ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ಓಣಂ ಲಾಟರಿ ಬಂಪರ್ ಗೆದ್ದ ಆಟೋ ಚಾಲಕ!

Twitter
Facebook
LinkedIn
WhatsApp
 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ಓಣಂ ಲಾಟರಿ ಬಂಪರ್ ಗೆದ್ದ ಆಟೋ ಚಾಲಕ!

ತಿರುವನಂತಪುರಂ: ಅದೃಷ್ಟ ಎಂದರೆ ಹೀಗಿರಬೇಕು….  ಆತ ಓರ್ವ ಆಟೋ ಚಾಲಕ, ತನ್ನ ಜೀವನೋಪಾಯಕ್ಕಾಗಿ ಮಲೇಷ್ಯಾಗೆ ಹೋಗಲು 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ ಆತನಿಗೆ 25 ಕೋಟಿ ರೂಪಾಯಿ ಮೌಲ್ಯದ ಲಾಟರಿ ಬಹುಮಾನ ಬಂದಿದೆ!

ಅಚ್ಚರಿಯ ಸಂಗತಿಯೇನೆಂದರೆ, ಲಾಟರಿ ಗೆದ್ದ ಅನೂಪ್, ತಾನು ಖರೀದಿಸಿದ್ದ ಮೊದಲ ಟಿಕೆಟ್ ನ್ನು ಬಿಟ್ಟು ಅದರ ಬದಲಿಗೆ ಮತ್ತೊಂದನ್ನು ಬದಲಿಸಿದ, ಹೀಗೆ ಎರಡನೇ ಬಾರಿ ಆಯ್ಕೆ ಮಾಡಿದ ಟಿಕೆಟ್ ಟಿಜೆ750605 ಗೆ ಬಹುಮಾನ ಬಂದಿದೆ. ಬಹುಮಾನ ಗೆದ್ದ ಸಂತಸದಲ್ಲಿ ಮಾತನಾಡಿರುವ ಅನೂಪ್, ನಾನು ಬ್ಯಾಂಕ್ ನಿಂದ ಲೋನ್ ಪಡೆಯುವುದಿಲ್ಲ, ಬ್ಯಾಂಕ್ ನವರಿಗೆ ಲೋನ್ ಬೇಡ ಎಂದು ಹೇಳುತ್ತೇನೆ ಹಾಗೂ ಮಲೇಷ್ಯಾಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಅನೂಪ್ ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು ಹಾಗೂ ಕೆಲವೊಮ್ಮೆ ನೂರು ರೂಪಾಯಿ, ಇನ್ನೂ ಕೆಲವೊಮ್ಮೆ 5,000 ರೂಪಾಯಿ ಹಣ ಬಹುಮಾನವಾಗಿ ಗೆದ್ದ ಉದಾಹರಣೆಯೂ ಇದೆ.

 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ಓಣಂ ಲಾಟರಿ ಬಂಪರ್ ಗೆದ್ದ ಆಟೋ ಚಾಲಕ!

ನಾನು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದ ಕಾರಣ ನಾನು ಲಾಟರಿ ರಿಸಲ್ಟ್ ಗಳನ್ನು ಟಿವಿಯಲ್ಲಿ ನೋಡಲಿಲ್ಲ. ಆದರೆ ನನ್ನ ಫೋನ್ ನ್ನು ಪರಿಶೀಲಿಸಿದಾಗ ಬಹುಮಾನ ಗೆದ್ದಿರುವ ಮಾಹಿತಿ ದೃಢಪಟ್ಟಿತು. ನಾನೂ ಮೊದಲು ನಂಬಲಿಲ್ಲ, ಆ ಬಳಿಕ ಅದನ್ನು ಪತ್ನಿಗೆ ತೋರಿಸಿದೆ, ಅದನ್ನು ಆಕೆ ಗೆದ್ದಿರುವ ಸಂಖ್ಯೆಯೇ ಎಂದು ದೃಢಪಡಿಸಿದಳು. ತೆರಿಗೆ ಹಾಗೂ ಇನ್ನಿತರ ಕಡಿತಗಳನ್ನು ಹೊರತುಪಡಿಸಿದರೆ ಅನೂಪ್ ಗೆ ಬಹುಶಃ 15 ಕೋಟಿ ರೂಪಾಯಿ ಹಣ ಸಿಗಲಿದೆ.

ಈ ಹಣದಲ್ಲಿ ಮನೆ ಕಟ್ಟಿಸುವುದು ಹಾಗೂ ಸಾಲ ತೀರಿಸುವುದು ನನ್ನ ಆದ್ಯತೆ ಎಂದು ಅನೂಪ್ ಹೇಳಿದ್ದಾರೆ. ಇದಾದ ಬಳಿಕ ಸಂಬಂಧಿಕರಿಗೆ ಒಂದಷ್ಟು ಸಹಾಯ ಮಾಡುವುದು ಹಾಗೂ ದಾನ ಮಾಡುವುದು, ಕೇರಳದಲ್ಲಿ ಹೊಟೇಲ್ ಉದ್ಯಮದಲ್ಲಿ ಹೂಡಿಕೆ ಮಾಡುವ ಯೋಚನೆಯನ್ನೂ ಅನೂಪ್ ಹೊಂದಿದ್ದಾರೆ.

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಅನೂಪ್, ತಾನು ಮತ್ತೆ ಲಾಟರಿ ಟಿಕೆಟ್ ಖರೀದಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ ಕಳೆದ ವರ್ಷ 12 ಕೋಟಿ ರೂಪಾಯಿ ಮೌಲ್ಯದ ಓಣಂ ಬಂಪರ್ ಲಾಟರಿಯನ್ನೂ ಓರ್ವ ಆಟೋ ರಿಕ್ಷಾ ಚಾಲಕ ಜಯಪಾಲನ್ ಗೆದ್ದಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ