ಇಂದು ಮಡಂತ್ಯಾರು ವರ್ತಕ ಬಂಧು ಸಹಕಾರ ಸಂಘದ ಉದ್ಘಾಟನೆ
ಮಡಂತ್ಯಾರು: ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ (ರಿ.) ಮಡಂತ್ಯಾರು-ಪುಂಜಾಲಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ವರ್ತಕ ಬಂಧು ಸಹಕಾರ ಸಂಘವು ವರ್ತಕರಿಂದ ವರ್ತಕರಿಗಾಗಿ ವರ್ತಕರಿಗೋಸ್ಕರ ವರ್ತಕರೇ ಪ್ರವರ್ತಿಸಲ್ಪಡುವ ಮಡಂತ್ಯಾರು ವರ್ತಕ ಬಂದು ಸಹಕಾರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಇದರ ಉದ್ಘಾಟನಾ ಸಮಾರಂಭವು ಇಂದು ನಡೆಯಲಿದೆ.ಕಳೆದ 6 ವರ್ಷಗಳ ಹಿಂದೆ ಸಮಾನ ಮನಸ್ಕರು ಒಂದಾಗಿ ಒಟ್ಟು ಸೇರಿ ಮಡಂತ್ಯಾರು ಪುಂಜಾಲಕಟ್ಟಿ ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘವು ಅಸ್ತಿತ್ವಕ್ಕೆ ಬಂದಿತ್ತು.
ಇದರ ಅಧ್ಯಕ್ಷರಾಗಿ ಜಯಂತ ಶೆಟ್ಟಿ, ಕಾರ್ಯದರ್ಶಿಯಾಗಿ ತುಳಸಿದಾಸ್ ಪೈ ಹಾಗೂ ಹೆಚ್ಚಿನ ಎಲ್ಲಾ ವರ್ತಕರು ಇದರ ಸದಸ್ಯರಾಗಿ ಸಮಾಜಮುಖಿ ಕಾರ್ಯಕ್ರಮದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ವಶಕರಿಗೆ ಮತ್ತು ಸಮಾಜಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವನ್ನು ಹೊಂದಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಸಂಘದಲ್ಲಿ ಅಸೌಖ್ಯದಿಂದ ಮರಣ ಹೊಂದಿದ ಸಂಘದ ಸದಸ್ಯರ ಮನೆಯವರಿಗೆ ರೂ.10 ಸಾವುರ ಆರ್ಥಿಕ ನೆರವು ಮಡಂತ್ಯಾರು ಪಾಂಡವರಕಲ್ಲು ರಸ್ತೆ ಕಾಮಗಾರಿ ಖಾಸಗಿ ಪಟ್ಟಿಯುಗದಲ್ಲಿದ್ದು ಅವರಿಗೆ ರೂ.50 ಸಾವಿರ ಪರಿಹಾರ ವಿತರಣೆ, ಪುಂಜಾಲಕಟ್ಟೆ ಮಡಂತ್ಯಾರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ವರ್ತಕರ ಸಂಘದ ಸದಸ್ಯರಿಗೆ ಸೇರಿದ ಜಾಗದ ಸರ್ವೆ ಮತ್ತು ಪರಿಹಾರ ವಿತರಣೆಗೆ ಸಹಕಾರ ನೀಡುವ ಭರವಸೆ ಮಡಂತ್ಯಾರಿನ ಪೇಟೆಯಲ್ಲಿ ಸಾರ್ವಜನಿಕರಿಗೆ ಬಹಳಷ್ಟು ಉಪಯೋಗವಾಗುವ ಶಾಶ್ವತ ಬಸ್ಸು ತಂಗುದಾಣ ನಿರ್ಮಿಸಿದ್ದು ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟಿದೆ. ಇದರೊಂದಿಗೆ ತಮ್ಮದೇ ಆದ ಒಂದು ಸಹಕಾರಿ ಸಂಘ ಸ್ಥಾಪನೆ ಮಾಡುವ ಕನಸ್ಸನವಾಗುವ ಸುಸಂದರ್ಭವಿದು ಈ ಸಂಘಕ್ಕೆ 17 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿರುತ್ತಾರೆ. ಈ ಸರ ಸಹಕಾರಿ ಸಂಘಗಳ ಇಲಾಖೆಯ ನಿಬಂಧನೆಗೊಳ್ಳಪಟ್ಟು ಸವವು ನೋಂದಾವಣೆ ಆಗಿರುತ್ತದೆ.
ಅಧ್ಯಕ್ಷರಾಗಿ ಜಯಂತ್ ಶೆಟ್ಟಿ, ಉಪಾಧ್ಯಕ್ಷರಾಗಿ ಯೋಗಿಶ್ ಕುಮಾರ್ ಕಡ್ತಿಲ, ನಿರ್ದೇಶಕರುಗಳಾಗಿ ವಿಜಯಚಂದ್ರ ಮಾಲಾಡಿ, ಉದಯಕುಮಾರ್ ಜೈನ್, ಕಾಂತಪ್ಪ ಗೌಡ, ಗಿರೀಶ್ ಪೈ, ಪ್ರಶಾಂತ್ ಶೆಟ್ಟಿ, ತುಳಸಿದಾಸ್ ಪೈ, ಯಶೋಧರ ಬಂಗೇರ, ಕಿಶೋರ್ ಶೆಟ್ಟಿ, ವಿನೋದ್ ಬಾಳಿಗ, ಹೈದರ್ ಬಿ., ಅಶೋಕ್ ಹೆಚ್, ಗೋಪಾಲಕೃಷ್ಣ ಕೆ., ಡಿಗ್ನ ಮೊರಾಸ್, ಅಮಿತಾ ಲೋಬೊ, ತೆಲ್ಮಾ ಮಾಡ್ತಾರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.