ಶುಕ್ರವಾರ, ಏಪ್ರಿಲ್ 19, 2024
ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಒಂಟಿ ಸಲಗ ದಾಳಿ, ಮಹಿಳೆ ಸ್ಥಳದಲ್ಲಿಯೇ ಸಾವು

Twitter
Facebook
LinkedIn
WhatsApp
Its difficult to look away from MalaikaArora in Hanas green sheer dress in Aap Jesa Koi song from film Action Hero 5 4

ಹೇಳಿ ಕೇಳಿ ಅದು ಒಂಟಿ ಸಲಗ ತಿರುಗಾಡೋ ಜಾಗ,‌ ಆದ್ರೂ ಆ ತಾಯಿ ತನ್ನ ಮಗನಿಗೆ ಹಸಿವಾಗಿದೆ ಅಂತ ಊಟ ಕೊಡಲು ಹೊರಟೇ ಬಿಟ್ಳು,‌ ಇನ್ನೇನು ಮಗನಿಗೆ ಬುತ್ತಿ ಕೈ ಸೇರಬೇಕು,‌ ಅದಕ್ಕೂ ಮಂಚೆ ಆ ತಾಯಿ ಕಾಡಾನೆ ದಾಳಿಗೆ (Wild Elephant Attack) ಸಿಲುಕಿ ದುರ್ಮಣಕ್ಕಿಡಾಗಿದ್ದಾಳೆ. ಹೌದು, ಇಂತಹ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (Bannerghatta National Park) ಸಮೀಪ ಇರುವ ಈ ಹಳ್ಳಿಗೆ ಮೊದಲಿ‌ನಿಂದಲೂ ಚಿರತೆ, ಹುಲಿ, ಆನೆಗಳ ಕಾಟ ಇದ್ದಿದ್ದೇ. ಆದರೆ ಕಾಡು ಪ್ರಾಣಿಗಳಿಂದ ಅಷ್ಟಾಗಿ ಸಾವು ನೋವು ಸಂಭವಿಸಿರಲಿಲ್ಲ, ಕೆಲ ದಿನಗಳ‌‌ ಹಿಂದೆ ಕಾಣಿಸಿಕೊಂಡಿರುವ ಒಂಟಿ ಸಲಗ ಹಲವಾರು ಬಾರಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿದೆ.‌ ಮಗನಿಗಾಗಿ ಬುತ್ತಿ ಕೊಡಲು ಹೊರಟಿದ್ದ 48 ವರ್ಷದ ನಾಗಮ್ಮ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾಳೆ. ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ (Death) ತನ್ನ ತಾಯಿಯ (Mother) ಸ್ಥಿತಿ ನೋಡಿ ಮಗನ ಆಕ್ರಂದನ ಮುಗಿಲು ಮುಟ್ಟಿತ್ತು.

ಕೆಲ ದಿನಗಳ ಹಿಂದಷ್ಟೇ ವಾಕಿಂಗ್ ಮಾಡಲು ತೆರಳಿದ್ದವರ ಮೇಲೆ ಅಟ್ಯಾಕ್ ಮಾಡಿದ್ದ ಈ ಒಂಟಿ ಸಲಗ ಅವರನ್ನು ತನ್ನ ಕಾಲ ಕೆಳಗೆ ತುಳಿಯಲು ಹವಣಿಸಿತ್ತು. ಹೀಗಾಗಿ ಹಳ್ಳಿಗರು ಸಂಜೆಯಾದರೇ ಸಾಕು ಹೊರ ಬರುತ್ತಿರಲಿಲ್ಲ, ಹಾಗೆಯೇ ಒಂಟಿಯಾಗಿ ಓಡಾಡಲೂ ಹೆದರುತ್ತಿದ್ರು, ಇದರ ಮಧ್ಯೆ ನಾಗಮ್ಮ ಅದ್ಯಾವುದನ್ನೂ ಲೆಕ್ಕಿಸದೇ ತನ್ನ ಮಗನಿಗೆ ಹಸಿವಾಗಿದೆ, ಬೇಗ ಟಿಫೀನ್ ಕೊಡಬೇಕು ಅಂತ ಹೊರಟಿದ್ದಾಳೆ.

ಧರಣಿ ಮಂಡಲ ಮಧ್ಯದೊಳಗೆ ಒಂದು ಬಿನ್ನಹ… ಒಂದು ನಿಮಿಷದಿ ತುತ್ತು ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ ಎಂದರೂ ಕೇಳಲಿಲ್ಲ ಗಜರಾಜ!

ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಹಿಂಭಾಗ ಹೋಗುತ್ತಿದ್ದಂತೆ ಗಿಡ ಮರಗಳ ಮಧ್ಯೆಯಿಂದ ಬಂದ ಕಾಡಾನೆ ಸೊಂಡಿಲಿನಿಂದ ಅಟ್ಯಾಕ್ ಮಾಡಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಹಳ ಹೊತ್ತಾದ್ರೂ ತಾಯಿ ಬರಲಿಲ್ಲ ಅಂತ ಹುಡುಕುತ್ತಿದ್ದ ಕುಟುಂಬಸ್ಥರಿಗೆ ಕಾಡಿನ‌ ಸಮೀಪ ನಾಗಮ್ಮ ಶವ ಸಿಕ್ಕಾಗ ನಡೆದಿರುವ ಘಟನೆ ಗೊತ್ತಾಗಿದೆ.

ಘಟನೆ ಬಳಿಕ ಗ್ರಾಮಸ್ಥರೆಲ್ಲರೂ ಬನ್ನೇರುಘಟ್ಟ ಅರಣ್ಯಾಧಿಕಾರಿಗಳ‌ ಕಚೇರಿಗೆ‌ ಮುತ್ತಿಗೆ ಹಾಕಿದ್ದಾರೆ. ಪ್ರಾಣಿಗಳಿಂದಾಗಿ ಜನರ ಪ್ರಾಣ ಹೋಗ್ತಾ ಇದ್ರೂ ಅಧಿಕಾರಿಗಳು ಯಾಕೆ ತಲೆ ಕೆಡಿಸಿಕೊಳ್ತಿಲ್ಲ, ಇನ್ನೆಷ್ಟು ಗ್ರಾಮಸ್ಥರ ಪ್ರಾಣಗಳು ಹೋಗಬೇಕು ಅಂತ ಪ್ರಶ್ನೆ ಮಾಡಿ, ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಒಪ್ಪಿಕೊಂಡಿರುವ ಬನ್ನೇರುಘಟ್ಟ ಪಾರ್ಕ್ ಆಡಳಿತ ಮಂಡಳಿ 15 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ. ಸದ್ಯ ಪ್ರಕರಣ‌ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು, ಕಾಡಾನೆ ಸ್ತಳಾಂತರಕ್ಕೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ