ಮಂಗಳೂರು: ನಟ ರಿಷಬ್ ಶೆಟ್ಟಿ (Rishab Shetty) ನಟಿಸಿರುವ ಬ್ಲಾಕ್ಬಸ್ಟರ್ ಮೂವಿ ಕಾಂತಾರ (Kantara) ಚಿತ್ರವನ್ನು ವೀಕ್ಷಿಸಲೆಂದು ಥಿಯೇಟರ್ ಗೆ ಬಂದ ಜೋಡಿಯ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿಬಂದಿದೆ.
ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ದಲ್ಲಿ ನಡೆದಿದೆ. ಸದ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐವರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ಹಮೀದ್, ಅಶ್ರಫ್, ಸಾದಿದ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ವಿರುದ್ಧ ದೂರು ನೀಡಲಾಗಿದೆ.
ನಡೆದಿದ್ದೇನು..?: ಬಿಸಿರೋಡ್ ಮೂಲದ ಬಿಕಾಂ ವಿದ್ಯಾರ್ಥಿ ಹಾಗೂ 18 ವರ್ಷದ ಯುವತಿ ಸುಳ್ಯದ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ನೋಡಲು ಬಂದಿದ್ದರು. ಸಿನಿಮಾ ಆರಂಭಕ್ಕೆ ಸಮಯವಿದ್ದ ಹಿನ್ನೆಲೆಯಲ್ಲಿ ಇಬ್ಬರು ಪಾರ್ಕಿಂಗ್ ಜಾಗದಲ್ಲಿ ನಿಂತು ಮಾತನಾಡುತ್ತಿದ್ದರು.
ಈ ವೇಳೆ 5ರಿಂದ 10 ಜನರ ಗುಂಪು ವಿದ್ಯಾರ್ಥಿಗಳ ಹತ್ತಿರ ಬಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕೆನ್ನೆಗೆ, ಬೆನ್ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಕೂಡಲೇ ಇಬ್ಬರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?