ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಖಾಲಿ ಕಾಗದಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿ! ವಿಡಿಯೋ ವೈರಲ್‌

Twitter
Facebook
LinkedIn
WhatsApp
WhatsApp Image 2023 04 12 at 8.05.18 PM

ವಿಲ್‌ ಮಾಡಿಸುವುದಕ್ಕೋಸ್ಕರ ಸಂಬಂಧಿಗಳು ಖಾಲಿ ಕಾಗದಕ್ಕೆ ಮೃತ ಮಹಿಳೆಯೊಬ್ಬರ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಆಗ್ರಾದಲ್ಲಿ 2021 ರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋರ್ಜರಿ ವ್ಹೀಲ್ ಮಾಡುವ ಸಲುವಾಗಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ(Jitendra Sharma), ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಈ ಅಪರಾಧ ಕೃತ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೃತ ಮಹಿಳೆ ಕಮಲಾದೇವಿ ಎಂಬುವವರಾಗಿದ್ದು, ಇವರು ಜಿತೇಂದ್ರ ಶರ್ಮಾ ಎಂಬುವವರ ತಾಯಿಯ ಚಿಕ್ಕಮ್ಮನಾಗಿದ್ದು, 2021ರ ಮೇ 8 ರಂದು ಅವರು ಸಾವನ್ನಪ್ಪಿದ್ದರು. ಆಕೆಯ ಪತಿ ಈ ಮೊದಲೇ ಮೃತಪಟ್ಟಿದ್ದು, ಈ ದಂಪತಿಗೆ ಮಕ್ಕಳಿರಲಿಲ್ಲ. 

ಜಿತೇಂದ್ರ ಶರ್ಮಾ ಅವರ ದೂರಿನ ಪ್ರಕಾರ, ಕಮಲಾದೇವಿ ಅವರ ಸಾವಿನ ನಂತರ ಅವರ ಭಾವನ ಮಗ( ಪತಿಯ ಅಣ್ಣನ ಮಗ) ಆಕೆಯ ಮೃತದೇಹವನ್ನು ಇವರ ಬಳಿಯಿಂದ ಕಸಿದುಕೊಂಡು ಹೋಗಿದ್ದರು. ಆಗ್ರಾದ ಆಸ್ಪತ್ರೆಗೆ ಕಮಲಾದೇವಿಯವರ ಮೃತದೇಹವನ್ನು ಸಾಗಿಸುತ್ತಿದ್ದಾಗ, ಇನ್ನೇನು ಆಸ್ಪತ್ರೆಗೆ ತಲುಪಲು ಕೆಲ ನಿಮಿಷಗಳಿದ್ದಾಗ ಕಾರನ್ನು ಅಡ್ಡ ಹಾಕಿದ ಅವರು ವಕೀಲರೊಬ್ಬರನ್ನು ಕರೆಸಿ ನಕಲಿ ವಿಲ್ ಮಾಡುವುದಕ್ಕಾಗಿ ಕಮಲಾದೇವಿಯವರ ಹೆಬ್ಬೆಟ್ಟು ಪಡೆದಿದ್ದರು.

ನಂತರ ಈ ನಕಲಿ ವಿಲ್ ಬಳಸಿಕೊಂಡು ಕಮಲಾದೇವಿ ಪತಿ ಕಡೆಯ ಸಂಬಂಧಿಕರು ಕಮಲಾದೇವಿಯವರಿಗೆ (Kamala Devi)ಸೇರಿದ್ದ ಆಸ್ತಿ ಹಾಗೂ ಅಂಗಡಿಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಆದರೆ ಸುಶಿಕ್ಷಿತರಾಗಿದ್ದ ಕಮಲಾದೇವಿಯವರು ಎಲ್ಲೂ ಹೆಬ್ಬೆಟ್ಟು ಹಾಕುತ್ತಿರಲಿಲ್ಲ ಅವರು ತಮ್ಮ ಸಹಿಯನ್ನೇ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿತೇಂದ್ರ ಶರ್ಮಾ ಅವರಿಗೆ ಈ ಬಗ್ಗೆ ವಿಲ್‌ (fake will) ಬಗ್ಗೆ ಸಂಶಯ ಬಂದಿತ್ತು. ಆದರೆ ಇತ್ತೀಚೆಗೆ 45 ಸೆಕೆಂಡ್‌ಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಕಾರೊಂದರ ಹಿಂಬದಿ ಸೀಟಿನಲ್ಲಿ ಕಮಲಾದೇವಿ ಮೃತದೇಹವಿದ್ದು, ಆರೋಪಿಗಳು ವಕೀಲರೊಬ್ಬರ ನೆರವಿನಿಂದ ಅವರ ಕೈಯಿಂದ ಖಾಲಿ ಕಾಗದಗಳಿಗೆ ಹೆಬ್ಬೆಟ್ಟು ಸಹಿ ಪಡೆಯುತ್ತಿರುವ ವಿಡಿಯೋ ವೈರಲ್ ಆದ ಆಗಿದ್ದು, ಜಿತೇಂದ್ರ ಶರ್ಮಾ ಅವರ ಅನುಮಾನಕ್ಕೆ ಪುರಾವೆ ಸಿಕ್ಕಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಗ್ರಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ವರ್ತನೆ. ಇಂತಹವರಿಗೆ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ಕೆಲವರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂತಹ ಕೃತ್ಯವನ್ನು ಬೆಂಬಲಿಸಿದ ವಕೀಲನ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಎಂಥಾ ಕಾಲ ಬಂತು ನೋಡಿ ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೇ ಎಂಬ ಗಾದೆ ಮಾತೊಂದಿತ್ತು. ಆದರೆ ಈಗ ಆಸ್ತಿಗಾಗಿ ಹೆಣವನ್ನು ಕೂಡ ನೆಮ್ಮದಿಯಾಗಿರಲು ಕೆಲವು ದುಷ್ಟರು ಬಿಡುವುದಿಲ್ಲ ಎಂಬುದು ಈ ವಿಚಾರದಿಂದ ಸಾಬೀತಾಗಿರುವುದಂತೂ ನಿಜ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist