ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನನಗೆ ಆಕ್ಷನ್ ಚಿತ್ರ ಅಂದ ಬಹಳ ಇಷ್ಟ- ರಚನಾ ಇಂದರ್

Twitter
Facebook
LinkedIn
WhatsApp
ನನಗೆ ಆಕ್ಷನ್ ಚಿತ್ರ ಅಂದ ಬಹಳ ಇಷ್ಟ- ರಚನಾ ಇಂದರ್

ರಚನಾ ಇಂದರ್ ಅವರ ಐದು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಗಣೇಶ್, ರಿಷಭ್ ಶೆಟ್ಟಿ ಜೊತೆ ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದಾರೆ.

ಒಂದು ಚಿತ್ರ ಯಶಸ್ವಿಯಾದ ನಂತರ ಅಂತದೇ ಚಿತ್ರಗಳನ್ನು ಮಾಡುವುದು ರೂಢಿ. ಇದು ಕೇವಲ ಚಿತ್ರಕ್ಕೆ ಮಾತ್ರವಲ್ಲ,ಅದರಲ್ಲಿ ಅಭಿನಯಿಸಿದ ಹೀರೋ, ಹೀರೋಯಿನ್ ಗಳಿಗೂ ಅಂಥದೇ ಪಾತ್ರಗಳು ಹುಡುಕಿ ಬರುತ್ತವೆ. ಲವ್ ಮಾಕ್ಟೇಲ್ ಚಿತ್ರದ ನಾಯಕಿ ರಚನಾ ಇಂದರ್ ಇದಕ್ಕೆ ಉದಾಹರಣೆ.
ಲವ್ ಮಾಕ್ಟೇಲ್ -1 ಗೆದ್ದ ನಂತರ ಆಕೆಯನ್ನು ಹುಡುಕಿ ಬಂದದ್ದು ಬರೀ ಲವ್ ಸ್ಟೋರಿಗಳೇ. ಲವ್ 360, ಲವ್ ಮಾಕ್ ಟೇಲ್ -2, ಲೆಟ್ಸ್ ಬ್ರೇಕ್ ಅಪ್ ಹೀಗೆ…. ಆದರೆ, ಲವ್ ಮಾಕ್ಟೇಲ್ 1 ಬಿಡುಗಡೆಯಾದ ಮೇಲೆ ಈಕೆ ಬಂದ ಅವಕಾಶಗಳು ಸಿಕ್ಕಾಪಟ್ಟೆ ಅನ್ನೋದು ಸುಳ್ಳಲ್ಲ. ಯಾವ ತನಕ ಅಂದರೆ, ತೆಲುಗು ಚಿತ್ರರಂಗದ ಕದವೂ ಇವರಿಗೆ ತೆರೆಯಿತು.

‘ನನಗೆ ಕನಸಲ್ಲೂ ಇಷ್ಟೊಂದು ಸಿನಮಾಗಳು ಸಿಗುತ್ತೆ ಅಂದುಕೊಂಡಿರಲಿಲ್ಲ. ನಾನು ನಟಿಯಾಗಬೇಕು ಅಂತ ಆಕ್ಟಿಂಗ್ ಶಾಲೆಗೆ ಸೇರಿದೆ. ಅಲ್ಲಿ ಒಂದೇ ವಾರಕ್ಕೆ ಲವ್ ಮಾಕ್ಟೇಲ್ ಆಡೀಷನ್ ಆಯ್ತು. ಆಯ್ಕೆ ಆದೆ. ಬದುಕೇ ಬದಲಾಯಿತು’ ಎನ್ನುತ್ತಾರೆ ರಚನಾ.
ಲವ್ ಮಾಕ್ಟೇಲ್ ನಂತರ ಬಂದ ಸಾಲು ಸಾಲು ಲವ್ ಸ್ಟೋರಿಗಳಿಂದ ರಚನಾ ಸ್ವಲ್ಬ ಹಿಂಜರಿದಿದ್ದು ಸತ್ಯ. ಹಾಗಾಗಿ, ಈಕೆ ಸ್ವಲ್ಪ ಚೂಸಿ ಆದರಂತೆ.
‘ಎಲ್ಲರೂ ಒಂದೇ ಥರ ಪಾತ್ರಗಳು ಬೇಡ ಅಂತ ನಾನು ಸ್ವಲ್ಪ ಪ್ರೀತಿ-ಪ್ರೇಮ ಕತೆಯಿಂದ ದೂರ ನಿಂತೆ. ಆಗ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಮಾಡಿ ಮುಗಿಸಿದೆ. ರಿಷಬ್ ಶೆಟ್ಟಿ ತಂಡದ ಜೊತೆ ಹರಿಕಥೆ ಅಲ್ಲ ಗಿರಿಕಥೆಯ ಸಿನಿಮಾ ಈಗ ತಾನೇ ಮುಗಿದೆ. ತೆಲುಗಿನಲ್ಲಿ ಚಿತ್ರನ್ ಮಹಾರಾಣಿ ಸಿನಿಮಾದ ಶೂಟಿಂಗ್ ಕೂಡ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಹೀಗೆ ನನ್ನ ಅಭಿರುಚಿಯ ಹಾದಿಯನ್ನು ಬದಲಿಸಿಕೊಂಡೆ’ ಎಂದು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ ರಚನಾ.
ಲವ್ ಮಾಕ್ಟೇಲ್ ಕೃಪೆ ಹೇಗಿದೆ ಎಂದರೆ, ರಚನಾರನ್ನು ಬೇಡಿಕೆ ನಾಯಕಿಯನ್ನು ರೂಪಿಸಿದ್ದು. ಈಗಾಗಲೇ ಐದು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆಯಂತೆ.

ಆದರೆ ರಚನಾಗೆ ಆಕ್ಷನ್ ಚಿತ್ರದಲ್ಲಿ ನಟಿಸುವ ಕನಸು ಇನ್ನು ಬಾಕಿ ಇದೆಯಂತೆ. ಪುಟ್ಟ ಹುಡುಗಿಯಾಗಿದ್ದಾಗ, ಟಿ.ವಿಯಲ್ಲಿ ನಾಯಕಿ ಫೈಟ್ ಮಾಡುವ ದೃಶ್ಯವನ್ನು ನೋಡಿ ನೋಡಿಯೇ ತಾನೂ ಈ ರೀತಿ ಫೈಟ್ ಮಾಡಬೇಕು ಅನ್ನೋ ಹುಚ್ಚು ತಲೆಗೆ ಹತ್ತಿತಂತೆ. ಈಗ ಅದನ್ನು ಆಕ್ಷನ್ ಸಿನಿಮಾ ಮೂಲಕ ತೀರಿಸಿಕೊಳ್ಳುವ ಗುರಿ ರಚನಾ ಹೊಂದಿದ್ದಾರೆ. ಅಂಥ ಸಿನಿಮಾ ಸಿಕ್ಕರೆ ಮಾಡಲು ಸಿದ್ಧರಾಗಿದ್ದಾರಂತೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು