‘ನಿಮ್ಮ ಹೆಸರಿಗೆ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ನಟಿ ಅಂಜಲಿ ಪಾಟೀಲ್ ಗೆ 5 ಲಕ್ಷ ರೂ. ವಂಚಿಸಿದ ಸೈಬರ್ ಖದೀಮ

ಹಲವು ಸೆಲೆಬ್ರಿಟಿಗಳು ಸೈಬರ್ ಕಿಡಿಗೇಡಿಗಳಿಂದ ತೊಂದರೆ ಅನುಭವಿಸಿದ್ದಾರೆ. ಇನ್ನೂ ಕೆಲವರು ಹಣ ಕಳೆದುಕೊಂಡಿದ್ದಾರೆ. ಖ್ಯಾತ ನಟಿ ಅಂಜಲಿ ಪಾಟೀಲ್ (Anjali Patil) ಅವರಿಗೆ ಈಗ ಮೋಸ ಆಗಿದೆ. ಅವರಿಗೆ ಬರೋಬ್ಬರಿ 5.79 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ‘ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸೆಲ್ ಬಂದಿದೆ’ ಎಂದು ಹೆದರಿಸುವ ಮೂಲಕ ಸೈಬರ್ (Cyber Crime) ಖದೀಮರು ಈ ನಟಿಗೆ ಮೋಸ ಮಾಡಿದ್ದಾರೆ. ತಮಗೆ ಈ ರೀತಿ ವಂಚನೆ ಆಗಿದೆ ಎಂಬುದು ಅಂಜಲಿ ಪಾಟೀಲ್ ಅವರಿಗೆ ತಡವಾಗಿ ಗೊತ್ತಾಗಿದೆ. ಅಷ್ಟಕ್ಕೂ ಅವರನ್ನು ಮೋಸದ ಜಾಲಕ್ಕೆ ಬೀಳಿಸಿದ್ದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ..
ಡ್ರಗ್ಸ್ ಕೇಸ್ನಲ್ಲಿ ಅನೇಕ ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದಂಟು. ಈ ವಿಚಾರದಲ್ಲಿ ಸೆಲೆಬ್ರಿಟಿಗಳಿಗೆ ಭಯ ಇದೆ. ಆ ಭಯವನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಅಂಜಲಿ ಪಾಟೀಲ್ಗೆ ಮೋಸ ಮಾಡಿದ್ದಾರೆ. ತಮ್ಮನ್ನು ಪೊಲೀಸರು ಎಂದು ಪರಿಚಯ ಮಾಡಿಕೊಂಡ ಖದೀಮರು ನಟಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ.

ದೀಪಕ್ ಶರ್ಮಾ ಎಂಬ ವ್ಯಕ್ತಿಯು ಅಂಜಲಿ ಪಾಟೀಲ್ ಅವರಿಗೆ ಕರೆ ಮಾಡಿ ‘ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಡ್ರಗ್ಸ್ ಪಾರ್ಸೆಲ್ ಸಿಕ್ಕಿದೆ. ನೀವು ಮುಂಬೈ ಸೈಬರ್ ಪೊಲೀಸರನ್ನು ಸಂಪರ್ಕಿಸಿ’ ಎಂದು ಹೇಳಿದ್ದಾನೆ. ನಂತರ ತಾನು ಮುಂಬೈ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬ್ಯಾನರ್ಜಿ ಎಂಬ ವ್ಯಕ್ತಿ ಅಂಜಲಿಗೆ ಕರೆ ಮಾಡಿದ್ದಾನೆ. ‘ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೂರು ಬ್ಯಾಂಕ್ಗಳಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ. ಅದರ ಪರಿಶೀಲನೆ ಮಾಡಲು ನೀವು ನಮಗೆ 96,525 ರೂಪಾಯಿ ವರ್ಗಾವಣೆ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾನೆ.
‘ನಿಮ್ಮ ಜೊತೆ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲು ಆಗಿದ್ದಾರೆ’ ಎಂದು ನಟಿಗೆ ಸೈಬರ್ ಕಿಡಿಗೇಡಿ ಹೆದರಿಸಿದ್ದಾನೆ. ಕೇಸ್ ಕ್ಲೋಸ್ ಮಾಡಲು 4,83,291 ರೂಪಾಯಿಯನ್ನು ನಟಿಯಿಂದ ಪಡೆದುಕೊಂಡಿದ್ದಾನೆ. ಖದೀಮರು ಹೇಳಿದ್ದನ್ನು ನಿಜ ಎಂದು ನಂಬಿ, ಪೊಲೀಸ್ ಕೇಸ್ ತಪ್ಪಿಸಲು ಅಂಜಲಿ ಪಾಟೀಲ್ ಅವರು ಈ ಹಣವನ್ನು ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ಅವರಿಗೆ ತಿಳಿದುಬಂದಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವೇ ಇಲ್ಲ’; ವಿವರಿಸಿದ ರಾಜ್ಕುಮಾರ್ ಹಿರಾನಿ
ಹಬ್ಬ ಅಥವಾ ವಿಶೇಷ ಸಂದರ್ಭದಲ್ಲಿ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ಗಳು ಏರ್ಪಡುತ್ತವೆ. ದೊಡ್ಡ ದೊಡ್ಡ ಸಿನಿಮಾಗಳು ಮುಖಾಮುಖಿ ಆಗುತ್ತವೆ. ಈ ರೀತಿ ಕ್ಲ್ಯಾಶ್ಗಳು ಮೊದಲೂ ಆಗಿದ್ದವು, ಮುಂದೆಯೂ ಆಗುತ್ತವೆ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಅನ್ನೋದು ರಾಜ್ಕುಮಾರ್ ಹಿರಾನಿ (Rajkumar Hirani) ಅಭಿಪ್ರಾಯ. ಇತ್ತೀಚೆಗೆ ಬಾಕ್ಸ್ ಆಫೀಸ್ನಲ್ಲಿ ‘ಡಂಕಿ’ ಹಾಗೂ ‘ಸಲಾರ್’ ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ಈ ಬಗ್ಗೆ ರಾಜ್ಕುಮಾರ್ ಹಿರಾನಿ ಮಾತನಾಡಿದ್ದಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗಿ ಮೊದಲ ದಿನ 30 ಕೋಟಿ ರೂಪಾಯಿ ಗಳಿಸಿತು. ‘ಸಲಾರ್’ ಸಿನಿಮಾ ಮೊದಲ ದಿನ 95 ಕೋಟಿ ರೂಪಾಯಿ ಬಾಚಿಕೊಂಡಿತು. ಕಲೆಕ್ಷನ್ ವಿಚಾರದಲ್ಲಿ ‘ಸಲಾರ್’ ಮೇಲುಗೈ ಸಾಧಿಸಿದೆ. ‘ಎಲ್ಲರೂ ಎಲ್ಲಾ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ’ ಅನ್ನೋದು ರಾಜ್ಕುಮಾರ್ ಹಿರಾನಿ ಅಭಿಪ್ರಾಯ.
‘ನಿರ್ಮಾಪಕರ ದೃಷ್ಟಿಯಿಂದ ಹೇಳೋದಾದರೆ ದೇಶದಲ್ಲಿ ಕಡಿಮೆ ಥಿಯೇಟರ್ಗಳು ಇವೆ. ಒಂದಾದ ಮೇಲೆ ಒಂದರಂತೆ ಸಿನಿಮಾ ನೋಡುವಷ್ಟು ದುಡ್ಡು ಜನರ ಬಳಿ ಇಲ್ಲ. ಹೀಗಾಗಿ, ವಾರಕ್ಕೆ ಒಂದು ಅಥವಾ ತಿಂಗಳಿಗೆ ಒಂದು ಸಿನಿಮಾ ಮಾತ್ರ ನೋಡೋದು ಎನ್ನುವ ನಿರ್ಧಾರಕ್ಕೆ ಜನರು ಬರುತ್ತಾರೆ. ಒಂದು ಹಂತದಲ್ಲಿ ಇದು ಎರಡೂ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದಾರೆ ರಾಜ್ಕುಮಾರ್ ಹಿರಾನಿ.