ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮುಂಗಾರು ಚುರುಕು ; ಕರಾವಳಿದಾದ್ಯಂತ ಯುವಕರ ಭರ್ಜರಿ ಏಡಿ ಬೇಟೆ!

Twitter
Facebook
LinkedIn
WhatsApp
WhatsApp Image 2023 07 05 at 11.12.36 AM

ಈ ಬಾರಿ ಮಳೆಯ ಅಭಾವ ಇದ್ದುದರಿಂದ ರಾಜ್ಯದಲ್ಲಿ ಮೊದಲ ವಾರದಲ್ಲಿ ಪ್ರವೇಶಿಸಬೇಕಿದ್ದ ಮುಂಗಾರು ಜೂನ್ ಅಂತ್ಯದಲ್ಲಿ ಆಗಮಿಸಿದೆ. ಬತ್ತಿ ಹೋಗಿದ್ದ ನದಿಗಳು ಮರುಜೀವ ಹೊಂದಿದ್ದು ಗದ್ದೆ ಹಳ್ಳ- ಕೊಳ್ಳ ತೊರೆಗಳಿಗೆಲ್ಲ ಜೀವ ಕಳೆ ಬಂದು ಮೈತುಂಬಿ ಹರಿಯುತ್ತಿವೆ. ಕರಾವಳಿದಾದ್ಯಂತ ಜುಲೈ ಮೊದಲ ವಾರದಿಂದ ಮುಂಗಾರು ಬಿರುಸಾಗಿದೆ.

ಮಳೆ ಬಂದ ನಂತರ ಕೃಷಿಯ ಎಲ್ಲಾ ಕೆಲಸಗಳು ಆರಂಭಗೊಂಡಿದ್ದು ಈ ಮೊದಲ ಮಳೆಗೆ ಕರಾವಳಿದಾದ್ಯಂತ ಯುವಕರು ಏಡಿ ಮತ್ತು ಮೀನುಗಳನ್ನು ಹಿಡಿಯಲು ಪ್ರಾರಂಭಿಸಿದ್ದಾರೆ.

ತುಳುನಾಡಲ್ಲಿ ಹಳ್ಳಿಗಳಲ್ಲಿ ಮೀನು ಮತ್ತು ಏಡಿ ಹಿಡಿಯುವುದೆಂದರೆ ಅದೊಂದು ಹವ್ಯಾಸ. ಜೂನ್ ಜುಲೈ ತಿಂಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧವಿರುತ್ತದೆ ಮತ್ತು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಏಡಿಯನ್ನು ಹಿಡಿಯುತ್ತಾರೆ. ಬೇಸಿಗೆಕಾಲದಲ್ಲಿ ಏಡಿಗಳು ಮಣ್ಣಿನೊಳಗೆ ಇದ್ದು ಮತ್ತು ಮೀನುಗಳು ಸ್ವಲ್ಪ ನೀರು ಇರುವ ಸ್ಥಳಗಳಲ್ಲಿ ವಾಸಿಸುತ್ತವೆ. ಆದರೆ ಮೊದಲ ಮಳೆಗೆ ಈ ಮೀನು ಅಥವಾ ಏಡಿ ನದಿ ಹಳ್ಳ ಕೊಳ್ಳಗಳಲ್ಲಿ ಹೊರಬರುತ್ತವೆ ಇದನ್ನು ತುಳುನಾಡಲ್ಲಿ ಉಬರ್ ಎಂದು ಕರೆಯುತ್ತಾರೆ.

ಸುರಿಯುವ ಮಳೆಯ ನಡುವೆಯೇ ಗಾಢವಾದ ಕತ್ತಲಿನಲ್ಲಿ ನೀರಿನಲ್ಲಿ ಹೋಗುತ್ತಾ ಏಡಿ ಬೇಟೆಯಾಡುತ್ತಾರೆ. ‌ಎದುರಿನಲ್ಲಿದ್ದವನು ಕೈ ಯಲ್ಲಿ ಮಚ್ಚು ಹಿಡಿದುಕೊಂಡು ಸಾಗಿದರೆ, ಹಿಂದಿರುವವರು ಪ್ರಖರವಾದ ಟಾರ್ಚ್ ಹಾಕಿ ಏಡಿಗಳಿಗಾಗಿ ಶೋಧ ನಡೆಸುತ್ತಾರೆ.
ಏಡಿಯ ಜೊತೆಗೆ ನದಿಯ ಮೀನುಗಳು ಯಥೇಚ್ಛವಾಗಿ ಲಭಿಸುತ್ತದೆ. ಕಲ್ಮೂರು, ಬಾಳೆ, ಪುರಿಯೊಳು, ಮುಗುಡು ಸೇರಿದಂತೆ ಹಲವು ಜಾತಿಯ ಮೀನುಗಳು ಈ ಸಂಧರ್ಭದಲ್ಲಿ ಸಿಗುತ್ತದೆ. ಸಮುದ್ರದ ಮೀನುಗಳು ಲಭಿಸದೇ ಇದ್ದಾಗ ಸ್ಥಳೀಯವಾಗಿ ಸಿಗುವ ಮೀನುಗಳನ್ನೇ ಹಿಡಿದು ಖಾದ್ಯಗಳನ್ನು ಕರಾವಳಿಯ ಮಂದಿ ತಯಾರಿಸುತ್ತಾರೆ. ಮಳೆಗಾಲದ ರಾತ್ರಿಗಳಲ್ಲಿ ಹಳ್ಳಿಯ ಯುವಕರು ಒಟ್ಟಾಗಿ ಸುತ್ತಮುತ್ತ ಇರುವ ಹಳ್ಳ, ಕೊಳ್ಳಗಳಲ್ಲಿರುವ ಏಡಿ, ಮೀನುಗಳನ್ನು ಬೇಟೆಯಾಡಲು ಪ್ರಾರಂಭಿಸುತ್ತಾರೆ. ಇದೊಂದು ವಿಶಿಷ್ಟ ಕಲೆ ಅಂತಾನೇ ಹೇಳಬಹುದು. ಯಾಕೆಂದರೆ ಎಲ್ಲರಿಗೂ ಮೀನು ಅಥವಾ ಏಡಿ ಹಿಡಿಯಲು ಬರುವುದಿಲ್ಲ. ಇಲ್ಲಿನ ಹೆಚ್ಚಿನ ಯುವಕರಿಗೂ ಈ ಕಲೆ ಒಲಿದಿದೆ.
ಹಗಲಿನ ವೇಳೆ ಮಳೆ ಬಂದು ಕೆಸರುಮಯವಾಗಿದ್ದ ನೀರು ಸಂಜೆಹೊತ್ತಿಗೆ ಹಳ್ಳಗಳಲ್ಲಿ ಸ್ವಚ್ಛವಾಗಿ ಹರಿಯಲು ಪ್ರಾರಂಭವಾಗುತ್ತದೆ. ಕತ್ತಲಾದಂತೆ ಏಡಿಗಳು ಹಳ್ಳದ ಸಂದಿಗೊಂದಿಯಿಂದ ಆಹಾರ ಅರಸಿ ಹೊರಬರುತ್ತವೆ. ಈ ವೇಳೆ ಅತ್ಯಂತ ನಾಜೂಕಾಗಿ ಯಾವುದೇ ಪರಿಕರವಿಲ್ಲದೇ ಕೈಯಲ್ಲಿ ಜೀವಂತ ಏಡಿ ಹಿಡಿಯಲಾಗುತ್ತದೆ. ಕೆಲವೊಮ್ಮೆ ಬೇಟೆಗಾರರ ಕೈಗೆ ಏಡಿಗಳು ಕಚ್ಚುವುದು ಸಾಮಾನ್ಯ. ಈ ಬೇಟೆಯು ಸಾಮಾನ್ಯವಾಗಿ 8 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿಯ ವೇಳೆಗೆ ಕೊನೆಗೊಳ್ಳುತ್ತದೆ.

ಈಗಿನ ಕಾಲದಲ್ಲಿ ಕೆಲವು ಕಡೆಗಳಲ್ಲಿ ಈ ಹವ್ಯಾಸ ಮರೆಮಾಚಿದೇ. ಯುವಕರು ಶಿಕ್ಷಣದ ನಂತರ ಉದ್ಯೋಗಕ್ಕೆ ತೆರಳುತ್ತಾರೆ. ಕೆಲವು ಹಳ್ಳಿಗಳಲ್ಲಿ ಮಾತ್ರ ಒಟ್ಟಾಗಿ ಈ ಮೀನಿನ ಮತ್ತು ಏಡಿಯನ್ನು ಹಿಡಿದು ಖಾದ್ಯಗಳನ್ನು ಮಾಡುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist