ಗುರುವಾರ, ಏಪ್ರಿಲ್ 25, 2024
ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!-ಶುಕ್ರವಾರ ಮತದಾನದಂದು ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ನಿಷೇಧ..!-164.53 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಕೊಂಡ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್!-ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ; ಆಕ್ರೋಶದ ಬಳಿಕ ಮಾಲೀಕ ಅರೆಸ್ಟ್.!-ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ; ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ-ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಅಸಲಿ ಕಾರಣ ಬಯಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗೆಜ್ಜೆಗಿರಿಯಲ್ಲಿ ಪ್ರಾಕೃತಿಕ ಸ್ವರೂಪದಲ್ಲಿ ಕಂಗೊಳಿಸುತ್ತಿರುವ ದೇಯಿ ಬೈದೆತಿ ಮಹಾ ಸಮಾಧಿ

Twitter
Facebook
LinkedIn
WhatsApp
ಗೆಜ್ಜೆಗಿರಿಯಲ್ಲಿ  ಪ್ರಾಕೃತಿಕ ಸ್ವರೂಪದಲ್ಲಿ ಕಂಗೊಳಿಸುತ್ತಿರುವ ದೇಯಿ ಬೈದೆತಿ ಮಹಾ ಸಮಾಧಿ

ಗೆಜ್ಜೆಗಿರಿಯಲ್ಲಿರುವ ದೇಯಿ ಬೈದ್ಯೆತಿ ಸಮಾಧಿಗೆ 450 ವರ್ಷಗಳ ಇತಿಹಾಸವಿದೆ. ಪಡುಮಲೆಯ ಅರಸು ಬಳ್ಳಾಲರಿಗೆ ಚಿಕಿತ್ಸೆ ನೀಡಲೆಂದು ಗೆಜ್ಜೆಗಿರಿ ಮನೆಯಿಂದ ತೆರಳಿದ್ದ ದೇಯಿ ಬೈದ್ಯೆತಿ ನಾಟಿ ವೈದ್ಯಕೀಯದ ಮೂಲಕ ಬಳ್ಳಾಲರ ಜೀವ ಉಳಿಸಿದ್ದರು.

ಅರಸು ಗುಣಮುಖನಾದ ಬಳಿಕ ಮತ್ತೆ ತನ್ನ ಮನೆಗೆ ಮರಳುತ್ತಿದ್ದ ಸಂದರ್ಭ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಬಳ್ಳಾಲರೇ ಮುಂದೆ ನಿಂತು ಹೆರಿಗೆಗೆ ವ್ಯವಸ್ಥೆ ಮಾಡಿದ್ದರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ 16ನೇ ದಿನವೇ ದೇಯಿ ಬೈದ್ಯೆತಿ ಬೀಡಿನ ಸಮೀಪದ ಕೆರೆಯಲ್ಲಿ ಆಕಸ್ಮಿಕ ಮರಣ ಹೊಂದಿದ್ದರು.

ವಿಷಯ ತಿಳಿದ ಅಣ್ಣಸಾಯನ ಬೈದ್ಯರು ಸಹೋದರಿಯ ಕಳೇಬರವನ್ನು ಗೆಜ್ಜೆಗಿರಿ ಮನೆಗೆ ತಂದು ದಫನ ಮಾಡಿದ್ದರು. ಬಳಿಕ ಅವಳಿ ಹಸುಳೆಗಳನ್ನು( ಕೋಟಿ ಚೆನ್ನಯರು) ಕೂಡ ಮನೆಗೆ ತಂದು ಸಾಕಿದ್ದರು. ತಾಯಿ, ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಅದೇ ಮನೆ ಅವರ ಪಾಲಿಗೆ ಸ್ವಂತ ಮನೆಯೂ, ಕುಟುಂಬದ ಮನೆಯೂ ಆಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ