ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಶಾಲಾ ಮಕ್ಕಳಿಗೆ ‘ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ

Twitter
Facebook
LinkedIn
WhatsApp
census1655064901 1

ಮುಂಬೈ: ಥಾಣೆಯ (Thane) ಗೋಧ್‌ಬಂದರ್ ರಸ್ತೆಯಲ್ಲಿರುವ ನ್ಯೂ ಹಾರಿಜಾನ್ ಸ್ಕಾಲರ್ಸ್ ಸ್ಕೂಲ್, ಸುಮಾರು ಐದರಿಂದ ಎಂಟು ವಿದ್ಯಾರ್ಥಿಗಳ (Students) ಪೋಷಕರಿಗೆ ತಮ್ಮ ಡೈರಿ ಮತ್ತು ಗುರುತಿನ ಚೀಟಿಗಳಿಗೆ ಶುಲ್ಕವನ್ನು (Fees) ಪಾವತಿಸಲು ಗಡುವು ಸಮೀಪಿಸುತ್ತಿರುವ ಬಗ್ಗೆ ನೆನಪಿಸಲು ಸೋಮವಾರ (April 17) ವಿದ್ಯಾರ್ಥಿಗಳಿಗೆ ‘ನಾಳೆ ನಾನು ₹300 ತರಲು ಮರೆಯುವುದಿಲ್ಲ’ ಎಂದು ಮೂವತ್ತು ಬಾರಿ ಬರೆಸಿದೆ. ಶುಲ್ಕವನ್ನು ಪಾವತಿಸಲು ಗಡುವು ಏಪ್ರಿಲ್ 20 ಆಗಿತ್ತು. ಶುಲ್ಕವನ್ನು ಕೊಡಲು ಪೋಷಕರಿಗೆ (Parents) ನೆನಪಿಸುವ ನೆಪದಲ್ಲಿ ಮಕ್ಕಳಿಗೆ ಶಿಕ್ಷೆಯನ್ನು ನೀಡಲಾಗಿದೆ. ಇದೆ ವಿಷಯಕ್ಕೆ ಈಗ ಥಾಣೆಯ ಈ ಶಾಲೆ ಭಾರಿ ಟೀಕೆಗೆ ಒಳಗಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಿದ್ಯಾರ್ಥಿಯ ಪೋಷಕರು, “ಇದು ಕ್ಷಮಿಸಲಾಗದು ಏಕೆಂದರೆ ಆಘಾತಕ್ಕೊಳಗಾದ ನನ್ನ ಮಗ ಮರುದಿನ ಶಾಲೆಗೆ ಹೋಗಲು ಸಿದ್ಧವಾಗಿಲ್ಲ.” ಶಿಕ್ಷೆಯನ್ನು ಎದುರಿಸಿದ ಇನ್ನೊಬ್ಬ ಪೋಷಕರ ಮಗ, “ಈ ವಾಕ್ಯದ ಬದಲು ಮಕ್ಕಳಿಗೆ ಪಠ್ಯ ಪುಸ್ತಕದಿಂದ ಪ್ಯಾರಾಗ್ರಾಫ್ ಅನ್ನು ಐದು ಬಾರಿ ಬರೆಯುವಂತೆ ಮಾಡಬಹುದಿತ್ತು. ನನ್ನ ಮಗ ಅವಮಾನಕ್ಕೊಳಗಾಗಿದ್ದಾನೆ. ಘಟನೆಯಿಂದ ಉಂಟಾದ ಅವರ ಭಾವನಾತ್ಮಕ ಸಂಕಟವನ್ನು ಯಾರು ಸರಿ ಮಾಡುತ್ತಾರೆ?” ಎಂದು ಶಾಲೆಯ ಈ ನಡತೆಯನ್ನು ಧೂಷಿಸಿದರು.

ಶಿಕ್ಷಕರು ನೀಡಿದ ಈ ಶಿಕ್ಷೆಯನ್ನು ಒಬ್ಬ ವಿದ್ಯಾರ್ಥಿ ಬರೆಯಲು ನಿರಾಕರಿಸಿದಾಗ, “ಶಿಕ್ಷಕರು ಅವಳನ್ನು ತರಗತಿಯ ಮೂಲೆಗೆ ಕಳುಹಿಸಿ ಅಲ್ಲಿ ನಿಂತುಕೊಂಡು ಬರೆಯಲು ಹೇಳಿದರು” ಎಂದು ಇನ್ನೊಬ್ಬ ಪೋಷಕರು ಹೇಳಿದರು.

ಮಂಗಳವಾರ (ಏಪ್ರಿಲ್ 18), ಪೋಷಕರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಘಟನೆಯನ್ನು ಆಡಳಿತ ಮಂಡಳಿಗೆ ವರದಿ ಮಾಡಿದ್ದಾರೆ, ನಂತರ ಉಪ ಪ್ರಾಂಶುಪಾಲರು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದಾರೆ. ಪೋಷಕರು, “ನಾನು ಶಾಲೆಗೆ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ ಹಲವು ಬಾರಿ ಶಿಕ್ಷಕರನ್ನು ಭೇಟಿಯಾಗಲು ಬಯಸಿದ್ದೆವು ಆದರೆ ಪೋಷಕರ ವಿನಂತಿಯನ್ನು ನಿರಾಕರಿಸಲಾಗಿತ್ತು. ಶಾಲೆಯೊಳಗೆ ಪ್ರವೇಶಿಸಲು ಸಹ ನಮಗೆ ಅವಕಾಶ ನೀಡಲಿಲ್ಲ. ಆದರೆ, ಈಗ ಉಪ ಪ್ರಾಂಶುಪಾಲರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಆದರೆ ನಮ್ಮ ಮಕ್ಕಳು ಎದುರಿಸಿದ ಅವಮಾನಕ್ಕೆ ಉತ್ತರ ನೀಡಿಲ್ಲ. ಶುಲ್ಕದ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸದಂತೆ ಈ ಹಿಂದೆ ಪೋಷಕರ ಗುಂಪು ಆಡಳಿತ ಮಂಡಳಿಗೆ ವಿನಂತಿಸಿದೆ’ ಎಂದು ಪೋಷಕರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist