ಗುರುವಾರ, ಏಪ್ರಿಲ್ 18, 2024
ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!-ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್: ಬಾಂಬರ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ 10 ದಿನಗಳ ಕಾಲ ಎನ್ಐಎ ವಶಕ್ಕೆ.!-ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ; ಇಬ್ಬರು ಪ್ರಯಾಣಿಕರು ಪಾರು..!-ಆರ್ಸಿಬಿ ತಂಡದ ಫಿನಿಷಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಟಿ-20 ವಿಶ್ವ ಕಪ್ ಗೆ ಆಯ್ಕೆಯಾಗ್ತರಾ?-ಅಪಘಾತದಲ್ಲಿ ಕಣ್ಣಿನೊಳಗೆ ಹೋದ ಬೈಕ್ ನ ಬ್ರೇಕರ್ ಹ್ಯಾಂಡಲ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Twitter
Facebook
LinkedIn
WhatsApp
Police 14

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 22-24 ವರ್ಷದ ಇಬ್ಬರು ಯುವಕರು ಆಕೆಯ ಗೆಳೆಯನನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಒಂದು ದಿನದ ನಂತರ ಅವರನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮಾರ್ಚ್ 27 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ದೂರದ ಉಪನಗರವಾದ ವಿರಾರ್‌ನ ಸಾಯಿನಾಥ್ ನಗರ ಪ್ರದೇಶದ ನಿವಾಸಿಗಳಾದ ಇಬ್ಬರ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

ಇಬ್ಬರು ವಾಕಿಂಗ್​ಗೆ ಹೋಗಿದ್ದಾಗ ಘಟನೆ ನಡೆದಿದೆ, ಈ ವಿಚಾರ ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದಾಗಿ ಅವರು ತಿಳಿಸಿದ್ದಾರೆ. 

ಆರೋಪಿ ಹಾಗೂ ಆಕೆಯ ಪ್ರಿಯಕರನ ನಡುವೆ ವಾಗ್ವಾದ ನಡೆದು ಇಬ್ಬರು ಖಾಲಿ ಬಿಯರ್ ಬಾಟಲಿಯಿಂದ ಹೊಡೆದು, ಇಬ್ಬರೂ ಸೇರಿ ಯುವಕನನ್ನು ಮರಕ್ಕೆ ಕಟ್ಟಿಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಇಬ್ಬರೂ ಯುವತಿಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಆರೋಪಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ, ಮನೆಗೆ ತಲುಪಿ ವಿಷಯ ತಿಳಿಸಿದ ಬಳಿಕ ಪೊಲೀಸರ ಸಹಾಯದಿಂದ ಆ ಯುವಕನನ್ನೂ ರಕ್ಷಿಸಲಾಯಿತು.

ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ ಅಜ್ಜಿಯನ್ನೇ ಕೊಂದ ಪಾಪಿಗಳು: 

ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ರತ್ನಾಬಾಯಿ ಎನ್ನುವ ಅಜ್ಜಿ ಕೊಲೆ ಆಗಿದೆ. ರತ್ನಾ ಬಾಯಿ ಮತ್ತು ರಾಮಾ ನಾಯ್ಕ ದಂಪತಿಗಳು ಗ್ರಾಮದಲ್ಲಿ ವಾಸವಾಗಿದ್ದರು. ಇಬ್ಬರು ಗಂಡು ಮಕ್ಕಳು ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ದಂಪತಿಗಳಿಬ್ಬರೆ ಮನೆಯಲ್ಲಿ ವಾಸವಿದ್ದರು. ಮೊನ್ನೆ(ಮಾ.20) ಸಂಜೆ ಗ್ರಾಮದ ಶಾಲೆಯೊಳಗೆ ಕಟ್ಟಿರುವ ಆಕಳನ್ನು ಬಿಚ್ಚಿಕೊಂಡು ಬರಲು ರತ್ನಾಬಾಯಿ ಹೋಗಿದ್ದಳು. ಆದರೆ ಅಜ್ಜಿಯು ವಾಪಸ್ ಮನೆಗೆ ಬರಲೇ ಇಲ್ಲ. ಮರುದಿನ ನಿನ್ನೆ(ಮಾ.21) ಬೆಳಗ್ಗೆ ಅಜ್ಜಿಯ ಮೃತದೇಹವು ಗ್ರಾಮದ ಹನುಮಂತ ನಾಯ್ಕ ಮನೆ ಸಮೀಪದಲ್ಲಿ ಪತ್ತೆಯಾಗಿತ್ತು. ಈ ವಿಷಯವನ್ನು ರತ್ನಾಬಾಯಿ ಮೈದುನ ಮೃತ ಹಾಲೇಶ್ ನಾಯ್ಕ ಪತ್ನಿ ಜ್ಯೋತಿಬಾಯಿ ಗ್ರಾಮಸ್ಥರಿಗೆ ತಿಳಿಸುತ್ತಾರೆ. ಗ್ರಾಮಸ್ಥರು ಎಲ್ಲರೂ ಹೋಗಿ ನೋಡಿದಾಗ ಅಜ್ಜಿ ಕತ್ತು ಕೋಯ್ದು ಮರ್ಡರ್ ಮಾಡಿರುವುದು ಕಂಡು ಬಂದಿತ್ತು.

ಕೂಡಲೇ ಗ್ರಾಮಸ್ಥರು ಮೃತಳ ಸಂಬಂಧಿಕರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಬಳಿಕ ಅಜ್ಜಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸುತ್ತಾರೆ. ಅಜ್ಜಿಯ ಮೇಲೆ ಏನು ದ್ವೇಷವಿತ್ತು ಕೊಲೆ ಮಾಡಿದ್ದು ಯಾರು ಎನ್ನುವ ನೂರೆಂಟು ಅನುಮಾನಗಳು ಶುರುವಾಗಿದ್ದವು. ಈ ನಡುವೆ ಮೈದುನ ಪತ್ನಿ ಜ್ಯೋತಿ ಬಾಯಿ ಮೇಲೆ ಗ್ರಾಮಸ್ಥರಿಗೆ ಮತ್ತು ಸಂಬಂಧಿಕರಿಗೆ ಸಂಶಯವಿತ್ತು. ಕೊಲೆ ಆಗಿರುವ ಮಾಹಿತಿ ಮೊದಲು ಕೊಟ್ಟಿದ್ದೇ ಮೈದುನನ ಪತ್ನಿ ಆಗಿದ್ದಳು. ಹೀಗಾಗಿ ಅವಳ ಮೇಲೆ ಅನುಮಾನಗಳು ಶುರುವಾಗಿದ್ದವು. ಗ್ರಾಮಾಂತರ ಪೊಳೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ಕೊಲೆ ಮಾಡಿರುವ ಆರೋಪಿಗಳ ಪತ್ತೆಗೆ ಎಸ್ಪಿ ಒಂದು ಟೀಂ ಕೂಡ ರೆಡಿ ಮಾಡಿದ್ದರು.

ಅಜ್ಜಿಯು ಕೊಲೆ ಪ್ರಕರಣ ನಡೆಯುತ್ತಿದ್ದಂತೆ ಗ್ರಾಮದಲ್ಲಿ ಗುಸು ಗುಸು ಶುರುವಾಗಿತ್ತು. ಅಜ್ಜಿಯ ಕೊಲೆ ಯಾರು ಮಾಡಿದ್ದರು ಹಿನ್ನಲೆ ನೋಡಿದಾಗ ಅಲ್ಲೊಂದು ಅನೈತಿಕ ಸಂಬಂಧದ ಪ್ರಭಲ ಕಾರಣವೆನ್ನುವುದು ಕಂಡು ಬರುತ್ತದೆ. ಆ ದಿನ ಅಜ್ಜಿಯು ಹಸು ಬಿಚ್ಚಿಕೊಂಡು ಬರಲು ಹೋಗಿದ್ದಾಗ ಸಂಜೆ ಹೊತ್ತು. ಅಲ್ಲಿಗೆ ಎಂಟ್ರಿಕೊಟ್ಟಿದ್ದು ಅದೇ ಗ್ರಾಮದ ಹನುಮಂತ ನಾಯ್ಕ ಮತ್ತು ಜ್ಯೋತಿ ಬಾಯಿ. ಅಜ್ಜಿಯನ್ನು ನೋಡಿದ ಹನುಮಂತ ನಾಯ್ಕ ಚಾಕುವಿನಿಂದ ಕತ್ತು ಕೊಯ್ದು ಮರ್ಡರ್ ಮಾಡುತ್ತಾನೆ. ಕೊಲೆ ಮಾಡಿದ ಬಳಿಕ ಶವವನ್ನು ಸಮೀಪ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುತ್ತಾರೆ.

ಅಲ್ಲೊಂದು ಅನೈತಿಕ ಸಂಬಂಧ ಸ್ಟೋರಿ ಶುರುವಾಗುತ್ತದೆ. ಜ್ಯೋತಿ ಬಾಯಿ ಮತ್ತು ಹನುಮಂತ ನಾಯ್ಕ ನಡುವೆ ಅನೈತಿಕ ಸಂಬಂಧವಿತ್ತು. ಈ ಅನೈತಿಕ ಸಂಬಂಧವನ್ನು ರತ್ನಾಬಾಯಿ ವಿರೋಧಿಸಿದ್ದಳು. ಜ್ಯೋತಿಬಾಯಿಗೆ ವಾರ್ನ್ ಕೂಡಾ ಅಜ್ಜಿಯು ಮಾಡಿದ್ದಳು. ಈ ಹಿನ್ನಲೆಯಲ್ಲಿ ಜ್ಯೋತಿ ಬಾಯಿ ಹನುಮಂತನಾಯ್ಕ ಮೂಲಕ ತಮ್ಮ ಅನೈತಿಕ ಸಂಬಂಧಕ್ಕೆ ಅಜ್ಜಿ ಅಡ್ಡ ಬರುತ್ತಿದೆ. ಹೀಗಾಗಿ ಅವಳ ಕಥೆ ಮುಗಿಸಬೇಕೆಂದು ಒತ್ತಾಯಿಸಿದ್ದಳು. ಜ್ಯೋತಿ ಬಾಯಿಯ ಪಿತೂರಿ ಮಾತು ಕೇಳಿದ ಹನುಂತ ನಾಯ್ಕ್​ನು ಅಜ್ಜಿಯನ್ನು ಚಾಕುವಿನಿಂದ ಇರಿದು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದನು. ಸದ್ಯ ಗ್ರಾಮಾಂತರ ಪೊಲೀಸರು ಜ್ಯೋತಿ ಬಾಯಿ ಮತ್ತು ಹನುಮಂತ ನಾಯ್ಕ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮಕ್ಕಳು ಇಲ್ಲದೆ ಪತಿ ಜೊತೆ ವಾಸವಾಗಿದ್ದ ಅಜ್ಜಿಯು ವಿನಾಕಾರಣವಾಗಿ ಕೊಲೆಯಾಗಿದ್ದಾಳೆ. ಅನೈತಿಕ ಸಂಬಂಧವನ್ನು ಪ್ರಶ್ನೆಸಿದ್ದೇ ಅಜ್ಜಿಯ ದೊಡ್ಡ ತಪ್ಪಾಗಿತ್ತು. ತಮ್ಮ ಅನೈತಿಕ ಸಂಬಂಧ ಮತ್ತು ವೈಯಕ್ತಿಕ ದ್ವೇಷ ಇಟ್ಟುಕೊಂಡು ಮೈದುನನ ಪತ್ನಿಯು ಅಜ್ಜಿಯ ಮರ್ಡರ್ ಮಾಡಿಸಿದ್ದು ಮಾತ್ರ ವಿಪರ್ಯಾಸ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ