ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ ಬಂಧನ..!

Twitter
Facebook
LinkedIn
WhatsApp
ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ ಬಂಧನ..!

ಭಾರತ (India) ಮೂಲದ ವ್ಯಕ್ತಿ ರಾಜ್ವಿಂದರ್‌ ಸಿಂಗ್ (Rajwinder Singh) ಆಸ್ಟ್ರೇಲಿಯಾ (Australia) ಮೂಲದ ಮಹಿಳೆಯನ್ನು (Lady) ಕೊಲೆ (Murder) ಮಾಡಿದ್ದಾರೆ ಎಂಬ ಆರೋಪ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ. 2018ರಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ (Queensland) ಮಹಿಳೆಯೊಬ್ಬರನ್ನು ಕೊಲ್ಲಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೆಹಲಿ ಪೊಲೀಸರು (Delhi Police) ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ರಾಜ್ವಿಂದರ್‌ ಸಿಂಗ್ ಆಸ್ಟ್ರೇಲಿಯಾದಿಂದ ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆ ಆಸ್ಟ್ರೇಲಿಯಾ ಸರ್ಕಾರ ಅವರನ್ನು ಹುಡುಕಿಕೊಟ್ಟವರಿಗೆ ಅಥವಾ ಬಂಧಿಸಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯಾ ಡಾಲರ್‌ ಬಹುಮಾನವನ್ನೂ ಘೋಷಿಸಿತ್ತು. 

ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ ಬಂಧನ..!

24 ವರ್ಷದ ಆಸ್ಟ್ರೇಲಿಯಾ ಮಹಿಳೆ ಟೋಯಾ ಕಾರ್ಡಿಂಗ್ಲೆ (Toya Cordingley) ಅವರ ನಾಯಿ ಬೊಗಳಿದ್ದಕ್ಕೆ ರಾಜ್ವಿಂದರ್‌ ಸಿಂಗ್ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ತನ್ನ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್‌ಲ್ಯಾಂಡ್‌ನ ವಾಂಗೆಟ್ಟಿ ಬೀಚ್‌ಗೆ 38 ವರ್ಷದ ರಾಜ್ವಿಂದರ್ ಸಿಂಗ್ ತೆರಳಿದ್ದರು. ಆ ವೇಳೆ ಸ್ವಲ್ಪ ಹಣ್ಣು ಹಾಗೂ ಅಡುಗೆ ಮನೆಯ ಚಾಕುವನ್ನು ತೆಗೆದುಕೊಂಡು ಹೋಗಿದ್ದೆ ಎಂದೂ ದೆಹಲಿ ಪೊಲೀಸರಿಗೆ ಆರೋಪಿ ಹೇಳಿಕೊಂಡಿದ್ದಾನೆ. 

ಈ ವೇಳೆ, ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿರುವ ಟೋಯಾ ಕಾರ್ಡಿಂಗ್ಲೆ ತನ್ನ ಶ್ವಾನದೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಆ ವೇಳೆ, ರಾಜ್ವಿಂದರ್‌ ಅವರತ್ತ ಆಕೆಯ ನಾಯಿ ಬೊಗಳಿದಾಗ ಆಸ್ಟ್ರೇಲಿಯಾ ಮಹಿಳೆ ಹಾಗೂ ರಾಜ್ವಿಂದರ್ ಇಬ್ಬರೂ ಜಗಳವಾಡಿದ್ದಾರೆ. ಈ ವೇಲೆ ಸಿಟ್ಟಿಗೆದ್ದ ರಾಜ್ವಿಂದರ್ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಅಷ್ಟೇ ಅಲ್ಲದೆ, ಮರಳಿನಲ್ಲಿ ಆಕೆಯ ಮೃತದೇಹವನ್ನು ಸಮಾಧಿ ಮಾಡಿ ಮರವೊಂದಕ್ಕೆ ನಾಯಿಯನ್ನು ಕಟ್ಟಿಹಾಕಿದನು ಎಂದೂ ತಿಳಿದುಬಂದಿದೆ. ನಂತರ, 2 ದಿನಗಳಲ್ಲಿ ರಾಜ್ವಿಂದರ್‌ ಸಿಂಗ್ ತನ್ನ ಕೆಲಸ, ಹೆಂಡತಿ ಹಾಗೂ 3 ಮಕ್ಕಳನ್ನು ಸಹ ಬಿಟ್ಟು ಆಸ್ಟ್ರೇಲಿಯಾವನ್ನು ತೊರೆದಿದ್ದ ಎಂದೂ ಹೇಳಲಾಗಿತ್ತು.

ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಭಾರತ ಮೂಲದ ವ್ಯಕ್ತಿ ಬಂಧನ..!

ಈ ಹಿನ್ನೆಲೆ ರಾಜ್ವಿಂದರ್ ಸಿಂಗ್ ವಿರುದ್ಧ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಹಾಗೂ, ಆತ ಭಾರತಕ್ಕೆ ಬಂದಿರಬಹುದೆಂಬ ಅನುಮಾನ ಸಹ ಕೇಳಿಬಂದಿತ್ತು. ಅಲ್ಲದೆ, ಹಸ್ತಾಂತರ ಕಾಯ್ದೆಯಡಿ ನವೆಂಬರ್ 21 ರಂದು ಪಟಿಯಾಲಾ ಹೌಸ್‌ ಕೋರ್ಟ್‌ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್‌ ಅನ್ನೂ ಹೊರಡಿಸಿತ್ತು. 

ಇನ್ನು, ಇಂಟರ್‌ಪೋಲ್‌ನ ಭಾರತದ ನೋಡಲ್‌ ಏಜೆನ್ಸಿಯಾದ ಸಿಬಿಐ ಹಂಚಿಕೊಂಡ ಮಾಹಿತಿ ಅನುಸಾರ ಆರೋಪಿಯನ್ನು ವಿಶೇಷ ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿಯ ಜಿ.ಟಿ. ಕರ್ನಲ್‌ ರಸ್ತೆಯ ಬಳಿ ಬಂಧಿಸಲಾಗಿದೆ ಎಂದೂ ತಿಳಿದುಬಂದಿದೆ.  ಅಲ್ಲದೆ, ರಾಜ್ವಿಂದರ್ ಸಿಂಗ್ ಬಂಧನದ ಬಳಿಕ ಅವರನ್ನು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ದೆಹಲಿ ಕೋರ್ಟ್‌ ಅನುಮತಿ ನೀಡಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ