ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದ​ರಾ​ಮಯ್ಯ

Twitter
Facebook
LinkedIn
WhatsApp
file758cmdz9zkgjw4ydp2z1564081321

ರಾಮ​ನ​ಗರ (ಜ.30): ನನಗೆ ರಾಷ್ಟ್ರ​ಪತಿ ಇಲ್ಲವೇ, ಪ್ರಧಾನ ಮಂತ್ರಿ ಮಾಡು​ತ್ತೇವೆ ಅಂದರೂ ನನ್ನ ಹೆಣ ಕೂಡ ಬಿಜೆಪಿ-ಆರ್‌ಆರ್‌ಎಸ್‌ಗೆ ಹೋಗಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಕಟುವಾಗಿ ಹೇಳಿ​ದರು. ಮಾಗಡಿ ಪಟ್ಟ​ಣದಲ್ಲಿ ಎಚ್‌ಕೆಜಿ​ಎನ್‌ ಶಾದಿಮಹಲ್‌ ಅನ್ನು ಲೋಕಾ​ರ್ಪಣೆಗೊಳಿಸಿ ಮಾತನಾಡಿ, ಬಿಜೆ​ಪಿ​ಯ​ವ​ರಿಗೆ ದ್ವೇಷವೇ ರಾಜ​ಕಾ​ರಣವಾದರೆ, ಜೆಡಿ​ಎಸ್‌ನವ​ರಿಗೆ ಅಧಿ​ಕಾರ ಮುಖ್ಯವೇ ಹೊರತು ಅದಕ್ಕೆ ಜಾತ್ಯ​ತೀತ ತತ್ವ ಸಿದ್ಧಾಂತ ಯಾವುದೂ ಇಲ್ಲ ಎಂದು ಬಿಜೆಪಿ ಸರ್ಕಾರ ಹಾಗೂ ಜೆಡಿ​ಎಸ್‌ ಪಕ್ಷದ ರಾಜ​ಕೀಯ ನಡೆಯ ವಿರುದ್ಧ ವಾಗ್ದಾಳಿ ನಡೆ​ಸಿ​ದರು.

ಬಿಜೆ​ಪಿ​ಯ​ವರು ಮನುಷ್ಯ-ಮನು​ಷ್ಯರ ನಡುವೆ ಗೋಡೆ ಕಟ್ಟಿದ್ವೇಷದ ರಾಜ​ಕಾ​ರಣ ಮಾಡು​ತ್ತಾರೆ. ಇನ್ನು ಜೆಡಿ​ಎಸ್‌ನವ​ರಿಗೆ ಸಿದ್ಧಾಂತವಿಲ್ಲ. ಅಧಿಕಾರಕ್ಕಾಗಿ ಬಿಜೆ​ಪಿ ಮತ್ತು ಕಾಂಗ್ರೆಸ್‌ ಪೈಕಿ ಯಾರ ಜೊತೆ ಬೇಕಾ​ದರೂ ಹೋಗು​ತ್ತಾರೆ ಟೀಕಿ​ಸಿ​ದರು. ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿ​ಸಿ​ದ್ದಾರೆ. ಅವ​ನ್ಯಾ​ವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ. ಅವನು ನನ್ನ ಹೆಸ​ರನ್ನು ಸಿದ್ರಾ​ಮುಲ್ಲಾ ಖಾನ್‌ ಅಂತ ಕರೆ​ಯು​ತ್ತಾನೆ. ನಮ್ಮ ಮನೆ ದೇವರು ಸಿದ್ದ​ರಾ​ಮೇ​ಶ್ವರ, ನಮ್ಮ ಊರ ಹೆಸರು ಸಿದ್ದ​ರಾ​ಮನ ಹುಂಡಿ. ಅದಕ್ಕೆ ನಮ್ಮಪ್ಪ ಸಿದ್ದ​ರಾ​ಮಯ್ಯ ಅಂತ ಹೆಸ​ರಿ​ಟ್ಟಿ​ದ್ದಾರೆ. ನಾನೂ ಅಪ್ಪಟ ಹಿಂದೂ ಎಂದು ಹೇಳಿ​ದ​ರು.

ಮಹಾ​ತ್ಮ​ಗಾಂಧಿ ಕೂಡ ಅಪ್ಪಟ ಹಿಂದೂ ಆಗಿ​ದ್ದ​ವರು. ಹಿಂದೂ-ಮುಸ್ಲಿಂರ ಸಾಮ​ರ​ಸ್ಯಕ್ಕೆ ಹೋರಾಟ ಮಾಡು​ತ್ತಿ​ದ್ದರು. ಆ ಮಹಾನ್‌ ವ್ಯಕ್ತಿ​ಯನ್ನು ಕೊಲೆ ಮಾಡಿದ ಗೋಡ್ಸೆ​ಯನ್ನು ಪೂಜಿಸುತ್ತೀರಿ. ನಿಮಗೆ ನಾಚಿಕೆ ಆಗು​ವು​ದಿ​ಲ್ಲವೇ ಎಂದು ವಾಗ್ದಾ​ಳಿ ನಡೆ​ಸಿದರು. ಬಿಜೆ​ಪಿ​ಯ​ವರು ಸ್ವಾಮಿ ವಿವೇ​ಕಾ​ನಂದರ ಜನ್ಮ ದಿನ ಆಚರಿ​ಸು​ತ್ತಿ​ದ್ದಾರೆ. ಆದರೆ, ಅವರು ಯಾರು ಮನು​ವಾದ ಹಾಗೂ ಪುರೋ​ಹಿತ ಶಾಹಿ ಆಚ​ರಣೆ ಮಾಡು​ತ್ತಾರೋ ಅದು ದೇಶಕ್ಕೆ ಶಾಪವೆಂದು ಹೇಳಿ​ದ್ದರು. ಅವರ ಮಾತು​ಗ​ಳಿಂದಲೂ ಬಿಜೆ​ಪಿ​ಯ​ವ​ರಿಗೆ ಜ್ಞಾನೋ​ದಾಯವಾಗಿಲ್ಲ ಎಂ​ದ​ರು.

ನಾನೇಕೆ ಹೊಸ ಪಕ್ಷ ಕಟ್ಟಲಿ?: ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ ಅಂತ ನಾನು ಹೊಸ ಪಕ್ಷ ಕಟ್ಟಬೇಕಾ? ಬಿಜೆಪಿ ಪಕ್ಷ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್‌ ಲೀಡರ್‌, ಶಾಸಕಾಂಗ ಪಕ್ಷದ ನಾಯಕ ಎಂದ​ರು. ಬಿಜೆಪಿ ಜೊತೆ ಹೋದವರು ಯಾರು. ನಮಗೂ ಜೆಡಿಎಸ್‌ಗೂ ಸಂಬಂಧವಿಲ್ಲ. ಅವರು ಯಾವುದೇ ತತ್ವ ಸಿದ್ಧಾಂತ ಇಟ್ಟುಕೊಂಡಿಲ್ಲ. ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್‌ ವೋಟ್‌ ಹೊಡೆಯಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರುದ್ಧ ಸಿದ್ದ​ರಾ​ಮಯ್ಯ ಕಿಡಿ​ಕಾ​ರಿ​ದರು.

ಅಮಿತ್‌ ಶಾ 40% ಸರ್ಕಾರ ಯಾವು​ದೆಂದು ಉತ್ತ​ರಿ​ಸಲಿ: ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್‌ ಶಾ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಸಿದ್ದ​ರಾ​ಮಯ್ಯ ಸರ್ಕಾರ ದೆಹಲಿ ನಾಯ​ಕ​ರಿಗೆ ಎಟಿಎಂ ಆಗಿತ್ತು ಎಂದು ಹೇಳು​ತ್ತಿ​ದ್ದಾರೆ. ಅವ​ರಿಗೆ ಧೈರ್ಯ​ವಿ​ದ್ದರೆ ಯಾರ ಸರ್ಕಾ​ರ​ವನ್ನು 40 ಪರ್ಸೆಂಟ್‌ ಸರ್ಕಾರವೆಂದು ಕರೆ​ಯು​ತ್ತಿ​ದ್ದಾ​ರೆಂದು ಉತ್ತ​ರಿ​ಸಲಿ ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಸವಾಲು ಹಾಕಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, 40 ಪರ್ಸೆಂಟ್‌ ಸಸ​ರ್ಕಾರ ಅಂತ ನನ್ನ ಕಾಲ​ದಲ್ಲಿ ಕರೆ​ದಿ​ದ್ದರಾ. ಯಾರ ಕಾಲ​ದಲ್ಲಿ 40 ಪರ್ಸೆಂಟ್‌ ಅಂತ ಕರೆ​ದ​ರೆಂದು ಹೇಳಲಿ. ಚುನಾ​ವ​ಣೆ​ಗಾಗಿ ಅಮಿತ್‌ ಶಾ ಸುಳ್ಳು ಹೇಳು​ತ್ತಿ​ದ್ದಾರೆ ಎಂದು ತಿರು​ಗೇಟು ನೀಡಿ​ದ​ರು. 

ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ ಅಂತ ನಾನು ಹೊಸ ಪಕ್ಷ ಕಟ್ಟಬೇಕಾ. ಬಿಜೆಪಿ ಪಕ್ಷ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್‌ ಲೀಡರ್‌, ಶಾಸಕಾಂಗ ಪಕ್ಷದ ನಾಯಕ ಎಂದ​ರು. ಬಿಜೆಪಿ ಜೊತೆ ಹೋದವರು ಯಾರು? ನಮಗೂ ಅವರಿಗೂ ಸಂಬಂಧ ಇಲ್ಲ. ಅವರು ಯಾವುದೇ ತತ್ವ ಸಿದ್ದಾಂತ ಇಟ್ಟುಕೊಂಡಿಲ್ಲ. ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್‌ ವೋಟ್‌ ಹೊಡೆಯಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರುದ್ಧ ಸಿದ್ದ​ರಾ​ಮಯ್ಯ ಕಿಡಿ​ಕಾ​ರಿ​ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ