ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮನೆಗೆ ಬರಲಿಲ್ಲ ಎಂದು ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದ ಪತಿ

Twitter
Facebook
LinkedIn
WhatsApp
 ಗಂಡನ ಜೊತೆ ಹೊಂದಿಕೊಂಡು ಬಾಳುವಂತೆ ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನ ಕೊಂದ ಸಾಕುಮಗಳು?

ಚಂಡೀ​ಗ​ಢ: ತವರು ಬಿಟ್ಟು ಬರಲು ಒಪ್ಪದ ಕಾರಣಕ್ಕೆ ಸಿಟ್ಟಿಗೆದ್ದ ಪತಿ (Husband), ತನ್ನ ಪತ್ನಿ (Wife), ಇಬ್ಬರು ಪುಟ್ಟಮಕ್ಕಳು, ಅತ್ತೆ(Mother in Law) , ಮಾವನನ್ನು (Father in Law) ಬೆಂಕಿ ಹಚ್ಚಿ ಹತ್ಯೆ ಮಾಡಿದ ಭೀಕರ ಘಟನೆ ಮಂಗ​ಳ​ವಾರ ನಡೆ​ದಿ​ದೆ. ಪಂಜಾ​ಬ್‌​ನ (Punjab) ಜಲಂಧರದ (Jalandhar) ತವರು ಮನೆ​ಯಲ್ಲಿ ಪತ್ನಿ ಪರ​ಮ್ಜಿತ್‌ ಕೌರ್‌ ತನ್ನ ಇಬ್ಬರು ಮಕ್ಕ​ಳೊಂದಿಗೆ ಕಳೆದ ಐದಾರು ತಿಂಗ​ಳು​ಗ​ಳಿಂದ ವಾಸಿ​ಸು​ತ್ತಿ​ದ್ದಳು.

ಪತಿ ಕುಲ್‌​ದೀಪ್‌ ಸಿಂಗ್‌​ ಲುಧಿ​ಯಾ​ನಾದ ಖುರ್ಶೇ​ದ್‌​ಪು​ರ​ದ​ಲ್ಲಿದ್ದ ತನ್ನ ಮನೆಗೆ ಬರು​ವಂತೆ ಪತ್ನಿ​ಯನ್ನು ಒತ್ತಾ​ಯಿ​ಸು​ತ್ತಿ​ದ್ದ. ಆದ​ರೆ ತನ್ನನ್ನು ಹಾಗೂ ಮಕ್ಕ​ಳನ್ನು ಹೊಡೆ​ಯು​ತ್ತಾ​ನೆಂದು ಆಕೆ ಹೋಗಲು ನಿರಾ​ಕ​ರಿ​ಸಿ​ದ್ದಾಳೆ. ಈ ಹಿನ್ನೆಲೆಯಲ್ಲಿ ಕುಲದೀಪ್‌ ಮಂಗಳವಾರ ಇಬ್ಬರು ಸ್ನೇಹಿ​ತ​ರೊಂದಿಗೆ ಬಂದು ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಐವ​ರನ್ನು ಸಜೀ​ವ​ ದ​ಹನ ಮಾಡಿ​ದ್ದಾನೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ ಪತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳು, ಅತ್ತೆ-ಮಾವ ಸೇರಿ ಎಲ್ಲರೂ ಮಲಗಿದ್ದಾಗ ಪಂಪ್‌ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಪಂಜಾಬ್‌ನ ಜಲಂಧರ್‌ ಬಳಿಯ ಮೆಹತ್‌ಪುರದ ಬಿಟ್ಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮವು ಜಲಂಧರ್ ಭಾಗದಲ್ಲಿ ಸಟ್ಲೆಜ್ ನದಿಯ ದಂಡೆಯ ಮೇಲೆ ಬರುತ್ತದೆ. ಇನ್ನು, ಜಾಗ್ರಾವ್‌ನ ಖುರ್ಷೈದ್‌ಪುರ ಗ್ರಾಮದವರಾದ ಆರೋಪಿ ಕುಲದೀಪ್‌ ಸಿಂಗ್ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಬಲಿಯಾದವರಲ್ಲಿ  ಪತ್ನಿ ಪರ​ಮ್ಜಿತ್‌ ಕೌರ್ (28), ಅವರ ಮಗ ಗುರ್‌ಮೋಹನ್ ಸಿಂಗ್ (5), ಮಗಳು ಅರ್ಷ್‌ದೀಪ್ ಕೌರ್ (7), ತಂದೆ ಸುರ್ಜನ್ ಸಿಂಗ್ (58) ಮತ್ತು ತಾಯಿ ಜೋಗಿಂದರ್ ಬಾಯಿ (54) ಸೇರಿದ್ದಾರೆ. ಪರಮ್‌ಜಿತ್‌ ಕೌರ್‌ಗೆ ಇದು ಎರಡನೇ ಮದುವೆಯಾಗಿದೆ ಎಂದು ಮೃತ ಸುರ್ಜನ್ ಸಿಂಗ್ ಅವರ ಸಹೋದರ ಲಖ್ವಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಆರೋಪಿ ತನ್ನ ಪತ್ನಿ ಹಾಗೂ ಮಲ ಮಕ್ಕಳಿಗೆ ಆಗಾಗ್ಗೆ ಥಳಿಸುತ್ತಿದ್ದ. ತನ್ನ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು ತನ್ನೊಂದಿಗೆ ಬರಬೇಕು ಎಂದು ಆತ ಒತ್ತಾಯಿಸುತ್ತಿದ್ದ. ತನ್ನ ಸಹೋದರನ ಮನೆಯಿಂದ ಕಿರುಚಾಟ ಕೇಳಿದೆ ಎಂದೂ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.

ನಂತರ, “ಏನಾಯಿತು ಎಂದು ನೋಡಲು ನಾನು ಧಾವಿಸಿ ಹೊರಬಂದಾಗ, ಕುಲದೀಪ್‌ ತನ್ನ ಸಹೋದರನ ಮನೆಯಿಂದ ಕೆಲವು ಅಪರಿಚಿತ, ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಹೋಗುವುದನ್ನು ನಾನು ನೋಡಿದೆ. ನಾನು ಕೋಣೆಯ ಬಳಿ ಹೋಗಿ, ಕಿಟಕಿಯಿಂದ ಇಣುಕಿ ನೋಡಿದೆ ಮತ್ತು ನನಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತು. ಎಲ್ಲರೂ ಮಲಗಿದ್ದ ಸ್ಥಳದಿಂದ ಕಿರುಚುತ್ತಿದ್ದರು,” ಎಂದೂ ಅವರು ಹೇಳಿದರು.

ಇನ್ನು, ಈ ಘಟನೆ ಸಂಬಂಧ ಸ್ಥಳೀಯ ಎಸ್‌ಪಿ (SP) (ಡಿ) ಸರಬ್ಜಿತ್ ಎಸ್. ಬಹಿಯಾ ಅವರು, ಜೋಗಿಂದರ್ ಮತ್ತು ಗುರ್ಮೊಹಲ್ ಸ್ಥಳದಲ್ಲೇ ಮೃತಪಟ್ಟರು ಮತ್ತು ಇತರ ಮೂವರನ್ನು ಚಿಕಿತ್ಸೆಗಾಗಿ ನಾಕೋಡರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಜೋಗಿಂದರ್ ಮತ್ತು ಗುರ್ಮೊಹಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದರು ಎಂದೂ ಹೇಳಿದ್ದಾರೆ.

“ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಪ್ರಮುಖ ಆರೋಪಿಯ ಕೆಲವು ಸಹಚರರನ್ನು ಬಂಧಿಸಿದ್ದೇವೆ.  ಕುಲದೀಪ್‌ ಅವರನ್ನು ಕೂಡ ಶೀಘ್ರದಲ್ಲೇ ಸೆರೆ ಹಿಡಿಯಲಾಗುತ್ತದೆ. ಪುರುಷರು ಬೈಕ್‌ಗಳಲ್ಲಿ ಬರುವುದು, ತಮಗೆ ಬೇಕಾದ ವಸ್ತುಗಳನ್ನು ಇಳಿಸುವುದು, ಹಿಂತಿರುಗುವುದು ಹಾಗೂ ಮತ್ತೆ ಕಾಲ್ನಡಿಗೆಯಲ್ಲಿ ಬರುವುದನ್ನು ನಾವು ದೃಶ್ಯಗಳಲ್ಲಿ ನೋಡಿದ್ದೇವೆ’’ ಎಂದೂ ಅವರು ಹೇಳಿದರು. ಇನ್ನು, ಈ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ ಎಂದೂ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ (Superintendent of Police) ಮಾಹಿತಿ ನೀಡಿದ್ದಾರೆ.

ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌
ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ