ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಡು ಆಗಸದಲ್ಲಿ ಅಸ್ವಸ್ಥಗೊಂಡ ಪೈಲಟ್‌: ವಿಮಾನ ಕೆಳಗಿಳಿಸಿದ ಸಾಮಾನ್ಯ ಪ್ರಯಾಣಿಕ

Twitter
Facebook
LinkedIn
WhatsApp
ನಡು ಆಗಸದಲ್ಲಿ ಅಸ್ವಸ್ಥಗೊಂಡ ಪೈಲಟ್‌: ವಿಮಾನ ಕೆಳಗಿಳಿಸಿದ ಸಾಮಾನ್ಯ ಪ್ರಯಾಣಿಕ

ವಿಮಾನ ಹಾರಾಟ ಸುಲಭದ ವಿದ್ಯೆ ಅಲ್ಲ. ಆದಾಗ್ಯೂ ಓರ್ವ ವಿಮಾನ ಹಾರಾಟದ ಬಗ್ಗೆ ಅರಿವಿರದ ಸಾಮಾನ್ಯ ಪ್ರಯಾಣಿಕರೊಬ್ಬರು ವಿಮಾನವನ್ನು ಆಗಸದಿಂದ ಕೆಳಗಿಳಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಪೈಲಟ್ ನಡು ಆಗಸದಲ್ಲಿ ಅಸ್ವಸ್ಥರಾದ ಪರಿಣಾಮ ವಿಮಾನದಲ್ಲಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು ವಿಮಾನವನ್ನು ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾಗಿ ವರದಿಯಾಗಿದೆ. ಯಾವುದೇ ಹಾರಾಟದ ಅನುಭವವಿಲ್ಲದ ಪ್ರಯಾಣಿಕರೊಬ್ಬರು ಮಂಗಳವಾರ (ಮೇ 10) ಮಧ್ಯಾಹ್ನ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.

ಏರ್ ಟ್ರಾಫಿಕ್ ಕಂಟ್ರೋಲ್‌ಗೆ ವಿಮಾನವನ್ನು ಹೇಗೆ ಹಾರಿಸಬೇಕೆಂದು ತಿಳಿದಿಲ್ಲ ಎಂದು ಪ್ರಯಾಣಿಕ ಹೇಳುವುದನ್ನು ಕೇಳಬಹುದು ಎಂದು ಲೈವ್‌ಎಟಿಸಿ.ನೆಟ್ ಆಡಿಯೊ ಸಿಎನ್‌ಎನ್ ವರದಿ ಮಾಡಿದೆ. ನನಗೆ ಇಲ್ಲಿ ಗಂಭೀರ ಪರಿಸ್ಥಿತಿ ಇರುವುದರ ಅರಿವಾಗಿದೆ. ನನ್ನ ಪೈಲಟ್ ಅಸಮರ್ಪಕವಾಗಿದ್ದು, ವಿಮಾನವನ್ನು ಹೇಗೆ ಹಾರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಅಪರಿಚಿತ ಪ್ರಯಾಣಿಕರು ಆಡಿಯೊದಲ್ಲಿ ಹೇಳಿದ್ದಾರೆ. ಈ ಆಡಿಯೋ ಫ್ಲೋರಿಡಾದ ಪಾಮ್ ಬೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಅಲ್ಲಿನ ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಯಾಣಿಕರಿಗೆ ವಿಮಾನವನ್ನು ಇಳಿಸುವುದು ಹೇಗೆ ಎಂಬ ಸೂಚನೆಗಳನ್ನು ನೀಡಲು ಪ್ರಾರಂಭಿಸಿದರು.

ವಿಮಾನದ ರೆಕ್ಕೆಗಳ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ನೀವು ನನಗಾಗಿ ವಿಮಾನವನ್ನು ಇಳಿಸಲು ಪ್ರಾರಂಭಿಸಬಹುದೇ ಎಂದು ನೋಡಿ. ನಿಯಂತ್ರಣಗಳನ್ನು ಮುಂದಕ್ಕೆ ಒತ್ತಿ ಮತ್ತು ಅತ್ಯಂತ ನಿಧಾನಗತಿಯಲ್ಲಿ ಇಳಿಯಿರಿ ಎಂದು ಏರ್ ಟ್ರಾಫಿಕ್ ಕಂಟ್ರೋಲರ್ ವ್ಯಕ್ತಿಗೆ ಹೇಳುವುದನ್ನು ಆಡಿಯೋದಲ್ಲಿ ಕೇಳಬಹುದು. ಉತ್ತರ ಅಥವಾ ದಕ್ಷಿಣದ ಕಡೆಯ ಕರಾವಳಿಯತ್ತ ಸಾಗಿ. ನಾವು ನಿಮ್ಮನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಆಡಿಯೋದಲ್ಲಿ ಏರ್ ಕಂಟ್ರೋಲ್ ರೂಮ್‌ ಸಿಬ್ಬಂದಿ ಅಪರಿಚಿತ ಪ್ರಯಾಣಿಕನಿಗೆ ಮಾಹಿತಿ ನೀಡಿದ್ದಾರೆ.

LiveATC.net ನಿಂದ ಸೆರೆಹಿಡಿಯಲಾದ ಹೆಚ್ಚುವರಿ ಆಡಿಯೊದಲ್ಲಿ, ಮತ್ತೊಂದು ಏರ್ ಟ್ರಾಫಿಕ್ ನಿಯಂತ್ರಕರು ಇತರ ವಿಮಾನಗಳಿಗೆ ಏನಾಯಿತು ಎಂಬುದನ್ನು ಹೇಳುವುದನ್ನು ಕೇಳಬಹುದು. ನೀವು ಒಂದೆರಡು ಪ್ರಯಾಣಿಕರು ಆ ವಿಮಾನವನ್ನು ಇಳಿಸುವುದನ್ನು ನೋಡಿದ್ದೀರಿ ಎಂದು ಏರ್‌ ಟ್ರಾಫಿಕ್ ನಿಯಂತ್ರಕರು, ತನ್ನ ವಿಮಾನವನ್ನು ಟೇಕ್ ಆಫ್ ಮಾಡಲು ಕಾಯುತ್ತಿರುವ ಅಮೇರಿಕನ್ ಏರ್‌ಲೈನ್ಸ್ ಪೈಲಟ್‌ಗೆ ಹೇಳುತ್ತಿರುವುದನ್ನು ಕೇಳಬಹುದು. ಪ್ರಯಾಣಿಕರು ವಿಮಾನವನ್ನು ಇಳಿಸಿದರೇ ಎಂದು ಅಮೆರಿಕಾ ಏರ್‌ಲೈನ್ಸ್‌ನ ಪೈಲಟ್‌ ಕೇಳುತ್ತಾರೆ. ಅಲ್ಲದೇ ಅದಕ್ಕೆ ದೇವರೇ ಇದು ಶ್ರೇಷ್ಠವಾದ ಕೆಲಸ ಎಂದು ಅವರು ಉದ್ಘರಿಸುತ್ತಾರೆ. ಪೈಲಟ್‌ಗೆ ವೈದ್ಯಕೀಯ ಸಮಸ್ಯೆ ಆದಾಗ ಏಕ-ಎಂಜಿನ್ ಸೆಸ್ನಾ 208 ವಿಮಾನದಲ್ಲಿ ಇಬ್ಬರು ಇದ್ದರು ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಪೈಲಟ್‌ನ ಸ್ಥಿತಿ ಹೇಗಿದೆ ಎಂಬ ಬಗ್ಗೆ ತಕ್ಷಣಕ್ಕೆ ತಿಳಿದು ಬಂದಿಲ್ಲ ಈ ಬಗ್ಗೆ FAA ತನಿಖೆ ನಡೆಸುತ್ತಿದೆ.

ಕಳೆದ ವಾರ ಮುಂಬೈನಿಂದ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ತೀವ್ರ ಟಬ್ರ್ಯುಲೆನ್ಸ್‌ ಉಂಟಾಗಿ 15 ಮಂದಿ ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿತ್ತು. ಘಟನೆಯ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಸ್ತೃತ ತನಿಖೆಗೆ ಆದೇಶಿಸಿದೆ. ಗಾಯಗೊಂಡವರಲ್ಲಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನು ಕೆಲವರು ಬೆನ್ನುಮೂಳೆ ಮತ್ತು ತಲೆಗೆ ಉಂಟಾದ ಹಾನಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist