ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

10ನೇ ಕ್ಲಾಸ್‌ ಬಿಟ್ಟು ಮನೆ ಕೆಲಸ, ಬೀಡಿ ಕಟ್ಟುತ್ತಿದ್ದ ಹುಡುಗ ಈಗ ಅಮೆರಿಕದಲ್ಲಿ ನ್ಯಾಯಾಧೀಶ!

Twitter
Facebook
LinkedIn
WhatsApp
tdy 5 7 620x372 1

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಧೀಶರಾಗಿ ಕೇರಳ ಮೂಲದ 51 ವರ್ಷದ ಸುರೇಂದ್ರನ್ ಕೆ ಪಟ್ಟೇಲ್ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಅನೇಕ ಪ್ರಮುಖ ಹುದ್ದೆಗಳನ್ನು ಭಾರತೀಯರು ಅಲಂಕರಿಸುತ್ತಿರುವುದು ಹೊಸ ವಿಚಾರವಲ್ಲ. ಆದರೆ ಸುರೇಂದ್ರನ್ ಅವರು ಬೆಳೆದು ಬಂದ ಹಾದಿ, ಎಂತಹವರಿಗೂ ಸ್ಫೂರ್ತಿದಾಯಕ.

ಕಡುಬಡತನದ ಕುಟುಂಬದಲ್ಲಿ ಜನಿಸಿ, ಬೀಡಿ ಕಟ್ಟುತ್ತಾ, ಮನೆಗೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಲೇ ಕಷ್ಟಪಟ್ಟು ಶಿಕ್ಷಣ ಪೂರೈಸಿದ್ದ ಅವರು ಅಮೆರಿಕದಲ್ಲಿ ಯಶಸ್ಸು ಕಂಡಿದ್ದಾರೆ.

surendra k pattel 96831189

ಕೇರಳದ ಕಾಸರಗೋಡು ಮೂಲದವರಾದ ಸುರೇಂದ್ರನ್‌ ಬಡ ಕುಟುಂಬದಲ್ಲಿ ಹುಟ್ಟಿ ಬೆಳದವರು, ಈ ಬಗ್ಗೆ ಮಾತಾನಾಡುವ ಅವರು, “ನಾನು ಹತ್ತನೇ ತರಗತಿ ಮುಗಿದ ಬಳಿಕ ಶಾಲೆಗೆ ಹೋಗಲಿಲ್ಲ. ಏಕಂದರೆ ನನ್ನನ್ನು ಶಾಲೆಗೆ ಕಳುಹಿಸಲು ನನ್ನ ಕುಟುಂಬದ ಬಳಿ ಹಣವಿರಲಿಲ್ಲ. ಶಾಲೆಗೆ ಹೋಗದೇ ಬೀಡಿ ಕಟ್ಟುಗಳನ್ನು ರೋಲ್‌ ಮಾಡಲು ಹೋಗುತ್ತಿದ್ದೆ. ಮನೆ ಕೆಲಸಕ್ಕೆ ಅಲ್ಲಿ ಇಲ್ಲಿ ಹೋಗುತ್ತಿದ್ದೆ. ಹೀಗೆ ಹೋಗುತ್ತಿದ್ದಾಗ ನನ್ನ ಜೀವನದ ದೃಷ್ಟಿಕೋನ ದಿನ ಕಳೆದಂತೆ ಏನಾದರು ಮಾಡಬೇಕೆನ್ನುವ ಕಡೆಗೆ ವಾಲಿತು” ಎನ್ನುತ್ತಾರೆ.

ನನ್ನ ಮನೆಯ ಪಕ್ಕದವರು, ಊರಿನವರು ನನ್ನ ಶಿಕ್ಷಣಕ್ಕೆ ಸಹಾಯ ಮಾಡಿದರು. ಇದರಿಂದ ನಾನು ಕಾನೂನು ಪದವಿ ಶಿಕ್ಷಣವನ್ನು ಮುಗಿಸಲು ಸಾಧ್ಯವಾಯಿತು. ಓದುವ ಸಮಯದಲ್ಲಿ ಖರ್ಚಿಗಾಗಿ ಮನೆ ಕೆಲಸಕ್ಕೂ ಹೋಗುತ್ತಿದ್ದೆ. ಎಲ್‌ ಎಲ್‌ ಬಿ ಓದು ಮುಗಿಸಿದ ಬಳಿಕ ಭಾರತದಲ್ಲಿ ಕಾನೂನಿನ ಅಭ್ಯಾಸವನ್ನು ಮಾಡಿದ ಪರಿಣಾಮ ಇದು ನನಗೆ ಅಮೆರಿಕಾದಲ್ಲಿ ತುಂಬಾ ಸಹಾಯ ಮಾಡಿತು” ಎನ್ನುತ್ತಾರೆ ಸುರೇಂದ್ರನ್.

ನಾನು ಟೆಕ್ಸಾಸ್‌ ನಲ್ಲಿ ಈ ಸ್ಥಾನಕ್ಕಾಗಿ ಸ್ಪರ್ಧಿಸಿದಾಗ, ನನ್ನ ಉಚ್ಚಾರಣೆಯನ್ನು ಕೆಲ ಮಂದಿ ವ್ಯಂಗ್ಯವಾಡಿದರು. ನನ್ನ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡಿದರು. ನನ್ನ ಪಕ್ಷ ಕೂಡ ನಾನು ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಯಾರೂ ಕೂಡ ನಾನು ಇದನ್ನು ಸಾಧಿಸುತ್ತೇನೆ ಎಂದು ನಂಬಿರಲಿಲ್ಲ. ನಾನು ಎಲ್ಲರಿಗೂ ಮಾತು ಹೇಳುತ್ತೇನೆ, ಯಾರನ್ನೂ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಬೇಕಿರುವುದು ಎನ್ನುತ್ತಾರೆ ಸುರೇಂದ್ರನ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ