ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜೈಂಟ್ ವ್ಹೀಲ್ ಆಡುವಾಗ ಬಾಲಕಿಯ ಕೂದಲು ಸಿಲುಕಿ ಕಿತ್ತು ಬಂತು ಚರ್ಮ – ಮೂವರ ವಿರುದ್ಧ ಕೇಸ್

Twitter
Facebook
LinkedIn
WhatsApp
mcms 6

ಮಂಡ್ಯ: ಜೈಂಟ್ ವ್ಹೀಲ್ ಆಟ ಆಡುವಾಗ ಮಹಾದುರಂತವೊಂದು ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ ನಡೆದು ಹೋಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಯಿಂಟ್ ವೀಲ್ ಆಟಿಕೆ ಮಾಲೀಕ ಹಾಗೂ ಇಬ್ಬರು ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಶನಿವಾರ ರಾತ್ರಿ ರಥಸಪ್ತಮಿ ಹಿನ್ನಲೆ ಶ್ರೀರಂಗನಾಥ ಬ್ರಹ್ಮೋರಥೋತ್ಸ ಜಾತ್ರೆವಿತ್ತು. ಆ ವೇಳೆ ರಂಗನಾಥ ಮೈದಾನದಲ್ಲಿ ರಮೇಶ್‌ ಎಂಬಾತ ಜೈಂಟ್ ವ್ಹೀಲ್ ಆಟಿಕೆ ನಡೆಸ್ತಿದ್ದ. 50 ರೂ. ಕೊಟ್ಟು ಜೈಂಟ್ ವ್ಹೀಲ್  ಏರಿದ್ದ 14 ವರ್ಷದ ಶ್ರೀವಿದ್ಯಾ ಎಂಬ ಬಾಲಕಿಯ (Girl) ತಲೆ ಕೂದಲು ವ್ಹೀಲ್ ಒಂದಕ್ಕೆ ಸಿಕ್ಕಿಕೊಂಡಿದೆ. ಆದ್ರೆ ಆ ಜೈಂಟ್ ವ್ಹೀಲ್ ಅನ್ನು ಕೂದಲು ಸಿಕ್ಕ ತಕ್ಷಣ ನಿಲ್ಲಿಸದ ಕಾರಣ ತಲೆಕೂದಲು ಸಮೇತ ತಲೆ ಚರ್ಮವೇ ಬೇರ್ಪಟ್ಟಿತ್ತು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನ ಸದ್ಯ ಮೈಸೂರಿನ (Mysuru) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಸದ್ಯ ಕುಟುಂಬಸ್ಥರ ದೂರಿನನ್ವಯ ಶ್ರೀರಂಗಪಟ್ಟಣ ಪೊಲೀಸರು ಇದೀಗ ಮೂವರ ಮೇಲೆ ಎಫ್‌.ಐ.ಆರ್ ದಾಖಲಿಸಿದ್ದಾರೆ.‌ ಈ ದುರಂತಕ್ಕೆ ಕಾರಣವಾದ ಇಬ್ಬರು ಅಧಿಕಾರಿಗಳು ಈ ಕೇಸ್‌ನಲ್ಲಿ ಆರೋಪಿಯಾಗಿದ್ದಾರೆ.

ಜೈಂಟ್ ವ್ಹೀಲ್ ಆಟದಲ್ಲಿ ಮುಂಜಾಗ್ರತೆ ವಹಿಸದ ಮಾಲೀಕ ರಮೇಶ್ ಹಾಗೂ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸದೇ, ತನಿಖೆ ನಡೆಸದೆ ಅನುಮತಿ ನೀಡಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ರಂಗನಾಥಸ್ವಾಮಿ ದೇಗುಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮೇಗೌಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂದೀಪ್ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ