ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಎರಡು ಸ್ಥಾನಗಳ ವಿಧಾನಪರಿಷತ್ತು ಚುನಾವಣೆಗಾಗಿ ರಾಜಕೀಯ ವೇದಿಕೆ ಸಿದ್ಧವಾಗುತ್ತದೆ. ಪ್ರಥಮ ಪ್ರಾಶಸ್ತ್ಯದ ಸಂಪೂರ್ಣ ಮತಗಳಿರುವ ಕರಾವಳಿ ಬಿಜೆಪಿ ನಿರಾಳವಾಗಿದೆ. ಸುಲಭವಾಗಿ ಒಂದು ಸ್ಥಾನ ಬಿಜೆಪಿಗೆ ದಕ್ಕಲಿದೆ ಎಂದು ಅಭಿಪ್ರಾಯಪಡಲಾಗಿದೆ.
ಈ ನಡುವೆ ಎಂಎನ್ ರಾಜೇಂದ್ರಕುಮಾರ್ ಪಾಳಯ ಬಿರುಸಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ರಾಜೇಂದ್ರಕುಮಾರ್ ಪಾಳಯ ತನ್ನ ಚಟುವಟಿಕೆಗಳನ್ನು ಬಿರುಸಿನಿಂದ ಆರಂಭಿಸಿದೆ. ಇದರ ಮೊದಲ ಹಂತವಾಗಿ ಚುನಾವಣಾ ಉಸ್ತುವಾರಿಗಳನ್ನು ಘೋಷಿಸಿದೆ.
ಪ್ರತಿ ತಾಲೂಕಿನಲ್ಲಿ ಚುನಾವಣಾ ಉಸ್ತುವಾರಿಗಳನ್ನು ಘೋಷಿಸಿದೆ. ಈ ಚುನಾವಣೆ ಉಸ್ತುವಾರಿ ಗಳಲ್ಲಿ ಬಹುತೇಕ ಮಂದಿ ಕಾಂಗ್ರೆಸ್ ನಾಯಕರು ಗಳಿರುವುದು ಈಗ ಕುತೂಹಲ ಮೂಡಿಸಿದೆ.
ಈ ನಡುವೆ ಕರಾವಳಿಯ ಕಾಂಗ್ರೆಸ್ ಸಂಪೂರ್ಣವಾಗಿ ಗೊಂದಲದಲ್ಲಿ ಇದೆ ಎನ್ನಲಾಗುತ್ತಿದೆ. ಎರಡನೇ ಸ್ಥಾನ ಕಾಂಗ್ರೆಸ್ಸಿಗೆ ಸುಲಭವಾಗಿ ದಕ್ಕಬಹುದಾದರೂ, ರಾಜೇಂದ್ರಕುಮಾರ್ ಸ್ಪರ್ಧೆಯಿಂದ ಅದು ಈಗ ಸಮಸ್ಯೆಯಿಂದ ಕೂಡಿದೆ ಎಂದು ಕಾಂಗ್ರೆಸ್ ಆಂತರಿಕ ಮೂಲಗಳಿಂದ ವರದಿಯಾಗಿದೆ.
ಈ ನಡುವೆ ತಂತ್ರಗಾರಿಕೆ ಇಲ್ಲದ ಕರಾವಳಿಯ ನಾಯಕತ್ವ ಹಾಗೂ ಸಿದ್ಧರಾಮಯ್ಯ, ಬಿಕೆ ಹರಿಪ್ರಸಾದ್, ಡಿಕೆಶಿ ಅವರ ಅನಗತ್ಯ ಹಸ್ತಕ್ಷೇಪ ಕರಾವಳಿ ಕಾಂಗ್ರೆಸ್ಸನ್ನು ಗೊಂದಲದಲ್ಲಿ ಮುಳುಗಿಸಿದೆ. ಕರಾವಳಿ ಕಾಂಗ್ರೆಸ್ಸಿನ ಗುಂಪುಗಾರಿಕೆಗೆ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹಾಗೂ ಡಿಕೆಶಿ ಅವರ ಬಹುದೊಡ್ಡ ಕಾಣಿಕೆ ಇದೆಯೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿಧಾನ ಪರಿಷತ್ತು ಅಭ್ಯರ್ಥಿಯ ಆಯ್ಕೆಯಲ್ಲಿ ಈ ನಾಯಕರುಗಳು ಹಸ್ತಕ್ಷೇಪ ಮುಂದುವರಿದಿದ್ದು, ಕರಾವಳಿ ಕಾಂಗ್ರೆಸ್ ನಾಯಕರುಗಳು ಬಣಗಳ ನಡುವೆ ವಿಭಜನೆಗೊಂಡು ಪರಸ್ಪರ ಗುದ್ದಾಡುತ್ತ, ಈಗ ಬಿಜೆಪಿಯ ಚಕ್ರವ್ಯೂಹದೊಳಗೆ ಸಿಲುಕಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಚಕ್ರವ್ಯೂಹವನ್ನು ಕಾಂಗ್ರೆಸ್ ಭೇದಿಸುತ್ತಾ ಅಥವಾ ಚಕ್ರವ್ಯೂಹದೊಳಗೆ ಸಿಲುಕಿ ಮುಂದಿನ ವಿಧಾನಸಭಾ ಚುನಾವಣೆಗೆ ಸಮಸ್ಯೆಯನ್ನು ಎಳೆದಾಡುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.
ರಾಷ್ಟ್ರೀಯ , ರಾಜ್ಯ ನಾಯಕರುಗಳು ಎಂದು ಎಐಸಿಸಿ ಮಟ್ಟದಲ್ಲಿರುವ ಹಲವಾರು ಮಂದಿ ನಾಯಕರುಗಳು ಕರಾವಳಿ ಕಾಂಗ್ರೆಸ್ ನಲ್ಲಿ ಇದ್ದರು, ಕರಾವಳಿಯಲ್ಲಿ ಕಾಂಗ್ರೆಸ್ಸಿಗೆ ತಂತ್ರಗಾರಿಕೆ ಮಾಡಲು ಸಾಧ್ಯವಾಗದೆ ಹೊರ ಜಿಲ್ಲೆ, ರಾಜ್ಯಗಳಲ್ಲಿ ತಂತ್ರಗಾರಿಕೆ ಮಾಡಲು ತೆರಳುತ್ತಿರುವುದು ಹಾಸ್ಯಸ್ಪದ ಎಂದು ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಅಭಿಪ್ರಾಯಪಡುತ್ತಾರೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?