ಶುಕ್ರವಾರ, ಮಾರ್ಚ್ 29, 2024
ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣಕ್ಕೆ ಪವನ್ ಕಲ್ಯಾಣ್ ಸ್ಟಾರ್ ಪ್ರಚಾರಕ.?-ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

Twitter
Facebook
LinkedIn
WhatsApp
ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಹೊಂದಲು ಏನೆಲ್ಲ ಸ್ಟಂಟ್​ಗಳನ್ನು ಮಾಡುತ್ತಿದ್ದಾರೆ ಜನರು. ಸ್ಟಂಟ್ ಮಾಡಲು ಹೋಗಿ ಅವಘಡಕ್ಕೂ ಈಡಾಗುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಹೊಟ್ಟೆಪಾಡಿಗಾಗಿ ಹೀಗೆ ಬದುಕುವವರು ಕಣ್ಣಿಗೆ ಬೀಳುವುದು ಅಪರೂಪ. ಗುಲ್ಜಾರ್ ಸಹಾಬ್​ ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. 88,800 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರಂತೂ ಇವನೇ ನಿಜವಾದ ಬಾಹುಬಲಿ ಎಂದು ಕೊಂಡಾಡುತ್ತಿದ್ದಾರೆ.

ಬೈಕ್​ ಓಡಿಸುವುದನ್ನ ಕಲಿಯುವುದು ಒಂದು ಸಾಹಸವಾದರೆ ಹೀಗೆ ಇಷ್ಟು ಭಾರದ ಬೈಕ್​ ಅನ್ನು ತಲೆಯಮೇಲೆ ಹೊತ್ತು ಏಣಿ ಏರುವ ಸಾಹಸ ಇದೆಯಲ್ಲ ಇದು ಸಾಮಾನ್ಯರಿಗೆ ಒದಗುವಂಥದ್ದಲ್ಲ. ಏಣಿಗೆ ಕೈಮುಗಿದು ಒಂದೊಂದು ಮೆಟ್ಟಿಲುಗಳನ್ನು ಅವ ಏರುವ ಕ್ರಮ ಅಪರೂಪದಲ್ಲಿ ಅಪರೂಪ.

ನೆಟ್ಟಿಗರನ್ನಂತೂ ಈ ವಿಡಿಯೋ ಕಣ್ಣುಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದೆ. ಅವನ ಕುತ್ತಿಗೆಯಲ್ಲಿರುವ ತ್ರಾಣ ನನಗೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

ನಿಜವಾದ ಬಾಹುಬಲಿಯಪ್ಪಾ ನೀನು ಎನ್ನುತ್ತಿದ್ದಾರೆ ಹಲವರು. ಇವನು ಯಾವ ಸಾಹಸ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲ. ತನ್ನ ಕುಟುಂಬದ ಹೊಟ್ಟೆಬಟ್ಟೆನೆತ್ತಿ ಕಾಯಲು ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ ಮತ್ತೂ ಕೆಲವರು. ಆದರೆ ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿಲ್ಲ.

ಇವನ ಆತ್ಮವಿಶ್ವಾಸವನ್ನು ಯಾರೂ ಮೆಚ್ಚತಕ್ಕಂಥದ್ದು. ಅಪಾಯಕ್ಕೆ ತೆರೆದುಕೊಂಡು ನಿತ್ಯವೂ ಹೀಗೆ ಹೊಟ್ಟೆ ಹೊರೆಯುವವರ ಬಗ್ಗೆ ಸಹಾನುಭೂತಿ ಇರಲಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ