ಶುಕ್ರವಾರ, ಏಪ್ರಿಲ್ 19, 2024
Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!-ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್: ಬಾಂಬರ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ 10 ದಿನಗಳ ಕಾಲ ಎನ್ಐಎ ವಶಕ್ಕೆ.!-ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ; ಇಬ್ಬರು ಪ್ರಯಾಣಿಕರು ಪಾರು..!-ಆರ್ಸಿಬಿ ತಂಡದ ಫಿನಿಷಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಟಿ-20 ವಿಶ್ವ ಕಪ್ ಗೆ ಆಯ್ಕೆಯಾಗ್ತರಾ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು

Twitter
Facebook
LinkedIn
WhatsApp
ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು

ಬರೀಲಿ: ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯ ಮೇಲೆ ವರನು (Groom)  ವಧುವನ್ನು (Bride) ಚುಂಬಿಸಿದ (Kiss) ಹಿನ್ನೆಲೆ ವಧು ಮದುವೆಯನ್ನು (Wedding)  ಮುರಿದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್‍ನಲ್ಲಿ ನಡೆದಿದೆ.

23 ವರ್ಷದ ಯುವತಿ ಪೋಷಕರು ನೋಡಿದ 26 ವರ್ಷದ ವಿವೇಕ ಅಗ್ನಿಹೋತ್ರಿ ಎಂಬ ಯುವಕನನ್ನು ಮದುವೆಯಾಗುತ್ತಿದ್ದಳು. ಮದುವೆ ಕಾರ್ಯಕ್ರಮವೂ ನಡೆದಿತ್ತು. ಹಾರ ಬದಲಿಸಿದ ಬಳಿಕ ಮದುವೆಯಾಗುತ್ತಿದ್ದ ಯುವಕ ತನ್ನ ಪತ್ನಿಯಾಗಬೇಕಿದ್ದ ಯುವತಿಗೆ ವೇದಿಕೆಯ ಮೇಲೆ ಚುಂಬಿಸಿದ. ಚುಂಬನದ ಬಳಿಕ ಯುವತಿ ಮದುವೆಯನ್ನೇ ಮುರಿದು ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾಳೆ. 

ವರ ತನ್ನ ಸ್ನೇಹಿತರ ಜೊತೆಗೆ ಬೆಟ್ಟಿಂಗ್‌ ಕಟ್ಟಿ ಎಲ್ಲರ ಎದುರು ನನಗೆ ಮುತ್ತು ನೀಡಿದ್ದಾನೆ. ವೇದಿಕೆಯ ಮೇಲೆ ಇದ್ದಾಗಲೇ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಿಲ್ಲ. ಅವನು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾನೆ ಗೊತ್ತಿಲ್ಲ ಆದರೆ ಅವನ ನಡವಳಿಕೆಯಿಂದ ನಾನು ಆಘಾತಗೊಂಡಿದ್ದು, ಅನುಮಾನವೂ ಹೆಚ್ಚಿದೆ ಹೀಗಾಗಿ ನಾನು ಮದುವೆಯಾಗದಿರಲು ನಿರ್ಧರಿಸಿದ್ದೇನೆ ಎಂದು ವಧು ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಬಹ್ಜೋಯ್ ಸ್ಟೇಷನ್ ಹೌಸ್ ಠಾಣೆ ಪೊಲೀಸರು ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ಯುವತಿ ಯಾವುದೇ ಸಂಧಾನಕ್ಕೆ ಒಪ್ಪಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಕೆಲವು ದಿನಗಳ ಸಮಯ ನೀಡಲು ಮನವಿ ಮಾಡಿದ್ದು, ಆಘಾತದಿಂದ ಹೊರ ಬಂದ ಬಳಿಕ ಮನವೊಲಿಸುವ ಭರವಸೆ ನೀಡಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ