3 ತಿಂಗಳ ಕಂದಮ್ಮನನ್ನು ಕೊಂದು ನೇಣು ಬಿಗಿದುಕೊಂಡ ದಂಪತಿ

ಹೈದರಾಬಾದ್ (ಏಪ್ರಿಲ್ 5, 2023): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರ ದಂಪತಿ ಮೂರು ತಿಂಗಳ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಹೈದರಾಬಾದ್ ಸಮೀಪದ ಚೆವೆಲ್ಲಾ ಮಂಡಲದ ದೇವ್ರಪಲ್ಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮೃತ ದಂಪತಿಯನ್ನು ಅಶೋಕ (30) ಮತ್ತು ಅಂಕಿತಾ (20) ಎಂದು ಗುರುತಿಸಲಾಗಿದ್ದು, ಅವರು ತಮ್ಮ 3 ತಿಂಗಳ ಮಗಳನ್ನು ಮೊದಲು ಕೊಲೆ ಮಾಡಿ, ನಂತರ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದಂಪತಿ ಮಗುವನ್ನು ಸಾಯಿಸುವ ಮೊದಲು ಸಿಕ್ಕಾಪಟ್ಟೆ ಸೌಂಡ್ ಕೊಟ್ಟು ಟೆಲಿವಿಷನ್ ಅನ್ನು ಆನ್ ಮಾಡಿದರು. ನಂತರ, ದಂಪತಿ ನೇಣು ಹಾಕಿಕೊಂಡರು ಎಂದೂ ಹೇಳಲಾಗಿದೆ.
ಟಿವಿಗೆ ಸಿಕ್ಕಾಪಟ್ಟೆ ಸೌಂಡ್ ಕೊಟ್ಟಿದ್ದ ಕಾರಣ ಶಬ್ದದಿಂದ ವಿಚಲಿತರಾಗಿ ನೆರೆಮನೆಯವರು ಬಾಗಿಲು ಬಡಿದರು. ಆದರೆ, ಮನೆಯವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದಿದ್ದಾರೆ. ಅವರು ಮಗು ಮತ್ತು ಅಂಕಿತಾ ಸತ್ತಿರುವುದನ್ನು ಕಂಡುಕೊಂಡರು. ಆ ವೇಳೆ, ಅಶೋಕ್ ಇನ್ನೂ ಉಸಿರಾಡುತ್ತಿದ್ದರು, ನೆರೆಹೊರೆಯವರು ಅಶೋಕ್ನನ್ನು ಕೆಳಕ್ಕೆ ಇಳಿಸಿದರು, ಆದರೆ ಅವರು ಕೆಲವು ನಿಮಿಷಗಳ ನಂತರ ಮೃತಪಟ್ಟರು ಎಂದು ನೆರೆಹೊರೆಯವರು ಹೇಳಿದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು, ಈ ಸಂಬಂಧ ಚೇವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಆದರೆ ಇದು ಕೌಟುಂಬಿಕ ಕಲಹದ ಪರಿಣಾಮ ಇರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.
ಟಿವಿಗೆ ಸಿಕ್ಕಾಪಟ್ಟೆ ಸೌಂಡ್ ಕೊಟ್ಟಿದ್ದ ಕಾರಣ ಶಬ್ದದಿಂದ ವಿಚಲಿತರಾಗಿ ನೆರೆಮನೆಯವರು ಬಾಗಿಲು ಬಡಿದರು. ಆದರೆ, ಮನೆಯವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದಿದ್ದಾರೆ. ಅವರು ಮಗು ಮತ್ತು ಅಂಕಿತಾ ಸತ್ತಿರುವುದನ್ನು ಕಂಡುಕೊಂಡರು. ಆ ವೇಳೆ, ಅಶೋಕ್ ಇನ್ನೂ ಉಸಿರಾಡುತ್ತಿದ್ದರು, ನೆರೆಹೊರೆಯವರು ಅಶೋಕ್ನನ್ನು ಕೆಳಕ್ಕೆ ಇಳಿಸಿದರು, ಆದರೆ ಅವರು ಕೆಲವು ನಿಮಿಷಗಳ ನಂತರ ಮೃತಪಟ್ಟರು ಎಂದು ನೆರೆಹೊರೆಯವರು ಹೇಳಿದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು, ಈ ಸಂಬಂಧ ಚೇವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಆದರೆ ಇದು ಕೌಟುಂಬಿಕ ಕಲಹದ ಪರಿಣಾಮ ಇರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.