ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!
![ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!](https://urtv24.com/wp-content/uploads/2024/06/WhatsApp-Image-2024-06-28-at-17.27.20.jpeg)
ಉಡುಪಿ : ಖಾಸಗಿ ಬಸ್ ಚಾಲಕನೊಬ್ಬನಿಗೆ ಬಸ್ ಚಾಲನೆ ವೇಳೆ ಹಠಾತ್ ಆಗಿ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಈ ವೇಳೆ ಬಸ್ ಹಿಮ್ಮುಖವಾಗಿ ಚಲಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಉಡುಪಿಯಿoದ ಪರ್ಕಳಕ್ಕೆ ತೆರಳುತ್ತಿದ್ದ ಬಸ್ ಚಾಲಕ ಕೃಷ್ಣ ನಾಯಕ್ ಕೋಕ್ಕರ್ಣೆಗೆ ಚಾಲನೆ ವೇಳೆ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರು ಬಸ್ ಸ್ಟೇರಿಂಗ್ ಬಿಟ್ಟ ಕಾರಣ ಬಸ್ ಹಿಂದೆಗೆ ಚಲುಸಿತ್ತು , ಕೂಡಲೇ ಕೆಲವು ಮಹಿಳಾ ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡ ಘಟನೆ ಸಂಭವಿಸಿದೆ.
ಸಾಧ್ಯವಾದಷ್ಟು ಬೇಗ ಬಸ್ ನಿಲ್ಲಿಸಲು ಪ್ರಯತ್ನಿಸಿದರೂ, ಬಸ್ ಹಿಂದಕ್ಕೆ ಚಲಿಸಲು ಪ್ರಾರಂಭಿಸಿತು. ಚಾಲಕ ಕೃಷ್ಣ ನಾಯಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ ಬಸ್ ನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರಿದ್ದರು, ಬಸ್ ನ ಹಿಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ.
ಸ್ನೇಹಿತನಿಗೆ ಮೊಬೈಲ್ ಸಂದೇಶ ಕಳುಹಿಸಿ ವ್ಯಕ್ತಿಯೋರ್ವ ನದಿಗೆ ಹಾರಿ ಸಾವು
ರಾವೇಣೇಶ್ವರ ಮೊಕೋಡ್ ನ ಆಜೇಶ್ ಪಾಲಕ್ಕಾಲ್ (35) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.ಮೃತದೇಹ ಇಂದು ಬೆಳಿಗ್ಗೆ ಚೆಂಬರಿಕ. ಕಲ್ಲುವಲಪ್ಪಿನ ಕಡಲ ಕಿನಾರೆ ಯಲ್ಲಿ ಪತ್ತೆ ಯಾಗಿದೆ.
ಮೂಕೋಡ್ ಕಲಾರಿಕ್ಕಾಲ್ ನಲ್ಲಿ ಪಾಲಕ್ಕಾಲ್ ಟ್ರೇಡರ್ಸ್ ಸಂಸ್ಥೆ ನಡೆಸುತ್ತಿದ್ದರು. ಗುರುವಾರ ಸಂಜೆ ಮೂರು ಗಂಟೆ ಸುಮಾರಿಗೆ ಚಂದ್ರಗಿರಿ ಹೊಳೆಯ ಸಮೀಪ ಸ್ಕೂಟರ್ ಹಾಗೂ ಮೊಬೈಲ್ ಫೋನ್ ಇಟ್ಟು ಬಳಿಕ ಹೊಳೆಗೆ ಹಾರಿದ್ದು, ಪರಿಸರ ವಾಸಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು , ಪೊಲೀಸರು ಶೋಧ ನಡೆಸಿದ್ದರು. ನದಿ ಉಕ್ಕಿ ಹರಿಯುತ್ತಿರುವುದರಿಂದ ಶೋಧ ಕಾರ್ಯ ಕ್ಕೂ ಅಡ್ಡಿ ಯಾಗಿತ್ತು.
ಈ ನಡುವೆ ಇಂದು ಬೆಳಿಗ್ಗೆ ಚೆಂಬರಿಕ ಕಿನಾರೆಯಲ್ಲಿ ಮೃತ ದೇಹ ಪತ್ತೆ ಯಾಗಿದೆ.ಮೃತದೇಹ ವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಿದೆ. ನದಿಗೆ ಹಾರುವ ಮೊದಲು ಸ್ನೇಹಿತನ ಮೊಬೈಲ್ ಗೆ ತಾನು ಚಂದ್ರಗಿರಿ ನದಿಗೆ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ನೀಡಲಾಗಿದೆ.