿಷ್ಠ 20% ಕ್ಕೆ ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು. ಹೊರರಾಜ್ಯಗಳಿಂದ ಆಗಮಿಸುವವರಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದರು.
ರಾಜ್ಯವು 1 ದಿನದಲ್ಲಿ 4 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದು ಜನರು ಕೋವಿಡ್ ನಿಯಮಗಳನ್ನು ಮೀರುತ್ತಿದ್ದಾರೆ ಎಂಬ ಸ್ಪಷ್ಟ ಸೂಚನೆಯಂತೆ ಕಂಡುಬರುತ್ತಿದೆ.ಕರ್ನಾಟಕವು ಶುಕ್ರವಾರ ದಾಖಲಾದ ಪ್ರಕರಣಗಳಿಗಿಂತ ಸುಮಾರು 1,000 ಹೆಚ್ಚುವರಿ ಪ್ರಕರಣಗಳನ್ನು ವರದಿ ಮಾಡಿದೆ. ಹಿಂದಿನ ದಿನ 3,310 ಪ್ರಕರಣಗಳಿಗೆ ಹೋಲಿಸಿದರೆ ರಾಜ್ಯವು ಶನಿವಾರ 4,272 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆದಾಗ್ಯೂ, ಸಕಾರಾತ್ಮಕತೆಯ ಪ್ರಮಾಣವು ಶುಕ್ರವಾರ 8.43% ರಿಂದ ಶನಿವಾರ 8.40% ಕ್ಕೆ ಇಳಿದಿದೆ.

ರಾಜ್ಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೋವಿಡ್ ನೆಗೆಟಿವ್ ವರದಿ ಪಡೆಯದೆ ರಾಜ್ಯಕ್ಕೆ ಪ್ರವೇಶಿಸುವ ಜನರ ತಡೆಯಲು ಸರ್ಕಾರ ಚಿಂತಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶನಿವಾರ ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು