ಜೈಪುರ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ ಸದ್ಯ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಶುಕ್ರವಾರ 100 ದಿನ ಪೂರೈಸಲಿದೆ.
ಬುಧವಾರ ಬೆಳಿಗ್ಗೆ ರಾಜಸ್ಥಾನದ ಭಡೋಟಿ ಪ್ರದೇಶದಿಂದ ಆರಂಭವಾದ ಪಾದಯಾತ್ರೆ ವಿರಾಮದ ವೇಳೆಗೆ ಬಾದ್ ಶಾ ಪುರ ತಲುಪಿತ್ತು.
‘ರಾಹುಲ್ ಗಾಂಧಿಜಿ ಅವರೊಂದಿಗೆ ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೆಜ್ಜೆ ಹಾಕಿದರು. ದೇಶವನ್ನು ಒಗ್ಗೂಡಿಸುವ ಯಾತ್ರೆಯ ಪರವಾಗಿ ನಿಲ್ಲುವವರ ಸಂಖ್ಯೆ ಏರುತ್ತಿದ್ದು, ದ್ವೇಷ ಹರಡುವವರ ವಿರುದ್ಧದ ನಮ್ಮ ಈ ಹೋರಾಟದಲ್ಲಿ ಯಶಸ್ಸು ಗಳಿಸುತ್ತೇವೆ’ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಸೆಪ್ಟೆಂಬರ್ 2013 ಮತ್ತು ಸೆಪ್ಟೆಂಬರ್ 2016ರ ನಡುವೆ ಆರ್ಬಿಐ ಗವರ್ನರ್ ಆಗಿ ಡಾ. ರಘುರಾಮ್ ರಾಜನ್ ಸೇವೆ ಸಲ್ಲಿಸಿದ್ದರು.
2003ರಿಂದ 2006ರ ನಡುವೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ಮುಖ್ಯ ಆರ್ಥಿಕ ತಜ್ಞ ಮತ್ತು ಸಂಶೋಧನಾ ನಿರ್ದೇಶಕರಾಗಿಯೂ ರಾಜನ್ ಕೆಲಸ ಮಾಡಿದ್ದರು.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?