ಬುಧವಾರ, ಏಪ್ರಿಲ್ 24, 2024
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!-ಗುಣಮಟ್ಟದ ಉದ್ದೇಶದಿಂದ MDH ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರೀಕ್ಷೆಗೆ ಮುಂದಾದ FSSAI..!-ನಾನು ಯಾವುದೇ ಉಚ್ಛಾಟನೆಗೆ ಹೆದರುವುದಿಲ್ಲ; ಕೆಎಸ್ ಈಶ್ವರಪ್ಪ-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ.!-ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಆಗ್ರಹ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ

Twitter
Facebook
LinkedIn
WhatsApp
ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ

ಕಲಬುರಗಿ(ಡಿ.02): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಬಿಜೆಪಿಗೆ ಬೇಡವಾಗಿದೆ. ಈ ಪಕ್ಷ ಹಿಂದುಳಿದ ನೆಲದ ಪ್ರಗತಿಗೆ ಬಹುದೊಡ್ಡ ಅಡಚಣೆæಯಾಗಿದೆ ಎಂದು ದೂರಿರುವ ಎಐಸಿಸಿ ಪ್ರ. ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ ಬಿಜೆಪಿ ಕಲಂ 371 (ಜೆ) ಗೆ ತೀವ್ರ ವಿರೋಧಿಸಿತ್ತು, ಅಂದಿನ ಉಪ ಪ್ರಧಾನಿ ಎಲ್‌. ಕೆ. ಆಡ್ವಾಣಿ ಬೇಡಿಕೆ ತಿರಸ್ಕರಿಸಿದ್ರು, ಕಾಂಗ್ರೆಸ್‌ ಪಕ್ಷ ಈ ಭಾಗದ ಜನರ ಬೇಡಿಕೆ ಈಡೇರಿಸಿದೆ. ಇದೇ ಸೇಡಿನಿಂದಾಗಿ ಕಲ್ಯಾಣ ನಾಡಿನ ಪ್ರಗತಿಗೆ ಬಿಜೆಪಿ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಈ ಭಾಗದ ವಿಕಾಸಕ್ಕೆ ಸಂವಿಧಾನದ ವಿಶೇಷ ರಕ್ಷಣೆ ಕಾಂಗ್ರೆಸ್‌ ಪಕ್ಷ ನೀಡಿದೆ. ಸಂಸತ್ತಿನಲ್ಲಿ ಈ ವಿಚಾರ ಮಂಡಿಸಿ ಎಲ್ಲರ ಮನ ಗೆದ್ದಿದ್ದೇವೆ. ಈ ವಿಷಯವೇ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಒಂದಿಲ್ಲೊಂದು ರೂಪದಲ್ಲಿ ಕಲ್ಯಾಣ ನಾಡಿನ ಕಲಬುರಗಿಯಿಂದ ಹಿಡಿದು ವಿಜಯನಗರವರೆಗಿನ 7 ಜಿಲ್ಲೆಗಳ ಪ್ರಗತಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ, ಅಸಡ್ಡೆ ತೋರುತ್ತಿದೆ ಎಂದರು.

2013 ರಿಂದ ಇಲ್ಲಿಯವರೆಗೆ ಈ ಬಾಗದ 35 ರಿಂದ 36 ಸಾವಿರ ಯುವಕರು ವೈದ್ಯಕೀಯ ಪ್ರವೇಶ ಪಡೆದಿದ್ದಾರೆ, ಇಂಜಿನಿಯರಿಂಗ್‌ನಲ್ಲಿ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆದು ಶಿಕ್ಷಣ ಹೊಂದಿದ್ದಾರೆ. ಕೆಕೆಆರ್‌ಡಿಬಿ ರಚನೆಯಾಗಿದ್ದು ಸಾಕಷ್ಟುಅನುದಾನ ಬರುವಂತಾಗಿದೆ. ಕಲ್ಯಾಣದ ಭಾಗದಲ್ಲಿ ಉತಂಗಭದ್ರಾ ಅಣೆಕಟ್ಟೆ, ಕಲಬುರಗಿ ಇಎಸ್‌ಐಸಿ ಆಸ್ಪತ್ರೆ, ರಾಯಚೂರಿನ ಶಾಖೋತ್ಪನ್ನ ಕೇಂದ್ರ ಸೇರಿದಂತೆ ಅನೇಕ ಬೃಹತ್‌ ಯೋಜನೆಗಳನ್ನು ಮಾಡಿದ್ದು ಕಾಂಗ್ರೆಸ್‌ ಪಕ್ಷವೇ ಹೊರತು ಬಿಜೆಪಿಯಲ್ಲ. ಇಲ್ಲಿನ ಅನೇಕ ಯೋಜನೆಗಳನ್ನು ಬಿಜೆಪಿ ಕಿತ್ತುಕೊಂಡು ಹೋಗಿದೆ. ಅದೇ ಆ ಪಕ್ಷದ ಸಾಧನೆ ಎಂದು ಗೇಲಿ ಮಾಡಿದರು.

ಕಲಂ 71 (ಜೆ) ಮೀಸಲು ನೀತಿಯಂತೆ ಇಂದಿಗೂ ಬಿಜೆಪಿ ಸರ್ಕಾರ ನಿಯಮಗಳ ಅನುಷ್ಠಾನಕ್ಕೆ ಮನಸ್ಸು ಮಾಡಿಲ್ಲ, ಸರ್ಕಾರಿ ಹುದ್ದೆ ಭರ್ತಿ ಮಾಡುತ್ತಿಲ್ಲ. ನೀರಾವರಿ ಯೋಜನೆಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಹಿಂದುಳಿದ ನೆಲ, ಬಡವರ ಪ್ರತಿ ಬಿಜೆಪಿಗೆ ಅಸಡ್ಡೆ ಇದೆ ಎಂದು ತಿವಿದರು. ಕಲ್ಯಾಣ ನಾಡಿನ ಜನತೆಗೆ ಈಗ ಅರಿವಾಗಿದೆ. ಬಿಜೆಪಿ ವಿಶ್ವಾಸಘಾತ ಮಾಡಿರೋದು ಅನುಭವಕ್ಕೆ ಬಂದಿದೆ. ಬರೋ ಚುನಾವಣೆಯಲ್ಲಿ ಅದೇ ಮತಾಸ್ತ್ರದಿಂದ ಜನತೆ ಕಲ್ಯಾಣ ನಾಡಿನಿಂದ ಬಿಜೆಪಿಯನ್ನು ಕಿತ್ತು ಎಸೆಯಲಿದ್ದಾರೆಂದರು.

10ರಂದು ಕಲ್ಯಾಣ ಕ್ರಾಂತಿ:

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮಾತನಾಡುತ್ತ ಡಿ. 10 ಕ್ಕೆ ಕಲಬುರಗಿಯಲ್ಲಿ ಕಾಂಗ್ರೆಸ್‌ ಪಕ್ಷ ಕಲ್ಯಾಣ ನಾಡಿನ ಸಮಾವೇಶ ಹಮ್ಮಿಕೊಂಡಿದೆ. ಇದು ಈ ಬಾಗದಲ್ಲಿ ಪಕ್ಷದ ಸಂಘಟನೆ, ಶಕ್ತಿ ಹೆಚ್ಚಿಸಲಿದೆ ಎಂದರು. ಡಾ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈ ಭಾಗದ ಸಾಮಾನ್ಯ ಕಾರ್ಯಕರ್ತ ದೇಶದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರೋದು ದೊಡ್ಡ ಸಾಧನೆ, ಅವರ ಕಲಬುರಗಿ ಬೇಟಿಯನ್ನೇ ಕಾಂಗ್ರೆಸ್‌ ಪಕ್ಷದ ಕಲ್ಯಾಣ ಕ್ರಾಂತಿ ಸಮಾವೇಶ ರೂಪದಲ್ಲಿ ಸಂಘಟಿಸಲಾಗುತ್ತಿದೆ ಎಂದರು. ಕೆಪಿಸಿಸಿ ಪ್ರಚಾರ ಸಮೀತಿಯ ಎಂಬಿ ಪಾಟೀಲ್‌, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್‌, ಶಾಸಕ ಎಂವೈ ಪಾಟೀಲ್‌, ಡಾ. ಅಜಯ್‌ ಸಿಂಗ್‌, ಅಲ್ಲಂಪ್ರಭು ಪಾಟೀಲ್‌ ಇದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ