ಬುಧವಾರ, ಮೇ 1, 2024
ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮನೆ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ದಾರುಣ ಸಾವು!

Twitter
Facebook
LinkedIn
WhatsApp
299583033 476292650982747 8117623344757959015 n 2

ಬೆಳಗಾವಿ: ಮನೆ ಆವರಣದಲ್ಲಿಯೇ ವಿದ್ಯುತ್ ಕಂಬ. ಮನೆಯ ಮಹಡಿ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಹೆಸ್ಕಾಂ(Hescom) ಸಿಬ್ಬಂದಿ. ಕಾರಿನಲ್ಲಿರುವ ಬಾಲಕಿ ಮೃತದೇಹ ತಬ್ಬಿಕೊಂಡು ಕಣ್ಣೀರಿಡುತ್ತಿರುವ ಕುಟುಂಬಸ್ಥರು‌. ಈ ಹೃದಯವಿದ್ರಾವಕ ದೃಶ್ಯ ಕಂಡು ಬಂದಿದ್ದು, ಬೆಳಗಾವಿ(Belagavi) ತಾಲೂಕಿನ ಮಚ್ಛೆ ಗ್ರಾಮದಲ್ಲಿ. ಹೌದು ಈ ಫೋಟೋದಲ್ಲಿರುವ ಮುದ್ದಾದ ಬಾಲಕಿ ಹೆಸರು ಮಧುರಾ ಮೋರೆ. ಕೇವಲ 13 ವರ್ಷ ವಯಸ್ಸು‌, ಬಾಳಿ ಬದುಕಬೇಕಿದ್ದ ಬಾಲೆ ಹೆಣವಾಗಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಚಿಘಡ ಗ್ರಾಮದವಳಾಗಿದ್ದ ಮಧುರಾ ಮೋರೆ ಶಾಲೆಗೆ ರಜೆಯಿದ್ದ ಕಾರಣ ಮಚ್ಛೆ ಗ್ರಾಮದಲ್ಲಿದ್ದ ಸೋದರಮಾವನ ಮನೆಗೆ ಬಂದಿದ್ದಳು‌. ಎಂಟು ದಿನಗಳ ಹಿಂದೆ ಸೋದರಮಾವ ಪ್ರಸಾದ್ ಮನೆಗೆ ಬಂದಿದ್ದ ಬಾಲಕಿ ಮಧುರಾ, ನಿನ್ನೆ(ಮೇ.22) ಸಂಜೆ 6 ಗಂಟೆ ಸುಮಾರಿಗೆ ಮಹಡಿ ಮೇಲೆ ಒಂದೂವರೆ ವರ್ಷದ ಮಾವನ ಮಗನ ಕರೆದುಕೊಂಡು ಹೋಗಿ ಆಟವಾಡುತ್ತಿದ್ದಳು.

ಈ ವೇಳೆ ಅದೆದಕ್ಕೋ ಗೊತ್ತಿಲ್ಲ ಮಹಡಿ ಮೇಲಿನ ಕಿರಿದಾದ ಕಾಂಪೌಂಡ್ ಮೇಲೆ ಹತ್ತಿದ್ದಾಳೆ. ಆಗ ಮಹಡಿ ಮೇಲೆ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಪಕ್ಕದ ಮನೆಯ ಮಹಡಿ ಮೇಲೆ ಬಿದ್ದಿದ್ದಾಳೆ. ಈ ವೇಳೆ ಮನೆಯವರೆಗೆ ಏನೋ ಸ್ಫೋಟವಾದ ರೀತಿ ಶಬ್ದ ಕೇಳಿಸಿದೆ. ತಕ್ಷಣ ಮಹಡಿ ಮೇಲೆ ಬಂದು ನೋಡಿದಾಗ ಒಂದೂವರೆ ವರ್ಷದ ಮಗು ಮಾತ್ರ ಕಾಣಿಸಿದೆ. ಮಧುರಾ ಕಾಣದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ಪ್ರಸಾದ್ ಬೋಂಗಾಳೆ ಇಲ್ಲಿ ಸಿಮೆಂಟ್ ಮಳಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು. ಎಂಟು ವರ್ಷಗಳ ಹಿಂದೆ ಮಳಿಗೆಯ ಮೇಲೆ ಮನೆ ಕಟ್ಟಿದ್ದಾರೆ. ಈ ವೇಳೆ ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರಂತೆ. ಆದ್ರೆ, ಯಾವುದೇ ಕ್ರಮ ಕೈಗೊಂಡಿಲ್ಲವಂತೆ‌. ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧುರಾ ನನ್ನ ಒಂದೂವರೆ ವರ್ಷದ ಮಗನ ಕರೆದುಕೊಂಡು ಆಟವಾಡಲು ಹೋಗಿದ್ದಳು. ಆಕೆಯ ಬಳಿ ಕಟ್ಟಿಗೆ ಅಥವಾ ಆಟಿಕೆ ಸಾಮಾನುಗಳು ಏನೂ ಇರಲಿಲ್ಲ. ಏಕಾಏಕಿ ಏನೋ ಸ್ಫೋಟವಾದ ರೀತಿ ಸದ್ದು ಕೇಳಿ ಬಂತು. ಆಗ ನಾವು ಹೊರಗೆ ಬಂದು ನೋಡಿದ್ವಿ. ನನ್ನ ಮಗ ಒಬ್ಬನೇ ಇದ್ದ ಮಧುರಾ ಎಲ್ಲಿಯೂ ಕಾಣಲಿಲ್ಲ. ಎಲ್ಲೆಡೆ ಹುಡುಕಾಡಿದಾಗ ಕಾಂಪೌಂಡ್ ಕೆಳಗೆ ಬಿದ್ದಿದ್ದಳು‌. ಆಗ ಹೋಗಿ ನೋಡಿದಾಗ ಅವಳು ಮೃತಪಟ್ಟಿದ್ದಳು. ಒಂದೂವರೆ ವರ್ಷದ ಹಿಂದೆ ನನಗೂ ಸಹ ಶಾಕ್ ಹೊಡೆದಿತ್ತು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಮನೆ ಕಟ್ಟದಂತೆ ಮೊದಲೇ ನೋಟಿಸ್ ನೀಡಿದ್ವಿ ಎಂದ ಹೆಸ್ಕಾಂ

ಇನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನೆರವೇರಿತು. ಬಳಿಕ ಕಾರಿನಲ್ಲಿ ಮೃತದೇಹವನ್ನು ಸ್ವಗ್ರಾಮ ಮಾಚಿಘಡಗೆ ಕಾರಿನಲ್ಲಿ ಸ್ಥಳಾಂತರಿಸಿದರು‌.‌ ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ರೇಣುಕಾ, ಹೆಸ್ಕಾಂ ಸೆಕ್ಷನ್ ಆಫೀಸರ್ ಐ.ಡಿ.ಲೋಬೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಈ ವೇಳೆ ಮಾತನಾಡಿದ ಹೆಸ್ಕಾಂ ಸೆಕ್ಷನ್ ಆಫೀಸರ್ ‘ವಿದ್ಯುತ್ ತಂತಿ ಹಾದು ಹೋಗಿದ್ದು, ಮನೆ ಕಟ್ಟದಂತೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಮೊದಲೇ ಇಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು, ಈ ವೇಳೆ ಮಳಿಗೆ ಕಟ್ಟಿಕೊಂಡಿದ್ದರು. ಆಗ ಇಲ್ಲಿ ಮನೆ ಕಟ್ಟದಂತೆ ಹಿಂದಿನ ಸೆಕ್ಷನ್ ಆಫೀಸರ್ ನೋಟಿಸ್ ನೀಡಿದ್ದರು. ಆದರೂ ಮನೆ ಕಟ್ಟಿಕೊಂಡಿದ್ದರು‌‌. ಕುಟುಂಬಸ್ಥರು ವಿದ್ಯುತ್ ತಂತಿ ತೆರವಿಗೆ ಮನವಿ ಮಾಡಿದಾಗ ಎಸ್ಟಿಮೇಟ್ ಮಾಡಿ ಕೊಟ್ಟಿದ್ವಿ ಎಂದಿದ್ದಾರೆ.

ಇನ್ನು ವಿದ್ಯುತ್ ಪರಿವೀಕ್ಷಕರಾದ ರೇಣುಕಾ ಮಾತನಾಡಿ, ‘ವಿದ್ಯುತ್ ತಂತಿ ಸ್ಪರ್ಶಿಸಿ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ, ಈ ಬಗ್ಗೆ ತನಿಖೆ ಮಾಡ್ತಿದೀವಿ. ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಕುಟುಂಬಸ್ಥರು ಯಾವಾಗ ಮನವಿ ಕೊಟ್ಟಿದ್ದರು ಎಂಬುದನ್ನು ನೋಡ್ತೀವಿ. ವಿದ್ಯುತ್ ಕಂಬ ಮನೆ ಕಟ್ಟುವ ಮೊದಲೇ ಅಳವಡಿಕೆ ಮಾಡಲಾಗಿತ್ತು. ನಮ್ಮದು ವಿದ್ಯುತ್ ಪರಿವೀಕ್ಷಣಾ ಇಲಾಖೆ, ನಾವು ತನಿಖೆ ಮಾಡ್ತೀವಿ. ವಿದ್ಯುತ್ ಕಂಬ ತೆರವು ಮಾಡುವ ವಿಚಾರ ಹೆಸ್ಕಾಂಗೆ ಸಂಬಂಧಿಸಿದ್ದು. ತನಿಖೆ ಮಾಡಿ ಹೆಸ್ಕಾಂಗೆ ಸೂಕ್ತ ನಿರ್ದೇಶನ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

ಒಂದೆಡೆ ಬಾಲಕಿ ಸಾವಿಗೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಮನೆ ಕಟ್ಟುವ ಮೊದಲೇ ಇಲ್ಲಿ ಮನೆ ಕಟ್ಟದಂತೆ ನೋಟಿಸ್ ನೀಡಿದ್ವಿ ಎಂದು ಹೆಸ್ಕಾಂ ಸಿಬ್ಬಂದಿ ಸಬೂಬು ನೀಡುತ್ತಿದ್ದಾರೆ. ಆದ್ರೆ, ಇದೆಲ್ಲದರ ಮಧ್ಯೆ ತನ್ನದಲ್ಲದ ತಪ್ಪಿಗೆ 13 ವರ್ಷದ ಮುಗ್ಧ ಬಾಲಕಿ ಮಧುರಾ ಉಸಿರು ಚೆಲ್ಲಿದ್ದು ದುರಂತವೇ ಸರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ