ಭಾನುವಾರ, ಏಪ್ರಿಲ್ 28, 2024
ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿಗಾಗಿ ಎಲ್ಲಾ ಸಂಬಂಧ ಕಡಿದುಕೊಂಡ್ಳು- ಆತನನ್ನೇ ನಂಬಿದ್ದ ಆಕೆಗೆ ಸಿಕ್ಕಿದ್ದು ಸಾವು!

Twitter
Facebook
LinkedIn
WhatsApp
ಪ್ರೀತಿಗಾಗಿ ಎಲ್ಲಾ ಸಂಬಂಧ ಕಡಿದುಕೊಂಡ್ಳು- ಆತನನ್ನೇ ನಂಬಿದ್ದ ಆಕೆಗೆ ಸಿಕ್ಕಿದ್ದು ಸಾವು!

ಚಿತ್ರದುರ್ಗ: ಪ್ರೀತಿ (Love) ಮಾಯೆ ಹುಷಾರ್ ಅಂತಾರೆ. ಈಕೆಯ ಬದುಕಲ್ಲೂ ಪ್ರೀತಿಯ ಮಾಯೆ ಆಕೆಯನ್ನೇ ಅಂತ್ಯ ಮಾಡಿಸಿದೆ.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಆರನೇ ಅಡ್ಡರಸ್ತೆಯಲ್ಲಿ ಇರುವ ಕಿರಣ್ ಎಂಬ ಆಸಾಮಿ, ಬಾಲೇನಹಳ್ಳಿ ಗ್ರಾಮದ ವಿನುತಾಳನ್ನು ಪ್ರೀತಿಸಿದ್ದ. ಅಲ್ಲದೇ ವಿರೋಧದ ನಡುವೆ ಮದುವೆನೂ ಆದ. ಸ್ವರ್ಗಕ್ಕೆ ಮೂರೇಗೇಣು ಅಂತಿದ್ದ ವಿನುತಾಗೆ ಮುದ್ದಾದ ಒಂದು ವರ್ಷದ ಮಗು ಕೂಡ ಇರುತ್ತೆ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿನ ಕಿರಣ್ ಕುಮಾರ್ ತನ್ನ ವರಸೆ ಬದಲಿಸ್ತಾನೆ.

ಈತನಿಗೆ ಮದ್ಯಪಾನ (Alcohol) ಸೇವಿಸಿ ಯುವತಿಯರಿಗೆ ವಂಚಿಸುವ ಖಯಾಲಿ ಇತ್ತು. ಅಲ್ಲದೇ ಡ್ರಗ್ಸ್ ಕೂಡ ಸೇವಿಸಿ, ವಿನುತಾಗೆ ನಿತ್ಯ ಕಿರುಕುಳ ನೀಡ್ತಿದ್ದನಂತೆ. ಹೀಗಾಗಿ ಇಬ್ಬರ ಮಧ್ಯೆ ನಿನ್ನೆ ರಾತ್ರಿ ಸಹ ಕಲಹವಾಗಿದ್ದು, ಪತ್ನಿಯನ್ನು ಕೊಂದು, ಆಕೆಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಸದ್ಯ ವಿನುತಾಳ ಗಂಡ ಕಿರಣ್ ಪೊಲೀಸರ ಅತಿಥಿಯಾಗಿದ್ದಾನೆ. ಏನೂ ಅರಿಯದ ಹಸುಗೂಸು ತಾಯಿಯನ್ನು ಕಳೆದುಕೊಂಡು ರೋಧಿಸುತ್ತಿದೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಮೋಹಕ್ಕೆ ಸಿಲುಕಿ ಹೆತ್ತವರನ್ನು ತೊರೆದು ಬಂದ ಯುವತಿ ಸಾವು ನಿಜಕ್ಕೂ ದುರಂತ. ಪತಿ ಕಿರಣ್‍ಕುಮಾರ್ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದು, ಸೂಕ್ತ ತನಿಖೆಯಿಂದಷ್ಟೇ ಸತ್ಯಾಸತ್ಯ ಬಯಲಾಗಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ