ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತನ್ನದೇ ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳಡಿ ಇದ್ದು ಬದುಕಿ ಬಂದ 17 ರ ಯುವಕ!

Twitter
Facebook
LinkedIn
WhatsApp
ತನ್ನದೇ ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳಡಿ ಇದ್ದು ಬದುಕಿ ಬಂದ 17 ರ ಯುವಕ!

ನವದೆಹಲಿ (ಫೆ.11): ಭೂಕಂಪದಿಂದ ಅಕ್ಷರಶಃ ನರಕದಂತಾಗಿರುವ ಟರ್ಕಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಗುರುವಾರ ರಾತ್ರಿ ಟರ್ಕಿಯ ರಕ್ಷಣಾ ಸಿಬ್ಬಂದಿಗಳು ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಗಾಜಿಯಾಟೆಂಪ್‌ ಪ್ರಾಂತ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಕಟ್ಟಡದ ಕೆಳಗಿನಿಂದ 17 ವರ್ಷದ ಯುವಕನನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ಸಂಭವಿಸಿದ 94 ಗಂಟೆಗಳ ಬಳಿಕ ಯುವಕನ್ನು ಹೊರತೆಗೆಯಲಾಗಿದೆ. ಇಷ್ಟು ಸಮಯದ ಕಾಲ ಆಹಾರವಿಲ್ಲದೆ, ಆತ ಬದುಕಿದ್ದ ಬಗ್ಗೆಯೇ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆತ, ತನ್ನದೇ ಮೂತ್ರ ಕುಡಿದು ಇಷ್ಟು ದಿನಗಳ ಕಾಲ ಜೀವಂತವಾಗಿದ್ದೆ ಎಂದು ಹೇಳಿದ್ದಾನೆ. ಅದ್ನಾನ್ ಮುಹಮ್ಮತ್ ಕೊರ್ಕುಟ್ ಹೆಸರಿನ ಯುವಕನನ್ನು ಗುರುವಾರ ತಡರಾತ್ರಿ ಗಾಜಿಯಾಂಟೆಪ್‌ನ ಸೆಹಿತ್‌ಕಾಮಿಲ್ ಜಿಲ್ಲೆಯ ಅಪಾರ್ಟ್‌ಮೆಂಟ್‌ನ ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ವೈರಲ್‌ ಆಗಿರುವ ಸೋಶಿಯಲ್‌ ಮೀಡಿಯಾ ವಿಡಿಯೋದಲ್ಲಿ ಕೊರ್ಕುಟ್‌, ‘ನನ್ನ ಮೂತ್ರವನ್ನೇ ಕುಡಿದು ಇಲ್ಲಿಯವರೆಗೂ ಬದುಕಿದ್ದೆ. ನೀವು ಬರುವವರೆಗೂ ನಾನು ಕಾಯುತ್ತಿದ್ದೆ’ ಎಂದು ಹೇಳಿದ್ದಾನೆ. 

index 10

 ;ನಾನು ನನ್ನದೇ ಮೂತ್ರವನ್ನು ಕುಡಿದು ಬದುಕಲು ಯಶಸ್ವಿಯಾದೆ. ಓಹ್‌ ದೇವರೆ ತುಂಬಾ ಥ್ಯಾಂಕ್ಸ್‌ ನಾನು ಬದುಕಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾನೆ. ನೀವು ಬರಲಿ ಎಂದು ನಾನು ಆಶಿಸುತ್ತಿದ್ದೆ. ನೀವು ಬಂದಿದ್ದೀರಿ. ದೇವರಿಗೆ ಥ್ಯಾಂಕ್ಸ್‌. ನಿಮಗೆಲ್ಲರಿಗ ಥ್ಯಾಂಕ್ಸ್‌’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೆ ಯಾವುದಾದರೂ ಶಬ್ದ ನಿಮಗೆ ಕೇಳಿಸುತ್ತಿತ್ತೇ ಎಂದು ಸಿಬ್ಬಂದಿಗಳು ಕೇಳಿದ ಪ್ರಶ್ನೆಗೆ, ನಾಯಿ ಬೊಗಳುತ್ತಿದ್ದ ಶಬ್ದ ಕೇಳಿದ್ದೇನೆ ಎಂದರು. ಅದಕ್ಕೆ ಸಿಬ್ಬಂದಿಗಖು, ನಾಯಿಯನ್ನು ನಾವು ರಕ್ಷಣೆ ಮಾಡುತ್ತೇವೆ ಎಂದಿರುವ ವಿಡಿಯೋ ಇದಾಗಿದೆ.

 ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಪ್ರಬಲವಾದ ಭೂಕಂಪವು ಸಂಭವಿಸಿದೆ. ಇದು ಸಂಪೂರ್ಣ ನಗರವನ್ನು ವಿಧ್ವಂಸ ಮಾಡಿದ್ದರೆ, ಸಾವಿರಾರು ಜನರು ಸಾವನ್ನಪ್ಪಿದ್ದು ಲಕ್ಷಗಟ್ಟಲೆ ಜನರು ಗಾಯಗೊಂಡಿದ್ದಾರೆ. ಈವರೆಗೂ 24 ಸಾವಿರಕ್ಕೂ ಅಧಿಕ ಜನ ಸಾವು ಕಂಡಿದ್ದಾರೆ ಎಂದು ಹೇಳಲಾಗಿದೆ. ಶೀತ ವಾತಾವರಣದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಸತತ ನಾಲ್ಕನೇ ದಿನವೂ ವ್ಯಾಪಕವಾಗಿ ಮುಂದುವರಿದಿದೆ. ಸಾಕಷ್ಟು ಜನರು ಇನ್ನೂ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist