ಗುರುವಾರ, ಮಾರ್ಚ್ 28, 2024
ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ-ಓವೈಸಿ ವಿರುದ್ದ ಸಾನಿಯಾ ಮಿರ್ಜಾಗೆ ಟಿಕೆಟ್? ಏನಿದು ಕಾಂಗ್ರೆಸ್ ಪ್ಲ್ಯಾನ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್

Twitter
Facebook
LinkedIn
WhatsApp
ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್

ಬೆಂಗ​ಳೂ​ರು(ಫೆ.08): 2022-23ರ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಹಣಾ​ಹ​ಣಿಗೆ ವೇದಿಕೆ ಸಜ್ಜು​ಗೊಂಡಿದ್ದು, 8 ಬಾರಿ ಚಾಂಪಿಯನ್‌ ಕರ್ನಾಟಕ ಬುಧವಾರದಿಂದ ಬದ್ಧ​ವೈರಿ ಸೌರಾಷ್ಟ್ರ ವಿರುದ್ಧ ಕಾದಾ​ಡ​ಲಿದೆ. ಪಂದ್ಯಕ್ಕೆ ಚಿನ್ನ​ಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿದೆ. ಅಂಕಿ-ಅಂಶ​ಗಳ ಆಧಾ​ರ​ದಲ್ಲಿ ರಾಜ್ಯದ ವಿರುದ್ಧ ಸೌರಾಷ್ಟ್ರ ಉತ್ತಮ ದಾಖಲೆ ಹೊಂದಿ​ದ್ದರೂ ಕರ್ನಾ​ಟಕ ತವ​ರಿನ ಅಂಗಳದ ಲಾಭ​ವೆ​ತ್ತುವ ನಿರೀ​ಕ್ಷೆ​ಯ​ಲ್ಲಿದೆ. ಕಳೆದ ವರ್ಷ ಕ್ವಾರ್ಟರ್‌ನಲ್ಲೇ ಮುಗ್ಗ​ರಿ​ಸಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ತವ​ಕ​ದ​ಲ್ಲಿ​ದ್ದು, ಸೌರಾಷ್ಟ್ರ 2019-20ರ ಬಳಿಕ ಮತ್ತೊಮ್ಮೆ ಫೈನ​ಲ್‌​ಗೇ​ರಲು ಕಾಯು​ತ್ತಿ​ದೆ.

ಎಲೈಟ್‌ ‘ಸಿ’ ಗುಂಪಿ​ನಿಂದ ಅಗ್ರಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿದ್ದ ರಾಜ್ಯ ತಂಡ ಕ್ವಾರ್ಟರ್‌ನಲ್ಲಿ ಉತ್ತ​ರಾ​ಖಂಡ​ವನ್ನು ಸೋಲಿ​ಸಿತ್ತು. ಮತ್ತೊಂದೆಡೆ ಸೌರಾ​ಷ್ಟ್ರ ಅಂತಿಮ 8ರ ಘಟ್ಟ​ದಲ್ಲಿ ಪಂಜಾಬ್‌ ವಿರುದ್ಧ ಜಯಿ​ಸಿ​ತ್ತು. ರಾಜ್ಯ ತಂಡ ಎಲ್ಲಾ ವಿಭಾ​ಗ​ಗ​ಳಲ್ಲೂ ಬಲಿ​ಷ್ಠ​ವಾಗಿ ತೋ​ರು​ತ್ತಿದ್ದು, ನಾಯಕ ಮಯಾಂಕ್‌, ಆರ್‌.ಸಮರ್ಥ್ ತಂಡದ ಬ್ಯಾಟಿಂಗ್‌ ಬಲ. 8 ಪಂದ್ಯ​ಗ​ಳಲ್ಲಿ ಮಯಾಂಕ್‌ 686, ಸಮರ್ಥ್ 659 ರನ್‌ ಕಲೆ​ಹಾ​ಕಿದ್ದಾರೆ. ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ನಿಕಿನ್‌ ಜೋಸ್‌ ಕೂಡಾ ಲಯದಲ್ಲಿದ್ದು, ಲಯ ಕಂಡುಕೊಳ್ಳುತ್ತಿದ್ದ ಬಿ.ಆರ್‌.ಶರತ್‌ ಅನಾರೋಗ್ಯದ ಕಾರಣ ಹೊರಬಿದ್ದಿದ್ದು ಅವರ ಬದಲು ತಂಡಕ್ಕೆ ಸೇರ್ಪ​ಡೆ​ಗೊಂಡಿ​ರುವ ನಿಹಾಲ್‌ ಉಳ್ಳಾಲ ಅವ​ಕಾ​ಶದ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ತಮ್ಮ ನೈಜ ಆಟ ಪ್ರದರ್ಶಿಸಿದರೆ ಕರ್ನಾಟಕವನ್ನು ಕಟ್ಟಿಹಾಕಲು ಸೌರಾಷ್ಟ್ರಕ್ಕೆ ಕಷ್ಟವಾಗಬಹುದು. ಪ್ರಸಿದ್‌್ಧ ಕೃಷ್ಣ, ರೋನಿತ್‌ ಮೋರೆ ಅನು​ಪ​ಸ್ಥಿ​ತಿ​ಯಲ್ಲೂ ವೇಗಿ​ಗ​ಳಾದ ವಿದ್ವತ್‌ ಕಾವೇರಪ್ಪ, ವೈಶಾಖ್‌, ವಾಸುಕಿ ಕೌಶಿ​ಕ್‌ ಹಾಗೂ ಪಾದಾ​ರ್ಪಣೆ ಪಂದ್ಯದಲ್ಲೇ 5 ವಿಕೆಟ್‌ ಗೊಂಚಲು ಪಡೆ​ದಿದ್ದ ವೆಂಕ​ಟೇಶ್‌ ಮತ್ತೊಮ್ಮೆ ಎದು​ರಾಳಿ ಬ್ಯಾಟ​ರ್‌​ಗ​ಳನ್ನು ಕಾಡಲು ಸಜ್ಜಾ​ಗಿ​ದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ