ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ಹೊಸದಿಲ್ಲಿ: ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವಿನ ವಿವಾದ ತಾರಕಕ್ಕೇರಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬ್ಲೂಟಿಕ್ ಹಿಂಪಡೆದ ನಂತರ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ವಾರ್ ಶುರುವಾಗಿದೆ.
ವಿವಾದದ ನಂತರ ಟ್ವಿಟರ್ ಸಂಸ್ಥೆಯು ಆರ್ಎಸ್ಎಸ್ ರಾಷ್ಟ್ರೀಯ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಬಿಜೆಪಿಯ ನಾಲ್ವರು ನಾಯಕರ ಬ್ಲೂಟಿಕ್ ರದ್ದುಮಾಡಿದೆ.
ಆರೆಸ್ಸೆಸ್ ನಾಯಕರಾದ ಅರುಣ್ ಕುಮಾರ್, ಸುರೇಶ್ ಜೋಶಿ ಮತ್ತು ಕೃಷ್ಣ ಕುಮಾರ್ ಅವರ ಖಾತೆಗೆ ನೀಡಲಾಗಿದ್ದ ಬ್ಲೂಟಿಕ್ ಬ್ಯಾಡ್ಜ್ಅನ್ನು ಟ್ವಿಟರ್ ಹಿಂಪಡೆಯುವ ಮೂಲಕ ವಿವಾದ ಮತ್ತಷ್ಟು ಭುಗಿಲೇಳುವಂತೆ ಮಾಡಿದೆ.
ಟ್ವಿಟರ್ಗೆ ಮನವಿ ಮಾಡಿದ ನಂತರ ರದ್ದಾಗಿದ್ದ ವೆಂಕಯ್ಯ ನಾಯ್ಡು ಅವರ ಬ್ಲೂಟಿಕ್ ಬ್ಯಾಡ್ಜ್ ಮತ್ತೆ ಬಂದಿದ್ದು, ಇದೀಗ ಮಿಕ್ಕವರ ಖಾತೆಗಳ ಕುರಿತು ಮನವಿ ಸಲ್ಲಿಸಲಾಗಿದೆ.
ನಾಯ್ಡು ಅವರ ಖಾತೆಯ ಬ್ಲೂಟಿಕ್ ರದ್ದಾದ ನಂತರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಟ್ವಿಟರ್ಗೆ ನೋಟಿಸ್ ನೀಡಿದ್ದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಖಾತೆಗೆ ಆ ರೀತಿ ಮಾಡುವಂತಿಲ್ಲ. ಟ್ವಿಟರ್ ಸಂಸ್ಥೆಯು ಭಾರತೀಯರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದೆ.
ಆದರೆ ಟ್ವಿಟರ್ ಇದಕ್ಕೆ ಸ್ಪಷ್ಟನೆ ನೀಡಿದ್ದು ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಟ್ವಿಟರ್ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿಯು ಆರು ತಿಂಗಳ ಕಾಲ ಲಾಗ್ ಇನ್ ಆಗದಿದ್ದರೆ ಆ ಖಾತೆಯನ್ನು ನಿಷ್ಕ್ರಿಯ ಖಾತೆ ಪರಿಗಣಿಸಲಾಗುವುದು ಎಂದಿದೆ. ಟ್ವಿಟರ್ ಹಾಗೂ ಕೇಂದ್ರ ಸರಕಾರದ ನಡುವಿನ ವಿವಾದ ಇದು ಮೊದಲಲ್ಲ. ಈ ಹಿಂದೆ ಕೆಲ ವಿಷಯಕ್ಕೆ ಸಂಬಂಧ ವಿವಾದವೆದ್ದಿತ್ತು.
ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?