ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಟ್ರೇಡ್ಮಾರ್ಕ್ಗಾಗಿ ಪಟ್ಟು ಬಿಡದೆ ಕೋರ್ಟ್ ಮೆಟ್ಟಿಲೇರಿ ಇದೀಗ ಅಮೆಜಾನ್ ವಿರುದ್ಧ ಗೆಲುವಿನ ನಗೆ ಬೀರಿದೆ ಬೆಂಗಳೂರಿನ ಹ್ಯಾಪಿ ಬೆಲ್ಲಿ ಬೇಕ್ಸ್. ಮಾತ್ರವಲ್ಲ ಟ್ರೇಡ್ಮಾರ್ಕ್ನ್ನೂ ತನ್ನದಾಗಿಸಿಕೊಂಡು ಇ-ಕಾಮರ್ಸ್ ಕಂಪನಿಗೆ ಸೋಲಿನ ರುಚಿ ತೋರಿಸಿದೆ.
ಬೆಂಗಳೂರಿನ ‘ಹ್ಯಾಪಿ ಬೆಲ್ಲಿ ಬೇಕ್ಸ್’ ಈ ಸಾಹಸದಲ್ಲಿ ಯಶಸ್ವಿಯಾಗಿರುವ ಬೇಕರಿ. ನಗರದ ಈ ಬೇಕರಿಯು ಕಳೆದ ತಿಂಗಳು ಟ್ರೇಡ್ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ನಾಲ್ಕು ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಜಯಶಾಲಿಯಾಗಿದೆ.
2008ರಲ್ಲಿ ಪ್ರಾರಂಭವಾದ ಈ ಬೇಕರಿ 2016ರಿಂದ ‘ಹ್ಯಾಪಿ ಬೆಲ್ಲಿ’ ಎಂಬ ಟ್ರೇಡ್ಮಾರ್ಕ್ ಅನ್ನು ಹೊಂದಿತ್ತು. ಆದರೆ ಅಮೆಜಾನ್ ಕೂಡ ಇದೇ ಬ್ರ್ಯಾಂಡ್ ಹೆಸರಲ್ಲಿ ಬೇಕರಿ ವಸ್ತುಗಳು, ತಿಂಡಿಗಳು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡಲಾರಂಭಿಸಿದಾಗ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆದು ಇದೀಗ ಸಿಟಿ ಸಿವಿಲ್ ಕೋರ್ಟ್ ಬೇಕರಿ ಪರಿವಾಗಿ ಆದೇಶ ನೀಡಿದೆ.
ಅಮೆಜಾನ್ನ ವೆಬ್ಸೈಟ್ನ ಪ್ರಕಾರ, ಹ್ಯಾಪಿ ಬೆಲ್ಲಿ ಕಂಪನಿಯ ಬ್ರಾಂಡ್ ಆಗಿದೆ. ಒಂದೇ ರೀತಿಯ ಹೆಸರು ಇರುವುದು ತಿಳಿದು ಬಂದ ಬಳಿಕ ಶಿಶಮ್ ಹಿಂದುಜಾ ಅಮೆಜಾನ್ ಸೆಲ್ಲರ್ ಸರ್ವೀಸಸ್, ಕ್ಲೌಡ್ಟೇಲ್ ಇಂಡಿಯಾ ಮತ್ತು ಟೂಟ್ಸಿ ಎಲ್ಎಲ್ಸಿ ವಿರುದ್ಧ ಮೊಕದ್ದಮೆ ಹೂಡಿದರು. ಅಮೆಜಾನ್ ಪರವಾಗಿ ಟೂಟ್ಸಿ ಟ್ರೇಡ್ಮಾರ್ಕ್ ಅರ್ಜಿಯನ್ನು ಸಲ್ಲಿಸಿತ್ತು.
ಆದರೆ ವಿಚಾರಣೆ ವೇಳೆ ಅಮೆಜಾನ್, ಹ್ಯಾಪಿ ಬೆಲ್ಲಿ ಬ್ರಾಂಡ್ ಹೆಸರಿನ ತನ್ನ ವ್ಯವಹಾರವು ಹಿಂದುಜಾ ನಡೆಸುತ್ತಿರುವ ವ್ಯವಹಾರಕ್ಕಿಂತ ಭಿನ್ನ ಎಂದು ವಾದಿಸಿತ್ತು. ಇದರ ಜೊತೆಗೆ, ಹ್ಯಾಪಿ ಬೆಲ್ಲಿ ಬೇಕ್ಸ್ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ನಮ್ಮ ಉತ್ಪನ್ನಗಳಿಗೆ ವಿಶ್ವಾದ್ಯಂತ ಟ್ರೇಡ್ಮಾರ್ಕ್ ಅನ್ನು ಬಳಸುತ್ತಿರುವುದಾಗಿ ಕ್ಲೌಡ್ಟೈಲ್ ಮತ್ತು ಟೂಟ್ಸಿ ಹೇಳಿದ್ದವು.
ಹ್ಯಾಪಿ ಬೆಲ್ಲಿ ಬೇಕ್ಸ್ ಸದ್ಭಾವನೆ ಮತ್ತು ಖ್ಯಾತಿಯನ್ನು ಹೊಂದಿಲ್ಲ ಎಂದೂ ಅಮೆಜಾನ್ ಹೇಳಿತ್ತು. ಆದಾಗ್ಯೂ, ನ್ಯಾಯಾಲಯವು ಅಮೆಜಾನ್ನ ವಾದವನ್ನು ತಿರಸ್ಕರಿಸಿದ್ದಲ್ಲದೆ, ಬೇಕರಿ 2008ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ‘ಪ್ರತಿವಾದಿಯ ವಾದವು ಅವರ ದುರಹಂಕಾರವನ್ನು ಪ್ರತಿಬಿಂಬಿಸುತ್ತದೆ’ ಎಂದು ಚಾಟಿ ಬೀಸಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?