ಮಡಿಕೇರಿ: ಕೊಡಗಿನ ಯುವನಾಯಕ ಡಾ. ಮಂತರ್ ಗೌಡ ಕೊಡಗು ಮಾತ್ರವಲ್ಲದೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಆಧುನಿಕ ಅಭಿವೃದ್ಧಿ ಚಿಂತನೆಯ ‘ಸಮೃದ್ಧ ಕೊಡಗು’ ಎಂಬ ಪರಿಕಲ್ಪನೆ.
ಸಮೃದ್ಧ ಕೊಡಗು ಎಂಬ ಪರಿಕಲ್ಪನೆಯ ಮೂಲಕ ಆಧುನಿಕ ಅಭಿವೃದ್ಧಿ ಚಿಂತನೆಗಳ ಬಗ್ಗೆ ಜನರೊಂದಿಗೆ ಮಾತನಾಡುತ್ತಿರುವ
ಯುವನಾಯಕ ಡಾ. ಮಂತರ್ ಗೌಡ ಜನರ ಗಮನ ಸೆಳೆಯುತ್ತಿದ್ದಾರೆ.
ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಬಹಳಷ್ಟು ಸಂಚಲನ ಸೃಷ್ಟಿ ಮಾಡಿದ್ದ, ಮಂತರ್ ಗೌಡ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಆದರೆ ನಿರಂತರ ಕೊಡಗಿನ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದ ಮಂತರ್ ಗೌಡ ತನ್ನ ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯಿಂದ ಕೊಡಗಿನಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ತನ್ನ ಜ್ಞಾನ ಹಾಗೂ ತಿಳುವಳಿಕೆಯಿಂದ ಹೊಸ ಯೋಜನೆಗಳ ಬಗ್ಗೆ ಮಾತನಾಡುತ್ತಿರುವ ಮಂತರ್ ಗೌಡ ಈ ಚುನಾವಣೆಯಲ್ಲಿ ಬಹುದೊಡ್ಡ ಆರಂಭವನ್ನು ಕೊಡಗಿನಲ್ಲಿ ಘೋಷಿಸಿದ್ದಾರೆ.
ಅವರ ಮಾತುಗಳು ಬಹಳಷ್ಟು ಜನರಿಗೆ ಹತ್ತಿರವಾಗುತ್ತಿದೆ. ಜೊತೆಯಾಗಿ ಅಭಿವೃದ್ಧಿಯಲ್ಲಿ ಸಾಗುವ ಎಂಬ ಹೇಳಿಕೆಗಳು ಜನರನ್ನ ಆಕರ್ಷಿಸುತ್ತಿದೆ. ಮಂತರ್ ಗೌಡ ಅವರ ಟ್ವೀಟ್ಗಳು ಅವರ ಹೊಸ ಆಲೋಚನೆ ಯ ಪರಿಕಲ್ಪನೆಯನ್ನು ತೆರೆದಿಡುತ್ತಿವೆ.
ಕೆಲವೇ ತಿಂಗಳುಗಳಲ್ಲಿ ಮಂತರ್ ಗೌಡ ಕೊಡಗಿನ ಮನೆ ಮನೆಗಳಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದು, ಅವರ ಯೋಚನೆ ಯೋಜನೆಗಳಿಗೆ ಜನರು ಜೊತೆ ನೀಡುತ್ತಿದ್ದು ಕುತೂಹಲ ಕೆರಳಿಸಿದೆ. ಚುನಾವಣೆ ಹಾಗೂ ರಾಜಕೀಯಕ್ಕೆ ನಾನು ಜನಸೇವೆಗೆ ಬಂದಿಲ್ಲ ಎಂಬ ಅವರ ಮಾತು ಜನರಲ್ಲಿ ಅವರ ಬಗೆಗಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಕೊಡಗಿನ ಹಾಗು ರಾಜ್ಯದ ರಾಜಕೀಯದಲ್ಲಿ ಮಂತರ್ ಗೌಡ ಗಮನ ಸೆಳೆಯುತ್ತಿದ್ದಾರೆ. ರಸ್ತೆ, ಆರೋಗ್ಯ, ಶಿಕ್ಷಣ, ಉದ್ಯೋಗ ಈ ರೀತಿಯಾಗಿ ಕೊಡಗಿನ ಪ್ರತಿಯೊಂದು ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿ, ಹೊಸ ಯೋಚನೆ,ಯೋಜನೆಗಳನ್ನುಗಳನ್ನು ಹೆಣೆಯುತ್ತಿರುವ ಡಾ. ಮಂತರ್ ಗೌಡ ಕೊಡಗಿನ ಜನರ ಪ್ರೀತಿಗೆ ಪಾತ್ರವಾಗುತ್ತಿದ್ದಾರೆ.
ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?