ಸೋಮವಾರ, ಏಪ್ರಿಲ್ 29, 2024
ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!-ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಾಗಲ್ ಪ್ರೇಮಿ ಕೊಲೆ ಕೇಸ್‌ಗೆ ಟ್ವಿಸ್ಟ್- ಪೊಲೀಸ್ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

Twitter
Facebook
LinkedIn
WhatsApp
pic 2

ಬೆಂಗಳೂರು: ಪ್ರೀತಿ (Love) ನಿರಾಕರಿಸಿದ ಯುವತಿಯನ್ನ ಬರ್ಬರವಾಗಿ ಇರಿದು ಕೊಲೆ ಮಾಡಿದ್ದ ಸ್ಟೋರಿಗೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸಾಯುವ ಮುನ್ನ ತಾಯಿಗೆ ಕರೆ:
ಪಾಗಲ್ ಪ್ರೇಮಿ ದಿನಕರ್, ಮೂರು ದಿನಗಳ ಹಿಂದೆ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹುಡುಕಿಕೊಂಡು ಬಂದಿರುವ ವಿಚಾರ ತಿಳಿದ ಲೀಲಾ ಪವಿತ್ರಾ ತನ್ನ ತಾಯಿಗೆ ಕರೆ ಮಾಡಿದ್ದಳು. ಆಂಧ್ರಪ್ರದೇಶದಲ್ಲಿರುವ (Andhra Pradesh) ತನ್ನ ತಾಯಿಗೆ ಕರೆ ಮಾಡಿದ ಲೀಲಾ, ಅಮ್ಮ ಅವನು ಇಲ್ಲಿಗೂ ಬಂದಿದ್ದಾನೆ. ಹೊರಗೆ ಬರುವಂತೆ ಕಿರುಕುಳ ಕೊಡ್ತಿದ್ದಾನೆ. ಏನ್ ಮಾಡೋದು ಗೊತ್ತಾಗ್ತಿಲ್ಲ ಅಂತಾ ಹೇಳಿಕೊಂಡಿದ್ದಾಳೆ. 

ದಿನಕರ್ ಜೊತೆಗೆ ಮಾತಾಡುವ ವೇಳೆ ಕೂಡ, ತಾಯಿಗೆ ಫೋನ್ ಮಾಡಿ ದಿನಕರ್‌ಗೆ ಮಾತನಾಡುವಂತೆ ಕೊಟ್ಟಿದ್ದಳು. ಈ ವೇಳೆ ಲೀಲಾ ತಾಯಿ ಸಹ ದಿನಕರ್‌ಗೆ ಬೈದು ಅಲ್ಲಿಂದ ಹೋಗುವಂತೆ ಹೇಳಿದ್ದಳು. ಫೋನ್‌ನಲ್ಲಿ ಮಾತನಾಡುತ್ತಿದ್ದಂತೇ ದಿನಕರ್ ಚಾಕು ತೆಗೆದಿದ್ದನಂತೆ. ಚಾಕು ನೋಡಿದ ಲೀಲಾ ತಾಯಿ ಜೊತೆಗೆ ತುಂಬಾ ಭಯ ಆಗ್ತಿದೆ, ಏನಾದರೂ ಮಾಡ್ತಾನೆ ಅಂತಲೇ ಫೋನ್ ಕಟ್ ಆಗಿದೆ ಅನ್ನೋದು ಪೊಲೀಸರ ತನಿಖೆ (Police Investigation) ವೇಳೆ ಬಹಿರಂಗಗೊಂಡಿದೆ.

download 2 1

ಆಂಧ್ರಪ್ರದೇಶದ ಶ್ರೀಕಾಕೋಳುವಿನಲ್ಲಿ ಕಾಲೇಜು ಓದುವ ವೇಳೆ ಆರೋಪಿ ದಿನಕರ್, ಲೀಲಾ ಪವಿತ್ರಾಗೆ ತನ್ನನ್ನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ವಿದ್ಯಾಭ್ಯಾಸ ಮುಗಿಸಿದ ಯುವತಿ ಕೆಲಸ ಹರಿಸಿ ಬೆಂಗಳೂರಿಗೆ ಬಂದಿದ್ಲು. ಇದರಿಂದ ಗಾಬರಿಯಾದ ದಿನಕರ್, ಲೀಲಾಳ ತಾಯಿಗೆ ಕರೆ ಮಾಡಿ ಅವಳನ್ನು ನಾನೇ ಮದುವೆ ಆಗೋದು, ನಂಗೆ ಮದುವೆ ಮಾಡಿಕೊಡಿ ಚೆನ್ನಾಗಿ ನೋಡ್ಕೋತಿನಿ ಅಂತಾ ಕೇಳ್ಕೊಂಡಿದ್ದ. ಆದರೆ ಯುವತಿ ತಾಯಿ, ಅಂತರ್ಜಾತಿ ಅನ್ನೋ ಕಾರಣಕ್ಕೆ ಸಾಧ್ಯವಿಲ್ಲ ಅಂತಾ ಹೇಳಿದ್ದರು.

ಈ ವೇಳೆ ಲೀಲಾಳನ್ನು ನಾನೇ ಮದುವೆ ಆಗೋದು ಒಂದು ವೇಳೆ ಆ ರೀತಿ ಆಗಲಿಲ್ಲ ಅಂದರೆ ಅವಳನ್ನು ಪತ್ತೆ ಮಾಡಿ ಕೊಲೆ ಮಾಡಿ ನಾನೂ ಆತ್ಮಹತ್ಯೆ ಮಾಡ್ಕೋತಿನಿ ಅಂತಾ ಬೆದರಿಸಿದ್ದ. ಅದು ಮುಂದುವರಿದು, ಲೀಲಾ ಪವಿತ್ರ ಕೆಲಸ ಮಾಡುತ್ತಿದ್ದ ಜಾಗವನ್ನು ಸ್ನೇಹಿತರ ಮೂಲಕ ಪತ್ತೆ ಮಾಡಿದ್ದ. ಆಕೆ ಮದುವೆಯಾಗಲು ನಿರಾಕರಿಸಿದ ನಂತರ 16 ಬಾರಿ ಬರ್ಬರವಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ