ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನೆಚ್ಚಿನ ಯೂಟ್ಯೂಬರ್, ಭೇಟಿಯಾಗಲು ಈತ ತುಳಿದ ಕಿಲೋ ಮೀಟರ್ ಎಷ್ಟು ಗೊತ್ತೆ?

Twitter
Facebook
LinkedIn
WhatsApp
ನೆಚ್ಚಿನ ಯೂಟ್ಯೂಬರ್, ಭೇಟಿಯಾಗಲು ಈತ ತುಳಿದ ಕಿಲೋ ಮೀಟರ್ ಎಷ್ಟು ಗೊತ್ತೆ?

ನವದೆಹಲಿ:ನೆಚ್ಚಿನ ಯೂಟ್ಯೂಬರ್‌ನನ್ನು ಭೇಟಿಯಾಗಲು ಬಾಲಕನೊಬ್ಬ ಮನೆಯಲ್ಲಿಹೇಳದೇ ಸೈಕಲ್‌ನಲ್ಲೇ 250 ಕಿಲೋಮೀಟರ್ ಸಂಚರಿಸಿದ್ದಾನೆ. ಆದರೆ ಕೊನೆಗೆ ಯೂಟ್ಯೂಬರ್‌ನನ್ನು ನೋಡಲಾಗದೆ ನಿರಾಶೆಗೊಂಡಿದ್ದಾನೆ.

 

ಪಂಜಾಬ್‌ನ ಪಟಿಯಾಲದ 13 ವರ್ಷದ ಬಾಲಕ ಸುಮಾರು 1.7 ಕೋಟಿ ಚಂದಾದಾರರನ್ನು ಹೊಂದಿರುವ ‘ಟ್ರಿಗ್ಗರ್ಡ್ ಇನ್ಸಾನ್’ ಹಾಸ್ಯ ಯೂಟ್ಯೂಬ್ ಚಾನೆಲ್‌ನ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್‌ನನ್ನು ಭೇಟಿಯಾಗಲು ದೂರದ ದೆಹಲಿಗೆ ಬಂದಾತ. ಬಾಲಕ ಮನೆಯಲ್ಲಿ ಹೇಳದೇ ಪಟಿಯಾಲದಿಂದ 250 ಕಿಲೋಮೀಟರ್ ದೂರದಲ್ಲಿರುವ ದೆಹಲಿಗೆ ಸೈಕಲ್ ತುಳಿದುಕೊಂಡೇ ಬಂದಿದ್ದಾನೆ. ಮೂರು ದಿನಗಳ ಸಂಚಾರದ ಬಳಿಕ ಯೂಟ್ಯೂಬರ್‌ನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾನೆ. ಆದರೆ ಅಲ್ಲಿ ಆತನಿಗೆ ನಿರಾಸೆಯಾಗಿದೆ. ಕಾರಣ ಯೂಟ್ಯೂಬರ್‌ ಆ ವೇಳೆ ದುಬೈಗೆ ಪ್ರಯಾಣಿಸಿದ್ದ.

ಇತ್ತ ಬಾಲಕ ನಾಪತ್ತೆಯಾಗಿರುವುದು ಮನೆಯವರ ನಿದ್ದೆಗೆಡಿಸಿದೆ. ಕೂಡಲೇ ಶಾಲೆಗೆ ಹೋದ ಬಾಲಕ ಮನೆಗೆ ಮರಳಿದಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಾಲೆಗೆ ಹೋಗುವ ದಾರಿಯಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಆತ ಶಾಲೆಗೆ ಹೋಗದಿರುವುದು ಗೊತ್ತಾಗಿದೆ. ಬಳಿಕ ಆತ ತೆರಳಿದ ದಾರಿಯನ್ನು ಪತ್ತೆ ಹಚ್ಚಿ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆತ ದೆಹಲಿಯತ್ತ ತೆರಳಿರುವುದು ಕಂಡು ಬಂದಿದೆ. ಆನಂತರ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿ ಪೋಷಕರನ್ನು ಕರೆದುಕೊಂಡು ಪೊಲೀಸರ ತಂಡ ದೆಹಲಿಗೆ ತೆರಳಿದೆ. ಆ ವೇಳೆಗಾಗಲೇ ದೆಹಲಿ ಪೊಲೀಸರು ಬಾಲಕನನ್ನು ಯೂಟ್ಯೂಬರ್‌ನ ಅಪಾರ್ಟ್‌ಮೆಂಟ್ ಬಳಿ ಪತ್ತೆ ಹಚ್ಚಿದ್ದಾರೆ.

ಆತನಲ್ಲಿ ವಿಚಾರಿಸಿದಾಗ ತಾನು ‘ಟ್ರಿಗ್ಗರ್ಡ್ ಇನ್ಸಾನ್’ ಯೂಟ್ಯೂಬರ್ ಅಭಿಮಾನಿಯಾಗಿದ್ದು, ಆತನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದೇನೆ ಎಂದಿದ್ದಾನೆ. ಕೊನೆಗೆ ಬಾಲಕನಿಗೆ ಬುದ್ದಿ ಹೇಳಿ ದೆಹಲಿ ಪೊಲೀಸರು ಪಟಿಯಾಲ ಪೊಲೀಸರ ಸಮ್ಮುಖದಲ್ಲಿ ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ