ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರು: ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ ತೆರವು

Twitter
Facebook
LinkedIn
WhatsApp
MV5BNTk1OTUxMzIzMV5BMl5BanBnXkFtZTcwMzMxMjI0Nw@@. V1 1 1

ಬೆಂಗಳೂರು: ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿದ್ದ ಕ್ರೈಸ್ತ ಪ್ರತಿಮೆ ತೆಗೆದು ಆ ಜಾಗಕ್ಕೆ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡಲಾಗಿದೆ. ಆಡಳಿತ ಮಂಡಳಿ ಬೆಂಗಳೂರಿನ ತ್ಯಾಗರಾಜನಗರದ ದೇವಸ್ಥಾನದ ಗೋಪುರದಲ್ಲಿದ್ದ ಯೇಸು ವಿಗ್ರಹ ತೆರವುಗೊಳಿಸಿದೆ.

1968 ರಿಂದ ಗೋಪುರದಲ್ಲಿ ಯೇಸು ಕ್ರಿಸ್ತನ ವಿಗ್ರಹವಿತ್ತು. ಗಣೇಶನ ದೇವಸ್ಥಾನದ ಗೋಪುರದಲ್ಲಿ ಯೇಸುವಿನ ವಿಗ್ರಹ ಯಾಕೆ ಇರಬೇಕು? ಯೇಸು ವಿಗ್ರಹವನ್ನ ತೆರವುಗೊಳಿಸುವಂತೆ ನಾಲ್ಕು ವರ್ಷದಿಂದ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದ್ದರು. ಈ ಹಿನ್ನಲೆ ಮಾರ್ಚ್ 2 ರಂದು ಯೇಸು ಕ್ರಿಸ್ತನ ವಿಗ್ರಹ ತೆರವುಗೊಳಿಸಿ, ಯೇಸು ಕ್ರಿಸ್ತ ಇದ್ದ ಜಾಗದಲ್ಲಿ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡುವುದಾಗಿ ಗಣೇಶ ಮಂದಿರಂ ದೇವಸ್ಥಾನ ಟ್ರಸ್ಟಿ ಸುಮುಖ್ ರಾಜ್ ಹೇಳಿಕೆ ನೀಡಿದ್ದರು.

1968 ರಲ್ಲಿ ನಮ್ಮ ತಾತ ಈ ಗೋಪುರವನ್ನ ಸ್ಥಾಪಿಸಿದ್ರು. ಸರ್ವಧರ್ಮ ಸಹಿಷ್ಣುತೆ ಸಾರುವ ದೃಷ್ಟಿಯಿಂದ ಈ ಗೋಪುರವನ್ನ ನಿರ್ಮಿಸಿದ್ರು. ಈ ಗೋಪುರದಲ್ಲಿ ಯೇಸು ಕ್ರಿಸ್ತ ಮಾತ್ರ ಅಲ್ಲ. ಸಾಯಿಬಾಬಾ, ಬಸವಣ್ಣ, ವಿವೇಕಾನಂದ ಸೇರಿದಂತೆ ಒಂದಷ್ಟು ವಚನಾಕಾರರ ವಿಗ್ರಹ ಕೂಡ ಹಾಕಲಾಗಿತ್ತು. ಇಷ್ಟು ವರ್ಷಗಳ ಕಾಲ ಯಾರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ಒಂದಷ್ಟು ತಿಂಗಳಿನಿಂದ ಹಿಂದೂ ಪರ ಸಂಘಟನೆಗಳು ಯೇಸು ವಿಗ್ರಹ ಗೋಪುರದಲ್ಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ದೇವಸ್ಥಾನಕ್ಕೆ ಬಂದು ಗಲಾಟೆ ಸಹ ಮಾಡಿದ್ರು. ನಂತ್ರ ರಾತ್ರೋರಾತ್ರಿ ಬಂದು ಯೇಸುವಿನ ವಿಗ್ರಹವನ್ನ ಭಿನ್ನಗೊಳಿಸಿದ್ರು. ಈ ಹಿನ್ನಲೆ ಭಿನ್ನವಾಗಿರುವ ವಿಗ್ರಹ ಗೋಪುರದಲ್ಲಿ ಇರಬಾರದೆಂದು ಯೇಸುವಿನ ವಿಗ್ರಹ ತೆರವುಗೊಳಿಸಿ ಆದ್ಯಂತ ಪ್ರಭು ವಿಗ್ರಹ ಪ್ರತಿಷ್ಠಾಪಿಸಿದ್ದೇವೆ ಎಂದು ಸುಮುಖ್ ರಾಜ್ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ