ಶುಕ್ರವಾರ, ಮೇ 17, 2024
ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

15 ಅಡಿ ಆಳದ ಗುಹೆಯೊಳಗೆ 2 ದಿನದಿಂದ ಸಿಲುಕಿದ ವ್ಯಕ್ತಿ; ರಕ್ಷಣಾ ಕಾರ್ಯಕ್ಕೆ ಹರಸಾಹಸ

Twitter
Facebook
LinkedIn
WhatsApp
15 ಅಡಿ ಆಳದ ಗುಹೆಯೊಳಗೆ 2 ದಿನದಿಂದ ಸಿಲುಕಿದ ವ್ಯಕ್ತಿ; ರಕ್ಷಣಾ ಕಾರ್ಯಕ್ಕೆ ಹರಸಾಹಸ

ತೆಲಂಗಾಣದ (Telangana) ಕಾಮರೆಡ್ಡಿ ಜಿಲ್ಲೆಯಲ್ಲಿ (Kamareddy District) 30 ಗಂಟೆಗಳಿಗೂ ಹೆಚ್ಚು ಕಾಲ (ಸುಮಾರು ಒಂದೂವರೆ ದಿನ) ವ್ಯಕ್ತಿಯೊಬ್ಬ ಗುಹೆಯೊಳಗೆ (Cave) ಸಿಲುಕಿದ್ದಾನೆ. ಗುಹೆಯೊಳಗೆ ಸಿಲುಕಿರುವ ವ್ಯಕ್ತಿಯನ್ನು ರಕ್ಷಿಸಲು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸುತ್ತಿದ್ದಾರೆ. 2 ಬಂಡೆಗಳ (Boulders) ನಡುವೆ ರೂಪುಗೊಂಡ ಗುಹೆಯಿಂದ ಆತನನ್ನು ರಕ್ಷಿಸಲು ರಕ್ಷಣಾ ಅಧಿಕಾರಿಗಳು ಜೆಸಿಬಿ (JCB) ಯಂತ್ರದ ಮೊರೆ ಹೋಗಿದ್ದು, ಗುಹೆಯಿಂದ ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. 

ರೆಡ್ಡಿಪೇಟ್ ಗ್ರಾಮದಲ್ಲಿ (Reddypet Village) ಸಿಕ್ಕಿಬಿದ್ದ ವ್ಯಕ್ತಿಯನ್ನು ರಾಜು ಎಂದು ಗುರುತಿಸಲಾಗಿದ್ದು, 2 ಬಂಡೆಗಳ ನಡುವೆ ರೂಪುಗೊಂಡ 15 ಅಡಿ ಆಳದ ಗುಹೆಯೊಳಗೆ ಸಿಕ್ಕಿಬಿದ್ದಿದ್ದಾರೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಮಂಡಲದಲ್ಲಿ ಆತ 30 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ರೆಡ್ಡಿ ಪೇಟ್‌ ಗ್ರಾಮದಿಂದ ಗಣಪುರ ತಾಂಡಾ ಮಾರ್ಗವಾಗಿ ಸಿಂಗರಾಯಪಲ್ಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ರಾಜು ಕಾಡಿನಲ್ಲಿ ಸುತ್ತಾಡಲು ತೆರಳಿದ್ದರು. ಈ ವೇಳೆ ಬಂಡೆಗಳ ಮೇಲೆ ನಡೆಯುತ್ತಿದ್ದಾಗ ರಾಜು ಬಂಡೆಗಳ ನಡುವಿನ ಗುಹೆಯೊಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ