ಡಾ. ಮಂತರ್ ಗೌಡ ರವರ ಅಭಿವೃದ್ಧಿ ಚಿಂತನೆಗಳಿಗೆ, ಹೊಸ ರೀತಿಯ ಅಭಿವೃದ್ಧಿ ಯೋಚನೆ-ಯೋಜನೆಗಳಿಗೆ ಕೊಡಗಿನ ಜನರು ಪ್ರತಿಕ್ರಿಯಿಸುತ್ತಿರುವ ರೀತಿ ರಾಜಕೀಯ ವಲಯದಲ್ಲಿ ಆಶ್ಚರ್ಯ ಹುಟ್ಟಿಸಿದೆ.
ಕಳೆದ ನವಂಬರ್, ಡಿಸೆಂಬರ್ ತಿಂಗಳಿಂದ ಮಂತರ್ ಗೌಡ ಅವರ
ಹವಾ ಕೊಡಗಿನಲ್ಲಿ ಜೋರಾಗಿ ನಡೆಯುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
ಜನರೊಂದಿಗಿನ ಚರ್ಚೆ, ಸಂವಾದದ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಹೆಣೆಯಬೇಕು ಎಂಬ ಕರೆಗೆ ಜನರು ಸಕರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನಾನು ರಾಜಕೀಯದ ಸಲುವಾಗಿ ಬಂದವನಲ್ಲ, ಅಭಿವೃದ್ಧಿಗೋಸ್ಕರ ಜನಸೇವೆಗೆ ಬಂದವನು ಎಂಬ ಮಂತರ್ ಗೌಡ ಅವರ ನಿಲುವಿನ ಬಗ್ಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಕಾರ್ಯಕ್ರಮಕ್ಕೂ ಗ್ರಾಮ ಗ್ರಾಮಕ್ಕೂ ಮಂತರಗೌಡ ಭೇಟಿ ನೀಡುತ್ತಿದ್ದಾರೆ. ಗ್ರಾಮದ ಜನರೊಂದಿಗೆ ಅಭಿವೃದ್ಧಿ ವಿಚಾರಗಳನ್ನು ಮಾತ್ರ ಚರ್ಚೆ ಮಾಡುತ್ತಿದ್ದಾರೆ. ರಾಜಕೀಯ ವಿಷಯಗಳನ್ನು ಎಲ್ಲೂ ಚರ್ಚಿಸದ ಮಂತರ್ ಗೌಡ ನಡೆಗೆ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಕೊಡಗಿನ ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಮಂತರ ಗೌಡ
ಯೋಚನೆಗಳನ್ನು ಜನರು ಮೆಚ್ಚಿಕೊಂಡಿದ್ದು ಈಗ ಕೊಡಗಿನ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?