ಕೀಲು ನೋವಿನಿಂದ ಬಳಲುತ್ತಿದ್ದ ಬಡ ಮಹಿಳೆಗೆ ಸ್ವತಃ ಆಪರೇಶನ್ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ. ರಂಗನಾಥ್
ತುಮಕೂರು: ವೈದ್ಯರಾಗಿದ್ದವರು ರಾಜಕಾರಣಿಗಳಾದ ಸಣ್ಣಪುಟ್ಟ ಕಾಯಿಲೆಗಳಿಗೆ ಮಾತ್ರೆ ಬರೆದುಕೊಡುವುದು, ಔಷಧಿ ಬರೆದುಕೊಡುವುದನ್ನು ಸಾಮಾನ್ಯ. ಅದರೆ ಆಪರೇಶನ್ ಥಿಯೇಟರ್ ನೊಳಗೆ ಹೋಗಿ ಆಪರೇಶನ್ ಮಾಡಿರುವ ಉದಾಹರಣೆಗಳು ಕಡಿಮೆ ಎಂದೇ ಹೇಳಬೇಕು. ಅಂತಹ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ ಕುಣಿಗಲ್ ಶಾಸಕ ಡಾ.ರಂಗನಾಥ್.
ಮೂಲತಃ ಸರ್ಜನ್ ಆಗಿರುವ ಶಾಸಕ ಡಾ.ರಂಗನಾಥ್ ತಮ್ಮ ಕ್ಷೇತ್ರದ ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಣಿಗಲ್ ತಾಲೂಕಿನ ಕುದೂರು ಗ್ರಾಮದ ಆಶಾ ಎಂಬವರೇ ಶಸ್ತ್ರಚಿಕಿತ್ಸೆಗೊಳಗಾದವರು.
ಕುದೂರಿನ ಆಶಾ ಎಂಬ ಮಹಿಳೆಯ ಕೀಲು ಡಿಸ್ ಲೊಕೆಟ್ ಆಗಿತ್ತು. ಶಸ್ತ್ರಚಿಕಿತ್ಸೆ ಮಾಡಲು 4-5 ಲಕ್ಷ ರೂಪಾಯಿ ಖರ್ಚಾಗುತಿತ್ತು. ಹೀಗಾಗಿ ಮಹಿಳೆ ತಮ್ಮ ಕ್ಷೇತ್ರದ ಶಾಸಕರಾದ ಶಾಸಕರ ಬಳಿ ಬಂದು ನೋವು ತೋಡಿಕೊಂಡಿದ್ದ ಸಹಾಯ ಒದಗಿಸುವಂತೆ ಮನವಿ ಮಾಡಿದ್ದರು.
ಮಹಿಳೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದ ಶಾಸಕ ರಂಗನಾಥ್.
ಕಳೆದ 10 ವರ್ಷದ ಹಿಂದೆ ಇದೇ ರೀತಿ ಕೀಲು ಡಿಲೊಕೇಟ್ ಆಗಿದ್ದಾಗ ಯಶಸ್ವಿನಿ ಯೋಜನೆಯಲ್ಲಿ ಆಶಾ ಅವರು ಕೀಲು ಆಪರೇಷನ್ ಮಾಡಿಕೊಂಡಿದ್ದದರು. ಆದರೆ ಈಗ ಮತ್ತೇ ಡಿಸ್ ಲೊಕೆಟ್ ಆಗಿತ್ತು.
ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇಲ್ಲ. ಹೀಗಿರುವಾಗ ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಇದನ್ನರಿತು ಈ ರೀತಿಯ ಕೀಲು ಮೂಳೆ ಸಮಸ್ಯೆ ಇದ್ದ 23 ಮಹಿಳೆಯ ಉಚಿತ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, “ಇಂದು ಬೌರಿಂಗ್ ಆಸ್ಪತ್ರೆಯಲ್ಲಿ ನನ್ನ ಮತಕ್ಷೇತ್ರ ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಮಹಿಳೆಯೊಬ್ಬರ ಕೀಲಿನ ಶಸ್ತ್ರಚಿಕಿತ್ಸೆ ನಾನೇ ಸ್ವತಃ ಯಶಸ್ವಿಯಾಗಿ ಮಾಡಿದೆ. ಬಹಳ ದಿನಗಳ ನಂತರ ನನ್ನ ವೈದ್ಯಕೀಯ ವೃತ್ತಿಗೆ ಹೋಗಿದ್ದು ಮನಸಿಗೆ ಖುಷಿ ತಂದಿತು.” ಎಂದು ತಿಳಿಸಿದ್ದಾರೆ. ಅವರ ಈ ಪೋಸ್ಟಿಗೆ ವ್ಯಾಪಕ ಲೈಕ್, ಕಾಮೆಂಟ್ ಗಳು ಬಂದಿವೆ. ಇನ್ನು ಅವರ ಸೇವೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಕುಣಿಗಲ್ ನಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಕಾಂಗ್ರೆಸ್ ನಡಾ ರಂಗನಾಥ್ ಅವರು ಇದೀಗ 2ನೇ ಬಾರಿ ಜಯಗಳಿಸಿದ್ದಾರೆ. ಜೆಡಿಎಸ್ ಶಾಸಕ ನಂಜುಂಡಯ್ಯ ತೆಕ್ಕೆಯಲ್ಲಿದ್ದ ಕುಣಿಗಲ್ ಕ್ಷೇತ್ರದಲ್ಲಿ 2018ರಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಿ ಕೃಷ್ಣಕುಮಾರ್ ಅವರನ್ನು 5600 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ನಂಜುಂಡಯ್ಯ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಡಾ ರಂಗನಾಥ್ ಅವರು ಎರಡನೇ ಬಾರಿ ಜಯಗಳಿಸಿದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಶ್ಟೇ ಅವರನ್ನು ಬೆಂಗಳೂರಿನ ವೈದ್ಯಕೀಯ ಸಂಘದ ಆರ್ತ್ರೋಪೆಡಿಕ್ ವಿಭಾಗದಿಂದ ಸನ್ಮಾನಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.