ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

19.5 ತಾಸಲ್ಲಿ 62 ಕಿಮೀ ಸಮುದ್ರ ಈಜಿದ ಬೆಂಗಳೂರಿನ ಮಹಿಳೆ..!

Twitter
Facebook
LinkedIn
WhatsApp
file7kz3ooflvhwsmtlldoy1679439394 6

ಬೆಂಗಳೂರು(ಮಾ.22): ಭಾರತ ಹಾಗೂ ಶ್ರೀಲಂಕಾ ನಡುವೆ ಇರುವ ಪಾಕ್‌ ಜಲಸಂಧಿಯಲ್ಲಿ 62 ಕಿಲೋ ಮೀಟರ್‌ಗಳನ್ನು 19 ಗಂಟೆ, 31 ನಿಮಿಷಗಳಲ್ಲಿ ಈಜಿ ಬೆಂಗಳೂರು ನಿವಾಸಿ ಸುಚೇತಾ ದೆಬ್‌ ಬರ್ಮನ್‌ ಹೊಸ ದಾಖಲೆ ಬರೆದಿದ್ದಾರೆ. ಈ ಸಾಹಸ ಮೆರೆದ ಭಾರತದ ಮೊದಲ ಮಹಿಳೆ ಎನ್ನುವ ಹಿರಿಮೆಗೆ 39 ವರ್ಷದ ಸುಚೇತಾ ಪಾತ್ರರಾಗಿದ್ದಾರೆ.

 

ಅಲ್ಟ್ರಾ-ಮ್ಯಾರಥಾನ್‌ ಈಜುಪಟು ಸುಚೇತಾ, ಮಾ.15ರ ಸಂಜೆ 4.45ಕ್ಕೆ ತಮಿಳುನಾಡಿನ ಧನುಷ್ಕೋಟಿಯ ಓಲ್ಡ್‌ ಹಾರ್ಬರ್‌ನಿಂದ ಈಜು ಆರಂಭಿಸಿ ಶ್ರೀಲಂಕಾದ ತಲೈಮನ್ನಾರ್‌ ಎಂಬ ಸ್ಥಳವನ್ನು ಮಾ.16ರ ಮುಂಜಾನೆ 5 ಗಂಟೆ 5 ನಿಮಿಷಕ್ಕೆ ತಲುಪಿದರು. 25 ನಿಮಿಷಗಳ ವಿಶ್ರಾಂತಿ ಬಳಿಕ ಮುಂಜಾನೆ 5.30ಕ್ಕೆ ಹೊರಟು, ಮತ್ತೆ ಈಜಿಕೊಂಡು ಧನುಷ್ಕೋಟಿ ಬಳಿ ಬಂಗಾಳ ಕೊಲ್ಲಿ ಹಾಗೂ ಹಿಂದು ಮಹಾಸಾಗರ ಸೇರುವ ಅರಿಚಲ್‌ ಮುನ್ನೈ ಎಂಬ ಸ್ಥಳವನ್ನು ಮಾ.16ರ ಮಧ್ಯಾಹ್ನ 12.20ಕ್ಕೆ ತಲುಪಿ ತಮ್ಮ ‘ಸಾಹಸಯಾನ’ವನ್ನು ಪೂರ್ತಿಗೊಳಿಸಿದರು.

2022ರಲ್ಲೇ ಈ ಸಾಹಸಕ್ಕೆ ಕೈಹಾಕಿದ್ದ ಸುಚೇತಾ, 34 ಕಿ.ಮೀ. ಈಜಿದ ಬಳಿಕ ಭುಜದ ಗಾಯಕ್ಕೆ ತುತ್ತಾಗಿ ಅರ್ಧಕ್ಕೆ ನಿಲ್ಲಿಸಿದ್ದರು. ಆ ಬಳಿಕ ಒಂದು ವರ್ಷ ಅಭ್ಯಾಸ ನಡೆಸಿ ಈ ಬಾರಿ ಪಾಕ್‌ ಜಲಸಂಧಿ ಸಾಹಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿ ಸುಚೇತಾ ಬರ್ಮನ್‌?

ತ್ರಿಪುರಾದ ಅಗರ್ತಾಲಾದಲ್ಲಿ ಹುಟ್ಟಿದ ಸುಚೇತಾ ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಾರೆ. 4ನೇ ವಯಸ್ಸಿನಲ್ಲೇ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಈಜು ಅಭ್ಯಾಸ ಆರಂಭಿಸಿದ ಅವರು, ದೇಶದ ಅಗ್ರ ಅಲ್ಟಾ್ರ-ಮ್ಯಾರಥಾನ್‌ ಈಜುಪಟುಗಳ ಪೈಕಿ ಒಬ್ಬರೆನಿಸಿದ್ದಾರೆ. ಎನ್‌ಐಎಸ್‌ ಮಾನ್ಯತೆ ಪಡೆದಿರುವ ಸುಚೇತಾ, ಓಪನ್‌ ವಾಟರ್‌ ಈಜು ಉತ್ಸಾಹಿಗಳು ಹಾಗೂ ಟ್ರಯಥ್ಲಾನ್‌ ಅಥ್ಲೀಟ್‌ಗಳಿಗೆ ವೃತ್ತಿಪರ ತರಬೇತಿ ನೀಡುತ್ತಾರೆ. ಜಾಗತಿಕ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಸುಚೇತಾ, ಭಾರತದ ಕರಾವಳಿಯುದ್ದಕ್ಕೂ ಅಂದರೆ ಗುಜರಾತ್‌ನಿಂದ ಬಂಗಾಳದವರೆಗೂ ಈಜುವ ಗುರಿ ಹೊಂದಿದ್ದಾರೆ.

ಭಾರತ, ಲಂಕಾ ನೌಕಾ ಪಡೆಗಳಿಂದ ಭದ್ರತೆ

ಭಾರತೀಯ ಕಡಲಿನಲ್ಲಿ ಈಜುವಾಗ ಭಾರತೀಯ ನೌಕಾ ಪಡೆ, ಭಾರತೀಯ ಕೋಸ್ಟಲ್‌ ಗಾರ್ಡ್‌ ಸುಚೇತಾ ಅವರಿಗೆ ಭದ್ರತೆ ಒದಗಿಸಿದರೆ, ಲಂಕಾ ಕಡಲಿನಲ್ಲಿ ಶ್ರೀಲಂಕಾ ನೌಕಾ ಪಡೆ ಭದ್ರತೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನ ಒದಗಿಸಿದವು. ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಈಜಿನ ಸಮಯವನ್ನು ದಾಖಲಿಸಿಕೊಂಡರು.

ಬಾಟಲಿಯಲ್ಲಿ ಆಹಾರ ತುಂಬಿ ಎಸೆಯುತ್ತಿದ್ದರು!

ಸುಚೇತಾ ಕಡಿಲನೊಳಗೆಯೇ ಆಹಾರ ಸೇವಿಸುತ್ತಿದ್ದರು. ದೋಣಿಗಳಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ತಂಡ ಬಾಟಲಿಯೊಳಗೆ ದ್ರವರೂಪದ ಆಹಾರವನ್ನು ತುಂಬಿಸಿ ಹಗ್ಗ ಕಟ್ಟಿನೀರಿಗೆ ಎಸೆಯುತ್ತಿದ್ದರು. ಸಮಯ ವ್ಯರ್ಥವಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

ಮುಂಬೈನಲ್ಲಿ ರಿಹರ್ಸಲ್‌!

ಸುಚೇತಾ ಪಾಕ್‌ ಜಲಸಂಧಿಯಲ್ಲಿ ಈಜುವ ಮೊದಲು ಮಾನಸಿಕ ಹಾಗೂ ದೈಹಿಕ ಫಿಟ್ನೆಸ್‌ ಪರೀಕ್ಷೆ ನಡೆಸಲು ಈ ವರ್ಷ ಜನವರಿಯಲ್ಲಿ ಮುಂಬೈನ ವೊರ್ಲಿ ಕಡಲತೀರದಿಂದ 40 ಕಿ.ಮೀ. ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ರಾತ್ರಿ ಈಜಿಕೊಂಡು ತೆರಳಿದ್ದರು. 40 ಕಿ.ಮೀ. ದೂರವನ್ನು 7 ಗಂಟೆ 26 ನಿಮಿಷಗಳಲ್ಲಿ ಪೂರ್ತಿಗೊಳಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist